Pathaan ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ನೋಡಿದ್ರಾ ಎನ್ನುವ ಪ್ರಶ್ನೆಗೆ ಅಪ್ಪು ಉತ್ತರಾಧಿಕಾರಿ ನೀಡಿದ ಉತ್ತರವೇನು? ಯುವ ರಾಜ್ ಕುಮಾರ್.

Yuva Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಉತ್ತರಾಧಿಕಾರಿಯನ್ನಾಗಿ ಈಗಾಗಲೇ ಅಪ್ಪು ಅಭಿಮಾನಿಗಳು ಸೇರಿದಂತೆ ಎಲ್ಲರೂ ಕೂಡ ರಾಘವೇಂದ್ರ ರಾಜಕುಮಾರ್ ಅವರ ಮಗ ಆಗಿರುವ ಯುವರಾಜ್ ಕುಮಾರ್ ಎಂಬುದಾಗಿಯೇ ಕರೆಯುತ್ತಿದ್ದಾರೆ. ಸದ್ಯಕ್ಕೆ ಯುವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿ(Entry) ನೀಡುವುದಕ್ಕೆ ತಯಾರಿಯನ್ನು ನಡೆಸಿಕೊಳ್ಳುತ್ತಿರುವುದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

ಸದ್ಯಕ್ಕೆ ಸಂತೋಷ್ ಆನಂದ್ ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಾಗಿ ಬರೆದಿದ್ದ ಕಥೆಯಲ್ಲಿಯೇ ಯುವರಾಜ್ ಕುಮಾರ್ ಅವರನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಲಾಂಚ್ ಮಾಡಲಿದೆ ಎಂಬ ಸುದ್ದಿ ಅಧಿಕೃತವಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತೆ ಸ್ಟನ್ನಿಂಗ್ ಡ್ಯಾನ್ಸ್(Stunning Dance) ಮಾಡುವುದಕ್ಕೆ ಯುವರಾಜ್ ಕುಮಾರ್ ಈಗಾಗಲೇ ಅಭಿಮಾನಿಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಮೊದಲ ಸಿನಿಮಾದಲ್ಲಿ ನಟಿಸುವುದಕ್ಕಿಂತ ಮುಂಚೆನೇ ಯುವರಾಜ್ ಕುಮಾರ್ ಅವರ ಹೆಸರಿನಲ್ಲಿ ಸಾಕಷ್ಟು ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ.

ಇನ್ನು ಇತ್ತೀಚಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಲಿವುಡ್ ನ(Bollywood’s) ಕಿಂಗ್ ಖಾನ್ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಬಿಡುಗಡೆಯಾಗಿತ್ತು. ಬೆಂಗಳೂರಿನಲ್ಲಿ ಕೂಡ ಶಾರುಖ್ ಖಾನ್ ಅಭಿಮಾನಿಗಳು ಚಿತ್ರದ ಬಿಡುಗಡೆಯ ದಿನದಂದು ಅನ್ನಸಂತರ್ಪಣೆಯನ್ನು ಮಾಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಟೌಟ್ ಅನ್ನು ಕೂಡ ನಿಲ್ಲಿಸುವ ಮೂಲಕ ಅಪ್ಪುವನ್ನು ನೆನೆಯಲಾಯಿತು. ಇದೇ ಕಾರಣಕ್ಕಾಗಿ ಅನಿಸುತ್ತೆ ಯುವರಾಜ್ ಕುಮಾರ್ ಅವರು ಶಾರುಖ್ ಖಾನ್ ಅವರ ಅಭಿಮಾನಿಗಳನ್ನು ಮನೆಗೆ ಕರೆಸಿಕೊಂಡಿದ್ದರು. ಎಲ್ಲರಿಗೂ ಕೂಡ ಈ ಸಂದರ್ಭದಲ್ಲಿ ಅವರು ಧನ್ಯವಾದಗಳನ್ನು ಅರ್ಪಿಸುತ್ತಾರೆ.

ಈ ಸಂದರ್ಭದಲ್ಲಿ ಯುವರಾಜ್ ಕುಮಾರ್ ಅವರ ಬಳಿ ಶಾರುಖ್ ಖಾನ್ ಅವರ ಅಭಿಮಾನಿಗಳು ಪಠಾಣ್ ಸಿನಿಮಾವನ್ನು ನೋಡಿದ್ರಾ ಸರ್ ಎಂಬುದಾಗಿ ಕೇಳುತ್ತಾರೆ. ಆಗ ಯುವರಾಜಕುಮಾರ್ ಅವರು ವಿನಯದಿಂದಲೇ ನಾನು ಟ್ರಾವೆಲ್ ನಲ್ಲಿ ಇದ್ದೆ ಸಿನಿಮಾ ನೋಡಲು ಸಮಯ ಸಿಕ್ಕಿರಲಿಲ್ಲ ಖಂಡಿತವಾಗಿ ನೋಡುತ್ತೇನೆ ಎಂಬುದಾಗಿ ಉತ್ತರಿಸುತ್ತಾರೆ. ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್(Viral) ಆಗುತ್ತಿದ್ದು ಯುವರಾಜ್ ಕುಮಾರ್ ಅವರ ವಿನಯತೆಗೆ ಎಲ್ಲರೂ ತಲೆದೂಗಿದ್ದಾರೆ.

Leave a Comment

error: Content is protected !!