ರಶ್ಮಿಕಾ ಮಂದಣ್ಣ ಬ್ಯಾನ್ ಕುರಿತಂತೆ ಶಿವಣ್ಣ ಹೇಳಿದ್ದೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಪ್ರೇಕ್ಷಕರು ರಶ್ಮಿಕಾ ಮಂದಣ್ಣ ಅವರನ್ನು ನೋಡಿದರೆ ಖಂಡಿತವಾಗಿ ಯಾವ ರೀತಿಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ ಎಂಬುದನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿಯೇ ನೋಡಿರುತ್ತೀರಿ. ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ ಸಿನಿಮಾದಿಂದಲೇ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ ರಶ್ಮಿಕ ಮಂದಣ್ಣ ಅದೇ ಸಿನಿಮಾದ ಮೂಲಕವೇ ಎಲ್ಲರಿಗೂ ಪರಿಚಿತರಾಗುತ್ತಾರೆ. ಹೇಗಿದ್ದರೂ ಕೂಡ ಇತ್ತೀಚಿಗಷ್ಟೇ ನಡೆದ ಹಿಂದಿ ಸಂದರ್ಶನ ಒಂದರಲ್ಲಿ ಈ ಚಿತ್ರದ ಹಾಗೂ ಚಿತ್ರತಂಡದ ಬಗ್ಗೆ ನಿರ್ಲಕ್ಷವಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

ಕೇವಲ ಇದೊಂದೇ ವಿಚಾರದಲ್ಲಿ ಮಾತ್ರವಲ್ಲದೆ ಕನ್ನಡ ಭಾಷೆ ಕೂಡ ತನಗೆ ತಿಳಿದಿಲ್ಲ ಎನ್ನುವಂತೆ ಪ್ರತಿ ಸಂದರ್ಶನದಲ್ಲಿ ಆಡುತ್ತಾರೆ. ಆಯಾಯ ಭಾಷೆಗೆ ಹೋದಾಗ ಅಂದರೆ ತಮಿಳಿಗೆ ಹೋದಾಗ ತಮಿಳಿನಲ್ಲಿ ತೆಲುಗಿ ಗೆ ಹೋದಾಗ ತೆಲುಗಿನಲ್ಲಿ ಇಂದಿಗೆ ಹೋದಾಗ ಹಿಂದಿಯಲ್ಲಿ ಸ್ಪಷ್ಟವಾಗಿ ಮಾತನಾಡುತ್ತಾರೆ.

ಆದರೆ ಕನ್ನಡ ಅಥವಾ ಕರ್ನಾಟಕಕ್ಕೆ ಬಂದಾಗ ಮಾತ್ರ ಹೆಚ್ಚಾಗಿ ಇಂಗ್ಲಿಷ್ ಅನ್ನೇ ಬಳಸುತ್ತಾರೆ ಹಾಗೂ ಕನ್ನಡ ತನಗೆ ಅಲ್ಪಸ್ವಲ್ಪ ತಿಳಿದಿದೆ ಎನ್ನುವ ಹಾಗೆ ಮಾತನಾಡುತ್ತಾರೆ. ಇನ್ನು ಬೇರೆ ಕಡೆ ಕನ್ನಡದ ಬಗ್ಗೆ ಕೇಳಿದಾಗಲೂ ಕೂಡ ನನಗೆ ಅಷ್ಟೊಂದು ಚೆನ್ನಾಗಿ ಬರುವುದಿಲ್ಲ ಎಂದು ಹೇಳುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡುವ ಕಾರ್ಯವನ್ನು ಈಗಾಗಲೇ ಮಾಡಿದ್ದಾರೆ.

Shivanna about rashmika mandanna
Shivanna aabout rashmika

ಸೋಶಿಯಲ್ ಮೀಡಿಯಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಅಸಮಾಧಾನದ ಹೊಗೆ ಈಗಾಗಲೇ ಗಗನವನ್ನು ಮುಟ್ಟುವಷ್ಟು ಬುಗಿಲೆದ್ದಿದೆ. ಇತ್ತೀಚಿಗಷ್ಟೇ ಅವರ ವಿರುದ್ಧ ಕನ್ನಡ ಸಿನಿಮಾ ಪ್ರೇಮಿಗಳು ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಅಭಿಯಾನವನ್ನು ಪ್ರಾರಂಭಿಸಿದರು. ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಚಿತ್ರರಂಗದ ಗಣ್ಯರಿಗೆ ತಲುಪಿದ್ದು ಈಗ ಇದೇ ಮಾತು ಕರುನಾಡ ಚಕ್ರವರ್ತಿ ಶಿವಣ್ಣ ಅವರಿಗೂ ಕೂಡ ತಲುಪಿದೆ.

Shivanna about rashmika mandanna

ಸಂದರ್ಶಕರು ಶಿವಣ್ಣ ಅವರಿಗೆ ಈ ಪ್ರಶ್ನೆಯನ್ನು ಕೇಳಿದಾಗ ನಾನು ಚಿತ್ರರಂಗದಲ್ಲಿ ಸಿನಿಮಾಗಳ ಕುರಿತಂತೆ ಹೆಚ್ಚಾಗಿ ನೋಡುತ್ತೇನೆ ವಿನಹ ಇಂತಹ ಅನಗತ್ಯ ಕಾಂಟ್ರವರ್ಸಿಗಳನ್ನು ಹೆಚ್ಚಾಗಿ ನೋಡಲು ಹೋಗುವುದಿಲ್ಲ ಎಂಬುದಾಗಿ ಹೇಳುವ ಮೂಲಕ ಖಡಕ್ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಏನೇ ಆಗಲಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ರಾಜ್ಯ ಮತ್ತು ಕನ್ನಡ ಭಾಷೆಯ ವಿರುದ್ಧ ತೋರುತ್ತಿರುವ ನಿರಾಕರಣೆಯ ಧೋರಣೆ ನಿಜಕ್ಕೂ ಕೂಡ ಸಹಿಸಲಾಗದಂತದ್ದು.

ಅಪ್ಪು ಖುಷಿಯಾದಾಗ ಹಾಡುತ್ತಿದ್ದ ಹಿಂದಿ ಹಾಡು ಯಾವುದು ಗೊತ್ತಾ? ಚಿಂದಿ ವಿಡಿಯೋ ಇಲ್ಲಿದೆ ನೋಡಿ!

ಕನ್ನಡದ ಕುರಿತಂತೆ ಇರುವಂತಹ ಧೋರಣೆಯನ್ನು ರಶ್ಮಿಕಾ ಮಂದಣ್ಣ ಸರಿ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕೆ ಸರಿಯಾದ ಪಾಠವನ್ನು ಅವರು ಕಲಿಯುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗ ಅವರು ಬಹು ಬೇಡಿಕೆ ನಾಯಕನಟಿ ಆಗಿರಬಹುದು ಆದರೆ ಒಂದು ಕಾಲದ ನಂತರ ಕಾಲವೇ ಅವರಿಗೆ ಉತ್ತರ ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.

Leave a Comment

error: Content is protected !!