Rebel Star Ambareesh: ಅಂಬರೀಶ್ ಅವರಿಗೆ ಮಂಡ್ಯದ ಗಂಡು ಬಿರುದನ್ನು ನೀಡಿದ್ದು ಯಾರು ಗೊತ್ತಾ?

Rebel Star Ambareesh ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಮಂಡ್ಯದ ಗಂಡು ಕಲಿಯುಗದ ಕಾರಣ ಎಂಬುದಾಗಿ ಬಿರುದಾಂಕಿತರಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್(Ambareesh) ಅವರ 71ನೇ ಜನ್ಮ ಜಯಂತಿಯನ್ನು ನಿನ್ನೆ ಅಷ್ಟೇ ಆಚರಿಸಲಾಗಿದೆ. ದೈಹಿಕವಾಗಿ ಅವರು ನಮ್ಮನ್ನು ಅಗಲಿರಬಹುದು ಆದರೆ ಅವರನ್ನು ನಮ್ಮ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವೇ ಇಲ್ಲ.

ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಮರೆಯಲಾಗದಂತಹ ಕೊಡುಗೆಗಳನ್ನು ಸಿನಿಮಾ ಹಾಗೂ ಸಿನಿಮಾದ ಹೊರತುಪಡಿಸಿ ಕೂಡ ನೀಡಿದ್ದಾರೆ. ಒಬ್ಬ ರಾಜಕಾರಣಿಯಾಗಿ ಕೂಡ ಮಂಡ್ಯ ಸೇರಿದಂತೆ ಇಡೀ ಕರ್ನಾಟಕ ರಾಜ್ಯಕ್ಕೆ ಜನಪರವಾದ ಆಡಳಿತವನ್ನು ಕೂಡ ಸಚಿವರಾಗಿ ನೀಡಿದ್ದಾರೆ. ಅಂಬರೀಶ್ ಎಂದ ತಕ್ಷಣ ಪ್ರತಿಯೊಬ್ಬರಿಗೂ ಕೂಡ ಅವರ ಸ್ನೇಹ ನೆನಪಾಗುತ್ತದೆ.

ಇನ್ನು ಅಂಬರೀಶ್ ಅವರಿಗೆ ಮಂಡ್ಯದ ಗಂಡು(Mandyada Gandu) ಎನ್ನುವಂತಹ ಬಿರುದನ್ನು ಯಾರು ನೀಡಿರಬಹುದು ಎಂಬುದಾಗಿ ಪ್ರತಿಯೊಬ್ಬರಲ್ಲಿ ಕೂಡ ಕುತೂಹಲ ಇದ್ದೇ ಇರುತ್ತದೆ ಹೀಗಾಗಿ ಇಂದಿನ ಈ ಲೇಖನಿಯಲ್ಲಿ ಅವರಿಗೆ ಆ ಬಿರುದನ್ನು ನೀಡಿದಂತಹ ಮಹಾಶಯ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಾಜಿ ಸಚಿವರಾಗಿರುವಂತಹ ಮಾದೇಗೌಡ ಅವರು ಹೇಳುವ ಪ್ರಕಾರ ಅವರೇ ಈ ಮಂಡ್ಯದ ಗಂಡು ಎನ್ನುವಂತಹ ಬಿರುದುನ್ನು ತಮ್ಮ ಮಿತ್ರ ಆಗಿರುವಂತಹ ಅಂಬರೀಶ್ ಅವರಿಗೆ ನೀಡಿದ್ದರಂತೆ. ಈ ವಿಷಯದ ಬಗ್ಗೆ ನಿಮಗೆ ಮೊದಲೇ ಗೊತ್ತಿತ್ತಾ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಬಹುದಾಗಿದೆ.

Leave a Comment

error: Content is protected !!