ರಾಜವಂಶದ ಅಭಿಮಾನಿಗಳಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಡಿ ಬಾಸ್ ಅಭಿಮಾನಿಗಳು, ಹೇಳಿದ್ದೇನು?

Dboss fans warning to Appu fans ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಎನ್ನುವುದು ಜೇನುಗೂಡಿಗೆ ಕಲ್ಲು ಬಿದ್ದಂತಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ನಿಜವಾಗಿಯೂ ಹೊಸಪೇಟೆಯಲ್ಲಿ (Hospete) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಮೇಲಿಂದ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಹಾಗೂ ಅಭಿಮಾನಿಗಳ ನಡುವಿನ ಜಗಳ ಎನ್ನುವುದು ತಾರಕಕ್ಕೇರಿದೆ. ಆರಂಭದಲ್ಲಿ ಡಿ ಬಾಸ್ (D Boss) ಅಭಿಮಾನಿಗಳು ರೋಡಿಗಿಳಿದು ಈ ಕೃತ್ಯದ ಹಿಂದಿರುವವರು ಅಪ್ಪು ಅಭಿಮಾನಿಗಳು (Appu Fans) ಕೂಡಲೇ ಕ್ಷಮೆ ಕೇಳಬೇಕು ಹಾಗೂ ಪೊಲೀಸರು ಅವರನ್ನು ಬಂಧಿಸಬೇಕು ಎಂಬುದಾಗಿ ಹೇಳುತ್ತಾರೆ.

Dboss fans warning to Appu fans

ಇನ್ನು ಅಪ್ಪು ಅಭಿಮಾನಿಗಳು ಸುಖ ಸುಮ್ಮನೆ ರಾಜವಂಶದ ಮೇಲೆ ಕಪ್ಪು ಚುಕ್ಕೆ ಬರುವಂತಹ ಹೇಳಿಕೆಯನ್ನು ನೀಡಬೇಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಅವರು ಮೊದಲಿನಿಂದಲೂ ಕೂಡ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದವರು ಹಾಗೂ ಅವರ ಅಭಿಮಾನಿಗಳು ಕೂಡ ಅವರ ದಾರಿಯನ್ನು ಹಿಂಬಾಲಿಸಿಕೊಂಡು ಬಂದವರು. ಸುಮ್ ಸುಮ್ಮನೆ ಅಪ್ಪು ಅಭಿಮಾನಿಗಳ ಮೇಲೆ ಆರೋಪವನ್ನು ಹೊರಿಸಿದರೆ ಪರಿಸ್ಥಿತಿ ಚೆನ್ನಾಗಿರಲ್ಲ ಎಂಬುದಾಗಿ ಅಪ್ಪು ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ.

D boss Darshan About Story

ಇದಕ್ಕಿಂತ ಹೆಚ್ಚಾಗಿ ಇತ್ತೀಚಿಗಷ್ಟೇ ಫಿಲಂ ಚೇಂಬರ್ ಗೆ ಹೋಗಿ ರಾಜವಂಶದ ಅಭಿಮಾನಿಗಳು ಇಡೀ ಕರ್ನಾಟಕಕ್ಕೆ ರಾಜ ವಂಶ ಒಂದೇ. ಆ ರಾಜವಂಶಕ್ಕೆ ಹಾಗೂ ಅಲ್ಲಿನ ವ್ಯಕ್ತಿಗಳಿಗೆ ಗೌರವ ನೀಡುವುದನ್ನು ಕಲಿತುಕೊಳ್ಳಿ ಎಂಬುದಾಗಿ Challeಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂಬುದಾಗಿ ಫಿಲಂ ಚೇಂಬರ್ ನಲ್ಲಿ ದೂರನ್ನು ದಾಖಲಿಸಲಾಯಿತು.

ಇದನೊಮ್ಮೆ ಓದಿ..ಶಿವಣ್ಣ ಅಭಿನಯದ ವೇದ ಸಿನಿಮಾದ ಪಾತ್ರಕ್ಕಾಗಿ ನಟಿ ಶ್ವೇತಾ ಚಂಗಪ್ಪ ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್

ಆದರೆ ಇದಕ್ಕೆ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ನಮ್ಮ ಕರ್ನಾಟಕದಲ್ಲಿ ಇರುವಂತಹ ಒಂದೇ ಒಂದು ರಾಜವಂಶ ಎಂದರೆ ಅದು ಮೈಸೂರಿನ ಒಡೆಯರ್ ರಾಜವಂಶದವರು ಮಾತ್ರ ಎಂಬುದಾಗಿ ಟಾಂಗ್ ನೀಡಿದ್ದಾರೆ. ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವಿನ ಜಗಳ ಈಗ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ವೈಯಕ್ತಿಕ ಮಟ್ಟದಲ್ಲಿ ಮಿತಿಮೀರಿ ಹೋಗಿದೆ ಎಂದರೆ ತಪ್ಪಾಗಲಾರದು. ಇದು ಕೂಡಲೇ ಶಮನಗೊಳ್ಳಬೇಕು ಇಲ್ಲವಾದಲ್ಲಿ ಇದು ತೀವ್ರ ಸ್ವರೂಪವನ್ನು ಪಡೆದುಕೊಂಡು ಕನ್ನಡ ಚಿತ್ರರಂಗದ ಮಾನ ಮರ್ಯಾದೆ ಹರಾಜು ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Leave a Comment

error: Content is protected !!