ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥಕ್ಕೆ ಬಾರದಿದ್ದ ಕಿಚ್ಚ ಅವರಿಗೆ ಕಳುಹಿಸಿಕೊಟ್ಟ ಗಿಫ್ಟ್ ಏನು ಗೊತ್ತಾ?

ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಆಗಿರುವ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಮರ್ ಸಿನಿಮಾದ ಮೂಲಕ ನಾಯಕ ನಟನಾಗಿ ಎಂಟ್ರಿ ನೀಡಿದ್ದಾರೆ. ಇನ್ನೇನು ಮುಂದಿನ ಸಿನಿಮಾ ಮಾಡುವ ಮುನ್ನವೇ ಈಗಾಗಲೇ ಅಭಿಷೇಕ್ ಅಂಬರೀಶ್ ಅವರು ಅವಿವಾ ಬಿದ್ದಪ್ಪ ಅವರನ್ನು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಅಭಿಷೇಕ್ ಅಂಬರೀಶ್ ಅವರು ಕುಟುಂಬಸ್ಥರ ಹಾಗೂ ಅತ್ಯಂತ ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಅವಿವಾ ಬಿದ್ದಪ್ಪ ಅವರನ್ನು ತಮ್ಮ ನಿವಾಸದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವಿವಾ ಬಿದ್ದಪ್ಪ ಕೂಡ ಯಾರಿಗೆ ಏನು ಕಡಿಮೆ ಇಲ್ಲ. ಆಗರ್ಭ ಶ್ರೀಮಂತನ ಮಗಳಾಗಿರುವ ಅವರು ಫ್ಯಾಷನ್ ಹಾಗೂ ಮಾಡಲಿಂಗ್ ಲೋಕದಲ್ಲಿ ತಮ್ಮದೇ ಆದಂತಹ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ.

ಇನ್ನು ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಕಾಳಿ ಸಿನಿಮಾದ ಮುಹೂರ್ತ ಪೂಜೆ ನಡೆದಿದ್ದು ಇನ್ನೂ ಹಲವಾರು ಸಿನಿಮಾಗಳಿಗೆ ಅಭಿಷೇಕ್ ಅಂಬರೀಶ್ ಅವರು ಸಹಿ ಹಾಕಿದ್ದು ಮುಂದಿನ ದಿನಗಳಲ್ಲಿ ಅನೌನ್ಸ್ಮೆಂಟ್ ನಡೆಯಲಿದೆ.

Kichcha sudeep gift to abhishek ambareesh
Kichcha sudeep gift to abhishek ambareesh

ಇನ್ನು ಈ ಕಾರ್ಯಕ್ರಮಕ್ಕೆ ನಿಮಗೆ ಗೊತ್ತಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ಸಿನಿಮಾರಂಗದ ಗಣ್ಯರು ಆಗಮಿಸಿದ್ದರು ಆದರೆ ರೆಬಲ್ ಸ್ಟಾರ್ ಕುಟುಂಬದ ಆಪ್ತರಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಂದಿರಲಿಲ್ಲ. ಇದು ಎಲ್ಲರ ಅಸಮಾಧಾನ ಹಾಗೂ ಬೇಸರಕ್ಕೆ ಕಾರಣವಾಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಯಾರಿಗೂ ಗೊತ್ತಿರದಂತಹ ಒಂದು ವಿಷಯ ಈಗ ಹೊರ ಬಂದಿದೆ.

ನಿನ್ನೆ ಹೊಸಪೇಟೆಯಲ್ಲಿ ಡಿ ಬಾಸ್ ಗೆ ಚಪ್ಪಲಿ ಏಟು!! ನಿಜಕ್ಕೂ ನಡೆದ ಘಟನೆ ಏನು ಗೊತ್ತಾ?

ಹೌದು ಗೆಳೆಯರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿಷೇಕ್ ಅಂಬರೀಶ್ ಅವರಿಗೆ ಕರೆ ಮಾಡಿ ನಿಶ್ಚಿತಾರ್ಥದ ಶುಭಾಶಯಗಳು ತಿಳಿಸಿ ದುಬಾರಿ ಬೆಲೆಯ ಡೈಮಂಡ್ ರಿಂಗ್ ಗಳನ್ನು ಇಬ್ಬರಿಗೂ ಕೂಡ ಕಳುಹಿಸಿಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರು ತಮ್ಮ ಪ್ರೀತಿಪಾತ್ರರನ್ನು ಯಾವತ್ತೂ ಕೂಡ ನೆನಪು ಬಿಡುವುದಿಲ್ಲ ಎಂಬುದಕ್ಕೆ ಈ ಘಟನೆ ಒಂದು ಜೀವಂತ ಉದಾಹರಣೆ ಆಗಿದೆ ಎನ್ನಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!