ನನ್ನ ಸಿನೆಮಾಗೆ ಯಶ್ ಅವರನ್ನು ಹಾಕಿಕೊಳ್ಳುವುದಿಲ್ಲ ಎಂದು ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತಾ?

Kumar govind about yash : ಇಂದು ರಾಕಿಂಗ್ ಸ್ಟಾರ್ ಯಶ್ (yash kgf) ಅಂದ್ರೆ ಗೊತ್ತಿಲ್ದೆ ಇರುವವರೇ ಇಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೆ ಇತರ ಭಾಷೆಯಲ್ಲಿಯೂ ಕೂಡ ರಾಕಿ ಬಾಯ್ ಹವಾ ಜೋರಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಯಶಸ್ಸನ್ನ ಕಂಡಿದ್ದ ಯಶ್ ಅವರು ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಯಶ್ ಅವರಿಗೆ ದೊಡ್ಡ ಯಶಸ್ಸನ ತಂದುಕೊಟ್ಟ ಸಿನಿಮಾ ಕೆಜಿಎಫ್.

ಸತತ ಐದಾರು ವರ್ಷ ಕೆ ಜಿ ಎಫ್ ಸಿನಿಮಾ ಸರಣಿಗಾಗಿ ಸಾಕಷ್ಟು ಡೆಡಿಕೇಟೆಡ್ ಆಗಿ ಅವರ ಒಂದು ಪರಿಶ್ರಮ ಅವರ ಪ್ರತಿಭೆ ಇಂದು ಜಗತ್ತಿನಾದ್ಯಂತ ಗುರುತಿಸಿಕೊಳ್ಳುವ ಮಟ್ಟಕ್ಕೆ ಅವರನ್ನು ಬೆಳೆಸಿದೆ. ಯಶ್ ಅವರು ಕೂಡ ರಾತ್ರಿ ಬೆಳಗಾಗುವುದರ ಒಳಗೆ ಸ್ಟಾರ್ ನಟ ಎನಿಸಿಕೊಂಡವರಲ್ಲ. ಈ ಹಂತಕ್ಕೆ ಬರಲು ಅವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ.

ಮೊದಲು ಧಾರಾವಾಹಿಗಳಲ್ಲಿ ನಟಿಸಿ ನಂತರ ಬೆಳ್ಳಿತರೆಗೆ ಬಂದವರು ಯಶ್. ಯಶ್ ಅವರು ಸಾಕಷ್ಟು ಕಡೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿ ಸೋತಿದ್ದು ಇದೆ. ಕೆಲವು ಕಡೆ ರಿಜೆಕ್ಟ್ ಆಗಿದ್ದು ಇದೆ. ಆದರೆ ಇವೆಲ್ಲ ಒಂದು ಹಂತ ಅಷ್ಟೇ. ಇಂದು ಯಶ್ ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕಾಯುತ್ತಿರುತ್ತಾರೆ.

ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ನಟ ಕುಮಾರ್ ಗೋವಿಂದ ಅವರದ್ದು ಕೂಡ ದೊಡ್ಡ ಹೆಸರು. ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಕುಮರ್ ಗೋವಿಂದ್, ತಮ್ಮ ನಿರ್ಡೇಶನದ ಸಿನಿಮಾಕ್ಕೆ ಯಶ್ ಅವರನ್ನು ರಿಜೆಕ್ಟ್ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಕುಮಾರ್ ಗೋವಿಂದ ಜನುಮದ ಜೋಡಿ ಸಿನಿಮಾದ ಸಮಯದಲ್ಲಿ ಸ್ಟಾರ್ ನಟ ಆಗಿದ್ದವರು. ಆಗ ಅವರ ಬೇಡಿಕೆ ಸಾಕಷ್ಟು ಇತ್ತು. ಹಲವಾರು ಬ್ಯಾಂಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕುಮಾರ ಗೋವಿಂದ್ ಅಭಿನಯಿಸುತ್ತಿದ್ದರು. ಆ ಸಮಯದಲ್ಲಿ ತಾವು ನಿರ್ದೇಶನಕ್ಕೆ ಇಳಿದ ಒಂದು ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ ಕುಮಾರ್ ಗೋವಿಂದ.

Kumar govind about yash
Kumar govind about yash

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಲಹೆಯಂತೆ ನಿರ್ದೇಶನ ಮಾಡುವುದಕ್ಕೂ ಕೂಡ ಕುಮಾರ್ ಗೋವಿಂದ್ ಮುಂದಾಗುತ್ತಾರೆ. ಅದೇ ರೀತಿ ಸತ್ಯ ಎನ್ನುವಂತಹ ಒಂದು ಸಿನಿಮಾದ ಕಥೆಯನ್ನು ರೆಡಿ ಮಾಡಿಕೊಳ್ಳುತ್ತಾರೆ. ಕಲಾವಿದರನ್ನು ನೇಮಿಸಿಕೊಳ್ಳುತ್ತಿರುವಾಗ ಯಶ್ ಕೂಡ ಅವರ ಬಳಿ ಆಡಿಶನ್ ಗೆ ಹೋಗುತ್ತಾರೆ. ಕುಮಾರ್ ಗೋವಿಂದ ಅವರ ಕಥೆಗೆ ಒಬ್ಬ ಉದ್ದವಾದ ತೆಳ್ಳಗಿರುವ ಕಲಾವಿದ ಬೇಕಿರುತ್ತೆ, ಹೊಸ ಕಲಾವಿದನೊಬ್ಬನನ್ನ ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರು ಆಯ್ಕೆ ಮಾಡಿಕೊಂಡು ನಂತರ ಅವರ ಸ್ನೇಹಿತ ಯಶ್ ಅವರನ್ನು ಕರೆದುಕೊಂಡು ಬರುತ್ತಾರೆ.

ರಶ್ಮಿಕಾ ಮಂದಣ್ಣ ಬ್ಯಾನ್ ಕುರಿತಂತೆ ಶಿವಣ್ಣ ಹೇಳಿದ್ದೇನು ಗೊತ್ತಾ?

ತಮ್ಮ ಸಿನಿಮಾಕ್ಕೆ ಯಶ್ ಕೂಡ ಸೂಟ್ ಆಗುತ್ತಾರೆ ಎನ್ನುವುದು ಆಗಲೇ ಕುಮಾರ್ ಗೋವಿಂದ ಅವರಿಗೆ ಅರಿವಾಗುತ್ತೆ. ಆದರೆ ಅವರು ಅದಕ್ಕಿಂತ ಮೊದಲೇ ಇನ್ನೊಬ್ಬರಿಗೆ ಸಿನಿಮಾ ನಟನಿಗೆ ಚಾನ್ಸ್ ನೀಡಿ ಅಡ್ವಾನ್ಸ್ ಕೂಡ ಕೊಟ್ಟಿದ್ದರು. ಹಾಗಾಗಿ ಯಶ್ ಅವರನ್ನು ತಮ್ಮ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಡುವುದಕ್ಕೆ ಸಾಧ್ಯವಾಗುವುದಿಲ್ಲ.
ಆದರೆ ಯಶ್ ಅವರನ್ನು ನೋಡಿ ಕುಮಾರ್ ಗೋವಿಂದ ನಕ್ಕು ನೀನು ತುಂಬಾ ಸ್ಮಾರ್ಟ್ ಆಗಿದ್ದೀಯಾ ಒಳ್ಳೆಯದಾಗುತ್ತೆ…

ಎಂದು ಖುಷಿಯಿಂದಲೇ ಆಶೀರ್ವಾದ ಮಾಡಿ ಕಳುಹಿಸಿಕೊಟ್ಟಿದ್ದರಂತೆ. ಹೀಗೆ ಹಲವರ ಆಶೀರ್ವಾದ ಹಾಗೂ ತಮ್ಮ ಪ್ರತಿಭೆಯಿಂದ ಇಂದು ಎಲ್ಲರೂ ಗುರುತಿಸುವ ಮಟ್ಟದಲ್ಲಿ ಒಬ್ಬ ಸ್ಟಾರ್ ನಟ ಆಗಿ ಬೆಳೆದು ನಿಂತಿದ್ದಾರೆ ಯಶ್. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!