RCB: ಆರ್ಸಿಬಿ ಮಹಿಳಾ ತಂಡದ ಗೆಲುವಿನ ನಂತರ ಸ್ಮೃತಿ ಮಂದನ ವಿರಾಟ್ ಕೊಹ್ಲಿ ಬಗ್ಗೆ ನೀಡಿದ ಶಾಕಿಂ’ ಗ್ ಹೇಳಿಕೆ ಏನು ಗೊತ್ತಾ?

Smriti Mandhana ಈಗಾಗಲೇ ಮಹಿಳಾ ಐಪಿಎಲ್ ಪ್ರಾರಂಭವಾಗಿದ್ದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಹಿಳಾ ತಂಡ ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಮಹಿಳಾ ತಂಡದ ನಾಯಕಿಯಾಗಿ ಸ್ಮೃತಿ ಮಂದನ ಹಾಗೂ ತಂಡದಲ್ಲಿ ಪ್ರಮುಖ ಆಟಗಾರ್ತಿಯಾಗಿ ಆಸ್ಟ್ರೇಲಿಯಾ ಮೂಲದ ಎಲಿಸ್ ಪೆರ್ರಿ(Ellyse perry) ಕೂಡ ಇದ್ದರೂ ತಂಡ ನಿರೀಕ್ಷಿತ ಪ್ರದರ್ಶನವನ್ನು ನೀಡಲು ಸಾಧ್ಯವಾಗುತ್ತಿಲ್ಲ.

ಎಲ್ಲಕ್ಕಿಂತ ಪ್ರಮುಖವಾಗಿ ಪುರುಷರ ತಂಡ ಕೂಡ ಕಳೆದ 15 ವರ್ಷಗಳಿಂದ ಒಮ್ಮೆಯೂ ಕೂಡ ಕಪ್ ಗೆಲ್ಲಲು ಸಾಧ್ಯವಾಗದೇ ಇರುವ ಟೀಕೆಯನ್ನು ಈಗ ಮಹಿಳೆಯರ ತಂಡಕ್ಕೂ ಕೂಡ ನೀಡಲಾಗುತ್ತಿದೆ ಎನ್ನುವುದು ಮತ್ತೊಂದು ಬೇಸರದ ವಿಚಾರವಾಗಿದೆ. ಅದರಲ್ಲೂ ಇಷ್ಟೊಂದು ನೀರಸ ಪ್ರದರ್ಶನ ನೀಡುತ್ತದೆ ಎನ್ನುವುದನ್ನು ಯಾರು ಕೂಡ ಭಾವಿಸಿರಲಿಲ್ಲ.

ಆದರೆ ಈಗ ಸತತ ಸೋಲುಗಳ ನಂತರ ಸ್ಮೃತಿ ಮಂದನ(Smriti Mandana) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ತಂಡದ ಎದುರು ಗೆಲ್ಲುವ ಮೂಲಕ ಮೊದಲ ಗೆಲುವನ್ನು ದಾಖಲಿಸಿದೆ. ಈ ಗೆಲುವಿಗೆ ನಿಜವಾದ ಕಾರಣ ವಿರಾಟ್ ಕೊಹ್ಲಿ(Virat Kohli) ಎಂಬುದಾಗಿ ಪಂದ್ಯ ಮುಗಿದ ನಂತರ ಸ್ಮೃತಿ ಮಂದನ ಹೇಳಿಕೊಂಡಿದ್ದಾರೆ.

ಹೌದು ಮಿತ್ರರೇ ಪಂದ್ಯ ಪ್ರಾರಂಭವಾಗುವುದಕ್ಕೂ ಮುನ್ನ ಮಹಿಳಾ ತಂಡದ ಜೊತೆಗೆ ವಿರಾಟ್ ಕೊಹ್ಲಿ(Virat Kohli) ರವರು ಮಾತನಾಡಿ ಪ್ರೋತ್ಸಾಹಿಸಿ ಉತ್ಸಾಹವನ್ನು ತುಂಬಿದ್ದರು ಇದೇ ಕಾರಣಕ್ಕಾಗಿ ನಾವು ಗೆಲ್ಲಲು ಸಾಧ್ಯವಾಯಿತು ಎಂಬುದಾಗಿ ತಂಡದ ನಾಯಕಿಯಾಗಿರುವ ಸ್ಮೃತಿ ಮಂದನ ಹೇಳಿಕೊಂಡಿದ್ದಾರೆ. ಪಂದ್ಯವನ್ನು ಗೆದ್ದಿದ್ದರೂ ಕೂಡ ತಂಡ ಈಗಾಗಲೇ ಬಹುತೇಕ ಈ ಟೂರ್ನಮೆಂಟ್ ನಿಂದ ಹೊರ ಬಿದ್ದಿದೆ ಎಂದು ಹೇಳಬಹುದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪುರುಷರ ಐಪಿಎಲ್(IPL) ಪ್ರಾರಂಭವಾಗಲಿದೆ.

Leave a Comment

error: Content is protected !!