ಇತ್ತೀಚಿಗಷ್ಟೇ ಮೈಸೂರು ಜಿಲ್ಲೆಯ (Mysore district) ನಂಜನಗೂಡು ತಾಲೂಕಿನಲ್ಲಿ ನಡೆದಿರುವಂತಹ ಒಂದು ಘಟನೆ ನಿಜಕ್ಕೂ ಕೂಡ ಪ್ರತಿಯೊಬ್ಬರು ಬೆರಗಾಗುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 35 ವರ್ಷದ ಎರಡು ಮಕ್ಕಳ ತಾಯಿ ಅದೇನೋ ಗ್ರಹಚಾರಕೆಟ್ಟಿತ್ತೋ ಏನೋ 21 ವರ್ಷದ ಅರ್ಚಕನ(Priests) ಮಗನ ಜೊತೆಗೆ ಓಡಿಹೋಗಿದ್ದಳು. ನಂತರ ನಡೆದಿದ್ದೇನು ಗೊತ್ತಾ ಬನ್ನಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
ಆ ಮಹಿಳೆ ಶಾಸ್ತ್ರ ನೋಡಲು ಅರ್ಚಕನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅವರ 21 ವರ್ಷದ ಮಗ ಸಂತೋಷ್ ಮೇಲೆ ಮನಸ್ಸಾಗಿದೆ. ಇವರಿಬ್ಬರೂ ಎಲ್ಲಾ ಕಡೆ ಎಷ್ಟು ಸುತ್ತಾಡಿದ್ದಾರೆ ಎಂದರೆ ಆ ಗ್ರಹಿಣಿಗೆ (House Wife) ತನ್ನ ಮನೆಯಲ್ಲಿರುವ ಗಂಡ ಹಾಗೂ ಇಬ್ಬರು ಮಕ್ಕಳ ನೆನಪೇ ಇರಲಿಲ್ಲ. ನಂತರ ಕೊನೆಗೆ ಆ ಮಹಿಳೆಯ ಬಳಿ ಸಂತೋಷ್ ಮದುವೆ ಮಾಡಿಕೊಳ್ಳುವ ಪ್ರಸ್ತಾವನೆ ಇಡುತ್ತಾನೆ.
ಖುಷಿಯಾದ ಮಹಿಳೆ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಮನೆಯಲ್ಲಿದ್ದ ತನ್ನ ವಸ್ತುಗಳನ್ನು ಎತ್ತಿಕೊಂಡು ಗಂಟು ಮೂಟೆ ಕಟ್ಟಿಕೊಂಡು ಸಂತೋಷ್ ಹಿಂದೆ ಓಡಿ ಹೋಗಿದ್ದಾಳೆ. ಆದರೆ ಸಂತೋಷ ಕೆಲವೇ ದಿನಗಳಲ್ಲಿ ಆಕೆಯ ಜೊತೆಗೆ ಇದ್ದ ನಂತರ ತನ್ನ ನಿಜವಾದ ಬಣ್ಣವನ್ನು ಬಯಲು ಮಾಡಿದ್ದಾನೆ. ಮೊದಲು ಆಕೆಯನ್ನು ಮದುವೆ ಮಾಡಿಕೊಳ್ಳುವ ವಿಚಾರ ಹೇಳಿ ಮರಳು ಮಾಡಿ ಕರೆದುಕೊಂಡು ಬಂದಿದ್ದ ಸಂತೋಷ್ ನಂತರ ತನ್ನ ನಿಜ ಬಣ್ಣ ಬಯಲು ಮಾಡಿದ್ದಾನೆ. ಮದುವೆ ಆಗಲು ಸಾಧ್ಯವೇ ಇಲ್ಲ ಎಂಬುದಾಗಿ ಆಕೆಗೆ ಹೇಳಿದ್ದು ನಂತರ ಏನೂ ಮಾಡಲು ಸಾಧ್ಯವಿಲ್ಲ ನಾವಿಬ್ಬರೂ ಮರಣ ಹೊಂದುವ ಎಂಬುದಾಗಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಬರುತ್ತಾನೆ.
ದಟ್ಟವಾದ ಕಾಡಿಗೆ(Forest) ಆಕೆಯನ್ನು ಕರೆದುಕೊಂಡು ಬಂದು ಮಧ್ಯರಾತ್ರಿ ಆಗುವ ಹೊತ್ತಿನಲ್ಲಿ ಸಂತೋಷ ಆಕೆಯನ್ನು ಅಲ್ಲಿಯೇ ಇರಲು ಹೇಳಿ ಕಾಲ್ಕಿತ್ತಿದ್ದಾನೆ. ಈ ಕಡೆ ಆ ಗ್ರಹಿಣಿ ಸಂತೋಷ್ ಗಾಗಿ ಕಾದು ಕಾದು ನಂತರ ರಸ್ತೆಯ ಬಳಿ ಬಂದು ಅಲ್ಲಿನ ಊರಿನವರು ಪೊಲೀಸರ ಬಳಿ ಕರೆತಂದುಬಿಟ್ಟಿದ್ದಾರೆ.
ಇದನ್ನೂ ಓದಿ..ಅಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಡುತ್ತಿದ್ದ ಕಷ್ಟದ ಬಗ್ಗೆ ವಿನೋದ್ ರಾಜ್ ಮೌನ ಮುರಿದು ಹೇಳಿದ್ದೇನು?
ಈ ಕಡೆ ಗ್ರಹಿಣಿ ಪೊಲೀಸರ ಬಳಿ ಸಂತೋಷ್ ಜೊತೆಗೆ ಮದುವೆ ಆಗಲೇ ಬೇಕೆಂದು ಗೋಗರೆಯುತ್ತಿದ್ದಾಳೆ. ಆ ಕಡೆ ನೋಡಿದರೆ ಸಂತೋಷ್ ತಲೆಮರೆಸಿಕೊಂಡಿದ್ದಾನೆ. ಇಲ್ಲೂ ಇರಲಾಗದೆ ಊರಿಗೂ ಹೋಗಲಾಗದೆ ಆ ಗ್ರಹಿಣಿ ಈಗ ಗೋಳು ಎಂಬುದಾಗಿ ಅಳುತ್ತಿದ್ದಾಳೆ. ಕ್ಷಣಿಕ ಸುಖಕ್ಕಾಗಿ ಮೈಮರೆತರೆ ಏನಾಗುತ್ತದೆ ಎನ್ನುವುದಕ್ಕೆ ಈ ನೈಜ ಘಟನೆ ಒಂದು ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ.