ತುಳಸಿ ಪೂಜೆ ಮಾಡಿ ಅರಿಶಿಣ ಕುಂಕುಮ ಹಚ್ಚಿ ನಂತರ ಕಾರ್ ಶೆಡ್ ಗೆ ಹೋಗಿ ಈ ನವ ವಿವಾಹಿತೆ ಮಾಡಿಕೊಂಡಿದ್ದು ಏನು ಗೊತ್ತಾ ನಿಜಕ್ಕೂ ಶಾಕಿಂಗ್

ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಯುವಜನತೆ ತಮ್ಮ ಜೀವವನ್ನು ತಮ್ಮ ಕೈಯಾರೆ ತಾವೇ ಮುಗಿಸಿಕೊಳ್ಳುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಯಾವುದೇ ಸಮಸ್ಯೆ ಆಗಲಿ ಅದನ್ನು ಎದುರಿಸುವ ಗಟ್ಟಿತನ ಎನ್ನುವುದು ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕಾಣೆಯಾಗುತ್ತಿದೆ ಎಂದರೆ ಅತಿಶಯೋಕ್ತಿ ಅಲ್ಲ. ಈಗ ಅದೇ ರೀತಿಯ ಒಂದು ಘಟನೆ ಈಗ ಶಿವಮೊಗ್ಗದಲ್ಲಿ ನಡೆದಿದೆ ಎಂಬುದಾಗಿ ಬೆಳಕಿಗೆ ಬಂದಿದೆ.

ಈಗ ಸುದ್ದಿಗೆ ಬರುತ್ತಿರುವ ನವ ವಿವಾಹಿತೆಯ ಹೆಸರು ನವ್ಯಶ್ರೀ ಎನ್ನುವುದಾಗಿ. ಐದು ತಿಂಗಳ ಹಿಂದೆಯಷ್ಟೇ ಆಕಾಶ್ ಎನ್ನುವವನನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು. ಎಲ್ಲದಕ್ಕಿಂತ ಹೆಚ್ಚಾಗಿ ಇವಳ ಹಿನ್ನೆಲೆ ಕೂಡ ದೊಡ್ಡ ವ್ಯಕ್ತಿಗಳ ಕುಟುಂಬದ ಹಿನ್ನೆಲೆಯಾಗಿತ್ತು. ಹೆಸರಾಂತ ವೈದ್ಯರಾಗಿರುವ ಜಯಶ್ರೀ ಹೊಮ್ಮರಡಿ ಅವರ ಸೊಸೆ ಆಗಿದ್ದಳು ನವ್ಯಶ್ರಿ.

ಈ ಪ್ರಕರಣ ಸಾಕಷ್ಟು ವಿಚಿತ್ರವಾಗಿದೆ ಎಂದು ಹೇಳಬಹುದಾಗಿದೆ ಯಾಕೆಂದರೆ, ನವ್ಯಶ್ರೀ ರಾತ್ರಿಯಷ್ಟೇ ತುಳಸಿ ಪೂಜೆಯನ್ನು ಮುಗಿಸಿ ಅರಸಿನ ಕುಂಕುಮವನ್ನು ಸ್ವೀಕರಿಸಿ ಬಂದಿದ್ದ ಹೆಣ್ಣು ಮಗಳು ಕಾರ್ ಶೇಡಿನಲ್ಲಿ ನೇ’ಣು ಹಾಕಿಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ ಎಂದರೆ ಯಾರಿಂದಲೂ ಕೂಡ ನಂಬಲು ಸಾಧ್ಯವಿಲ್ಲ. ಈ ಬಗ್ಗೆ ಕುಟುಂಬಸ್ಥರು ಕುಟುಂಬದಲ್ಲಿ ಇರುವಂತಹ ಸಮಸ್ಯೆಯಿಂದಾಗಿ ಮಗಳು ಹೇಗೆ ಮಾಡಿಕೊಂಡಿರಬಹುದು ಎಂಬುದಾಗಿ ಅನುಮಾನವನ್ನು ವ್ಯಕ್ತಪಡಿಸಿರುವುದು ಪ್ರಕರಣದಲ್ಲಿ ದಾಖಲಾಗಿದೆ.

ಈಗಾಗಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ನವ್ಯಶ್ರೀಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಈಗಾಗಲೇ ಆಸ್ಪತ್ರೆಗೆ ಕಳಿಸಲಾಗಿದ್ದು ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಗಾಗಿ ಕಾಯುತ್ತಿದ್ದು ಮುಂದಿನ ದಿನಗಳಲ್ಲಿ ಪ್ರಕರಣದಲ್ಲಿ ಯಾವ ರೀತಿಯ ತಿರುಗು ಬರುತ್ತದೆ ಹಾಗೂ ಯಾವ ಕಾರಣಕ್ಕಾಗಿ ನ್ಯವ್ಯಶ್ರೀ ಹೇಗೆ ಮಾಡಿಕೊಂಡಿದ್ದಾಳೆ ಎಂಬ ಫಲಿತಾಂಶ ತಿಳಿದು ಬರಬೇಕಾಗಿದೆಯಷ್ಟೇ.

Leave a Comment

error: Content is protected !!