ಬಿಗ್ ಬಾಸ್ ಸೀಸನ್ ನೈನ್, 9( ಅನುಭವ ಸಹಿತ) +9( ಅನುಭವ ರಹಿತ) ಸೂತ್ರದೊಂದಿಗೆ ಪ್ರಾರಂಭವಾಗಿ ಮನರಂಜನೆಯನ್ನು ದಿನವೂ ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ.ಮನೆಯ ಕ್ಯಾಪ್ಟನ್ ಆಗಲು ಪಂದ್ಯಾಟ, ರೂಪೇಶ್ ರಾಜಣ್ಣ ಮತ್ತು ಪ್ರಶಾಂತ ಸಂಬರಗಿಯ ಕಾದಾಟ, ಸಾನ್ಯಾಳ ತುಂಟಾಟ, ದೀಪಿಕಾ ದಾಸ್ ಕಣ್ನೋಟ ಹೀಗೆ ಹಲವಾರು ಬಗೆಯಿಂದ ಸುದ್ದಿಯಲ್ಲಿರುವ ಬಿಗ್ ಬಾಸ್ ನಲ್ಲಿ ಗುರೂಜಿಯವರು ದಿವ್ಯ ಉರುಡುಗ ಮತ್ತು ಅರವಿಂದ್ ಕೆ ಪಿ ಅವರ ವಿವಾಹದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬಿಗ್ ಬಾಸ್ ಸೀಸನ್ ಎಂಟರ ಟಾಪ್ ಫೈವ್ ಸ್ಪರ್ಧಿಗಳಲ್ಲಿ ದಿವ್ಯಾ ಮತ್ತು ಅರವಿಂದ್ ಅವರ ಹೆಸರು ಮಿಂಚಿತ್ತು. ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಸ್ನೇಹಿತರಾಗಿ, ಉಳಿದ ಸ್ಪರ್ಧಿಗಳ ಎದುರು ಟಫ್ ಕಾಂಪಿಟೇಟರ್ಸ್ ಆಗಿ ಹೆಸರು ಮಾಡಿದ್ದರು. ಈ ಸ್ನೇಹವು ಸೀಸನ್ ಮುಗಿದ ಮೇಲೆಯೂ ಮುಂದುವರೆದಿದೆ. ಈ ಜೋಡಿಯ ಅಭಿಮಾನಿಗಳು ಅರ್ವಿಯಾ ಎಂಬ ಹೊಸ ಪೇಜ್ ಅನ್ನು ಕೂಡ ಸೃಷ್ಟಿಸಿದ್ದಾರೆ. ಅರವಿಂದ್ ಅವರ ಗೆಳೆಯ ಸಂತೋಷ ‘ನಿನ್ನನ್ನು ಹಾಗೂ ನಿನ್ನ ಗರ್ಲ್ ಫ್ರೆಂಡ್ ದಿವ್ಯಾಳನ್ನು ಭೇಟಿಯಾಗಿ ಸಂತೋಷವಾಯಿತು’ ಎಂದು ಬರೆದುಕೊಂಡಿದ್ದರು. ಇದರ ನಂತರ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ ಪಿ ಪ್ರೀತಿಯ ಬಂಧದಲ್ಲಿ ನಡೆಯುತ್ತಿದ್ದಾರೆ ಎಂಬುದು ಸುದ್ದಿಯಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಗುರೂಜಿಯವರು ನೇರವಾದ ಮತ್ತು ಖಾರವಾದ ನುಡಿಗಳನ್ನಾಡಿ ಮನೆಯ ಉಳಿದ ಸ್ಪರ್ಧಿಗಳ ಕೋಪಕ್ಕೆ ಕಾರಣವಾಗುತ್ತಲೇ ಇರುತ್ತಾರೆ. ಕೆನ್ನೆ, ಮುಖ, ತುಟಿ, ಉಗುರುಗಳನ್ನೆಲ್ಲ ನೋಡಿ ಭವಿಷ್ಯ ಹೇಳುವ ಇವರು ಸಂಖ್ಯೆ ಗ್ರಹಗತಿಗಳ ಲೆಕ್ಕಾಚಾರವನ್ನು ತಿಳಿದವರಂತೆ. ಓಟಿಟಿಯಿಂದ ಟಿವಿಯಲ್ಲಿನ ಬಿಗ್ ಬಾಸ್ ನಲ್ಲಿಯೂ ಮುಜುಗರವಾಗುವ ಹೇಳಿಕೆಯನ್ನು ನೀಡುತ್ತಾ ಬಂದ ಆರ್ಯವರ್ಧನ್ ಗುರೂಜಿ ಈಗ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ರಾಕೇಶ್ ಅಡಿಗ ಅವರಲ್ಲಿ ಮಾತನಾಡುತ್ತಿದ್ದ ಆರ್ಯವರ್ಜನ್ ಗುರೂಜಿಯವರು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅವರ ಪಕ್ಕದಲ್ಲಿ ದಿವ್ಯಾ ಕೂಡ ಇದ್ದಳು. ‘ಹುಟ್ಟಿದ ದಿನಾಂಕವನ್ನು ಆಧಾರವಾಗಿ ಇಟ್ಟುಕೊಂಡು ಭವಿಷ್ಯ ಹೇಳುವುದಾದರೆ ದಿನಾಂಕದ ಸಂಖ್ಯೆ ಏಳು ಮತ್ತು ಎಂಟರ ವ್ಯಕ್ತಿಗಳು ಲೈಫ್ ಪಾರ್ಟ್ನರ್ಸ್ ಆಗೋದಿಕ್ಕೆ ಸಾಧ್ಯವಿಲ್ಲ. ಅವರ ಮಧ್ಯೆ ಉತ್ತಮ ಸ್ನೇಹವಿರುತ್ತದೆಯಷ್ಟೇ. ಅದನ್ನು ಮೀರಿ ವಿವಾಹವಾದರೆ ವಿಚ್ಛೇದನವಂತು ಖಂಡಿತ’ ಎಂದಿದ್ದಾರೆ. ಇದನ್ನು ಕೇಳಿದ ದಿವ್ಯಾ ಉರುಡುಗ ಕೋಪಗೊಂಡಿದ್ದಾರೆ. ಅರವಿಂದ್ ಕೆ ಪಿ ಅವರು ಜನಿಸಿದ್ದು ಎಂಟು ಡಿಸೆಂಬರ್ ಆಗಿದ್ದು, ಗುರೂಜಿಯ ಮಾತುಗಳನ್ನು ಕೇಳಿ ಮುನಿಸಿಕೊಂಡ ದಿವ್ಯಾ ‘ನಮಸ್ಕಾರ ನಿಮ್ಮ ಜ್ಯೋತಿಷ್ಯಕ್ಕೆ; ಇದರಲ್ಲಿ ನಾನು ಇಲ್ವೇ ಇಲ್ಲ’ ಎನ್ನುತ್ತಾ ಅಲ್ಲಿಂದ ಎದ್ದು ನಡೆದುಬಿಟ್ಟರು. ನವ ಜೀವನವನ್ನು ಪ್ರಾರಂಭಿಸಲು ಯೋಜಿಸಿರುವ ದಿವ್ಯಾ ಮತ್ತು ಅರವಿಂದ್ ಜೋಡಿಯು ಇಂತಹ ಮಾತುಗಳಿಗೆ ಕಿವಿ ಕೊಡುವುದಿಲ್ಲ ಎಂಬುದು ದಿವ್ಯ ಅವರ ವರ್ತನೆಯಿಂದಲೇ ತಿಳಿದು ಬಂದಿದೆ.