Real Story ಹೆಣ್ಣು ಮಗು ಮನೆಯಲ್ಲಿ ಹುಟ್ಟಿದರೆ ಸಾಕು ಅಲ್ಲಿಂದಲೇ ಅವರ ಜವಾಬ್ದಾರಿ ಕೂಡ ಪ್ರಾರಂಭವಾಗುತ್ತದೆ. ಮಗಳನ್ನು ಮದುವೆ ಮಾಡಿಕೊಟ್ಟರೆ ಸಾಕು ತಮ್ಮ ಜವಾಬ್ದಾರಿ ಮುಗಿದುಬಿಡುತ್ತದೆ ಎಂದು ಭಾವಿಸುವಂತಹ ತಂದೆ ತಾಯಿಯರು ಕೂಡ ಇದ್ದಾರೆ. ಕಷ್ಟವ ಸುಖವು ಗಂಡನ ಮನೆಯಲ್ಲಿಯೇ ಹೆಣ್ಣು ಮಕ್ಕಳು ಕೊನೆಯ ತನಕ ಜೀವನ ಮಾಡಲೇಬೇಕು ಎನ್ನುವ ಅಲಿಖಿತ(Un Written) ನಿಯಮ ಕೂಡ ಇದೆ. ಆದರೆ ನಮ್ಮ ಸಮಾಜ ಈ ದೃಷ್ಟಿಕೋನವನ್ನು ಬದಲಾವಣೆ ಮಾಡಲೇ ಬೇಕಾದಂತಹ ಹಲವಾರು ನೈಜ ಘಟನೆಗಳು ನಮ್ಮ ಆಸುಪಾಸಿನಲ್ಲಿ ನಡೆಯುತ್ತಿರುವುದು ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬರುತ್ತದೆ. ಅವುಗಳಲ್ಲಿ ಒಂದು ಘಟನೆಯ ಕುರಿತಂತೆ ಇಂದು ಮಾತನಾಡಲು ಹೊರಟಿದ್ದೇವೆ.
ಇಂದು ನಾವು ಮಾತನಾಡಲು ಹೊರಟಿರುವ ನೈಜ ಘಟನೆಯ ಕೇಂದ್ರಬಿಂದು ನಿಖಿತ ಎನ್ನುವ ದಾವಣಗೆರೆ ಮೂಲದ 25 ವರ್ಷದ ಯುವತಿ. ಈಕೆಯನ್ನು ಅವರ ತಂದೆ ಮನೋಜ್ ಕುಮಾರ್ ಎನ್ನುವ ಇಂಜಿನಿಯರ್ ಗೆ ಆರು ಲಕ್ಷ ರೂಪಾಯಿ ಹಣ ಹಾಗೂ ಚಿನ್ನಾಭರಣಗಳನ್ನು(jewelry) ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ತಮ್ಮ ಮಗಳು ಗಂಡನೊಂದಿಗೆ ಸುಖವಾಗಿರುತ್ತಾಳೆ ಎಂಬುದಾಗಿ ಅವರು ಭಾವಿಸಿದ್ದರು ಆದರೆ ಅವರ ಕಲ್ಪನೆಯನ್ನು ಮನೋಜ್ ಕುಮಾರ್ ಸುಳ್ಳು ಮಾಡಿಬಿಡುತ್ತಾನೆ. ಹೌದು ನಿಖಿತಾಗೆ ಮನೋಜ್ ಕುಮಾರ್ ಇನ್ನಿಲ್ಲದಂತೆ ಕಾಟ ನೀಡುತ್ತಾನೆ. ಇವರಿಗೆ ಒಂಬತ್ತು ತಿಂಗಳ ಚಿಕ್ಕ ಮಗು ಕೂಡ ಇದೆ.
ಇಷ್ಟೆಲ್ಲ ಹಣವನ್ನು ನಿಖಿತಾ ಪೋಷಕರು ಮನೋಜ್ ಕುಮಾರ್ ಗೆ ನೀಡಿದ್ದರೂ ಕೂಡ ಅದು ಆತನಿಗೆ ಸಾಕಾಗಿರಲಿಲ್ಲ. ಇನ್ನಷ್ಟು ಹಣವನ್ನು ತಂದು ಕೊಡುವಂತೆ ತನ್ನ ತಾಯಿಯ ಜೊತೆಗೆ ಸೇರಿ ಮನೋಜ್ ಕುಮಾರ್ ನಿಕಿತಾಗೆ ಕಾಟ ನೀಡುತ್ತಿದ್ದ. ಇದನ್ನು ತಡೆದುಕೊಳ್ಳಲಾರದೆ ನಿಖಿತ ತನ್ನ ಹೆತ್ತವರಿಗೆ ಈ ಕುರಿತಂತೆ ಮಾಹಿತಿಯನ್ನು ನೀಡಿ ತವರು ಮನೆಗೆ ಹೋಗಿ ನೆಲೆಸುತ್ತಾಳೆ. ನಿಕಿತಾ ತವರು ಮನೆಗೂ ಹೋದರೂ ಕೂಡ ಮನೋಜ್ ಕುಮಾರ್ ಫೋನ್(Call) ಮಾಡಿ ಪದೇ ಪದೇ ಹಣ ನೀಡುವಂತೆ ಉಪಟಳ ನೀಡುತ್ತಲೇ ಇದ್ದ.
ಇದನ್ನೆಲ್ಲಾ ಸಹಿಸಲಾಗದೆ ಕೊನೆಗೂ ತಂದೆ ತಾಯಿ ಮನೆಯಲ್ಲಿ ಇರದಿದ್ದ ಸಂದರ್ಭದಲ್ಲಿ ನಿಕಿತಾ ತನ್ನ 9 ತಿಂಗಳ ಮಗುವಿಗೂ ಹಾಗೂ ತಾನು ಇಬ್ಬರೂ ಕೂಡ ನೇ’ಣು ಹಾಕಿಕೊಂಡು ತಮ್ಮ ಕೊನೆಯ ಉಸಿರನ್ನು ಚೆಲ್ಲುತ್ತಾರೆ. ಇದನ್ನು ನೋಡಿರುವ ನಿಕಿತಾ ತಂದೆ ತಾಯಿ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ಆಗಿದ್ದಾರೆ. ಇದರ ಬಗ್ಗೆ ಪೊಲೀಸ್(Police) ಠಾಣೆಯಲ್ಲಿ ದೂರನ್ನು ನೀಡಿರುವ ನಿಕಿತಾ ತಂದೆ ಇದಕ್ಕೆಲ್ಲ ಕಾರಣ ಅಳಿಯ ಮನೋಜ್ ಕುಮಾರ್ ಎಂಬುದಾಗಿ ದೂರನ್ನು ದಾಖಲಿಸಿದ್ದಾರೆ. ಹಣದಾಹಿ ಅಳಿಯನಿಂದಾಗಿ ಸುಖ ಸುಮ್ಮನೆ ತುಂಬು ಬಾಳನ್ನು ನಡೆಸಬೇಕಾಗಿದ್ದ ಮಗಳನ್ನು ಆ ತಂದೆ ಕಳೆದುಕೊಂಡಿದ್ದಾರೆ.