Rana Vikrama heroine Anjali statement: ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಪ್ರೊಡ್ಯೂಸ್ ಮಾಡುವ ಹಾಗೂ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳನ್ನು ನೀಡುವ ಚಿತ್ರರಂಗಗಳಲ್ಲಿ ಮುಂಚೂಣಿ ಸ್ಥಾನದಲ್ಲಿ ತೆಲುಗು ಚಿತ್ರರಂಗದ ಟಾಲಿವುಡ್(Tollywood) ನಿಲ್ಲುತ್ತದೆ. ಬಾಹುಬಲಿ ಸರಣಿ ಬಿಡುಗಡೆ ಆದ ನಂತರ ತೆಲುಗು ಚಿತ್ರರಂಗ ಇಡೀ ಭಾರತೀಯ ಚಿತ್ರರಂಗದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ತೆಲುಗು ಚಿತ್ರರಂಗದ ಕುರಿತಂತೆ ಯಾರಿಗೂ ಗೊತ್ತಿಲ್ಲದ ಕೆಲವೊಂದು ವಿಚಾರಗಳಿವೆ.
ಸಿನಿಮಾರಂಗ(Film Industry) ಸಾಕಷ್ಟು ಬಣ್ಣಗಳಿಂದ ಕೂಡಿರುತ್ತದೆ ಹೀಗಾಗಿ ಇಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಸಾಕಷ್ಟು ಪರಿಶ್ರಮವನ್ನು ಪಟ್ಟು ಅವಮಾನಗಳನ್ನು ಸಹಿಸಿಕೊಂಡು ಇಲ್ಲಿ ನಂತರ ನೇಮ್ ಹಾಗೂ ಫೇಮ್(Fame) ಗಳನ್ನು ಪಡೆದುಕೊಳ್ಳುತ್ತಾರೆ. ಇನ್ನು ಇದರ ಬಗ್ಗೆ ಮಾತನಾಡುತ್ತಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ರಣವಿಕ್ರಮ ಸಿನಿಮಾದಲ್ಲಿ ನಟಿಸಿರುವ ನಟಿ ಅಂಜಲಿ ಅವರು ಹೇಳಿದ್ದೇನು ಗೊತ್ತಾ ಬನ್ನಿ ತಿಳಿದುಕೊಳ್ಳೋಣ.
ಒಬ್ಬ ನಟಿ ಅಂದಮೇಲೆ ಎಲ್ಲಾ ತರಹದ ದೃಶ್ಯಗಳಲ್ಲಿ(Scenes) ಹಾಗೂ ಸಿನಿಮಾಗಳಲ್ಲಿ ನಟಿಸಲು ಸಿದ್ಧವಿರಬೇಕು ಎಂಬುದಾಗಿ ಹೇಳುತ್ತಾ ನಟಿ ಅಂಜಲಿ ಅವರು ಶೃಂಗಾರಮಯ ದೃಶ್ಯದ ಚಿತ್ರೀಕರಣದ ಕುರಿತಂತೆ ತಮಗಾದಂತಹ ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ. ಹೌದು ಮಿತ್ರರೇ ಕಥೆಯನ್ನು ಹೇಳುವಾಗ ನಿರ್ದೇಶಕರು ಅಂತಹ ಎರಡು ದೃಶ್ಯಗಳಲ್ಲಿ ನೀವು ನಟಿಸಿದರೆ ಚೆನ್ನಾಗಿರುತ್ತದೆ ಎಂಬುದಾಗಿ ಹೇಳುತ್ತಾರೆ ಅದನ್ನು ತಿರಸ್ಕರಿಸಲು ಕೂಡ ಸಾಧ್ಯವಿರುವುದಿಲ್ಲ. ಹೀಗಾಗಿ ಇಷ್ಟವಿಲ್ಲದಿದ್ದರೂ ಕೂಡ ಅಂತಹ ದೃಶ್ಯಗಳಲ್ಲಿ ನಟಿಸಲೇ ಬೇಕಾಗುತ್ತದೆ.
ಇದನೊಮ್ಮೆ ಓದಿ..Actor Prabhas: ಮನೆಯನ್ನು ಅಡವಿಟ್ಟು ಪ್ರಭಾಸ್ 21 ಕೋಟಿ ಸಾಲ ತೆಗೆದುಕೊಂಡಿದ್ದು ಏಕೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಹಾನಿ.
ಚಿತ್ರೀಕರಣದ ಸಂದರ್ಭದಲ್ಲಿ ಹೀರೋ ಡೈರೆಕ್ಟರ್, ಕ್ಯಾಮೆರಾ ಮ್ಯಾನ್(Cameraman) ಸೇರಿದಂತೆ ಕಡಿಮೆ ಎಂದರು 15 ಜನರು ಇದ್ದೇ ಇರುತ್ತಾರೆ. ಅಂತಹ ದೃಶ್ಯವನ್ನು ಒಬ್ಬ ಹೆಣ್ಣು ಮಗಳಾಗಿ ಅಷ್ಟು ಜನರ ಮುಂದೆ ಚಿತ್ರೀಕರಿಸುವುದು ನಿಜಕ್ಕೂ ಕೂಡ ಕಷ್ಟದ ಹಾಗೂ ಬೇಸರ ತರಿಸುವಂತಹ ವಿಚಾರ. ಇಷ್ಟವಿಲ್ಲ ಎಂದರೂ ಕೂಡ ಅಂತಹ ದೃಶ್ಯಗಳಲ್ಲಿ ನಟಿಸಿದ ಮೇಲೆ ಕ್ಯಾರವನಿಗೆ ಬಂದು ಅತ್ತಿದ್ದು ಕೂಡ ತುಂಬಾ ಸಲ ಇದೆ ಎಂಬುದಾಗಿ ನಟಿ ಅಂಜಲಿ ಹೇಳಿಕೊಂಡಿದ್ದಾರೆ. ನಟಿ ಅಂಜಲಿ ಅವರ ಹೇಳಿಕೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.