ಮೋಸ ಮಾಡಿ ವೈಷ್ಣವಿ ಗೌಡ ಗೆ ಎಂಗೇಜ್ಮೆಂಟ್!ಮೋಸ ಹೋಗಿರುವುದು ವೈಷ್ಣವಿ ಗೌಡ ಅವರಿಗೆ ತಿಳಿದರೆ ಮುಖಕ್ಕೆ ಉಗಿಯುವುದು ಖಂಡಿತ..

ನಮಗೆಲ್ಲರಿಗೂ ತಿಳಿದಿರುವ ಹಾಗೆ ವೈಷ್ಣವಿ ಗೌಡ ಅವರು ಕರ್ನಾಟಕದ ಜನತೆಗೆ ಸನ್ನಿಧಿ ಎಂದೇ ಪರಿಚಿತರು. ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಅವರೊಂದಿಗೆ ತೆರೆ ಹಂಚಿಕೊಂಡಿರುವ ಇವರು ಸನ್ನಿಧಿಯ ಪಾತ್ರದಲ್ಲಿ ಅಭಿನಯಿಸಿದ್ದರು.ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧೆಯಾಗಿ ಮನೆ ಒಳಹೊಕ್ಕು ಒಳ್ಳೆಯ ಆಟವಾಡುತ್ತಾ ‘ನನಗೆ ಮದುವೆಯಾಗಬೇಕೆಂಬ ಆಸೆ ಇದೆ’ ಎಂದು ಹಲವು ಬಾರಿ ಹೇಳಿದ್ದರು.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮದುವೆಗಾಗಿ ಬಹಳ ಆಫರ್ಸ್ ಬಂದಿತ್ತು.ಇತ್ತೀಚಿಗಷ್ಟೇ ‘ವೈಷ್ಣವಿ ಗೌಡ ಅವರು ವಿದ್ಯಾಭರಣ್ ಎಂಬುವವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ’ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸುದ್ದಿಯು ಹರಿದಾಡಲು ಕಾರಣವೆಂದರೆ, ವೈಷ್ಣವಿ ಗೌಡ ಮತ್ತು ಅವರ ಪಕ್ಕದಲ್ಲಿ ವಿದ್ಯಾಭರಣ್ ಮಾಲೆ ಧರಿಸಿ ನಿಂತಿದ್ದರು ಹಾಗೂ ಕುಟುಂಬಸ್ಥರು ಅಂದದ ಉಡುಗೆಯಲ್ಲಿ ನಿಂತಿದ್ದ ಫೋಟೋ ಅದಾಗಿತ್ತು; ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರೇ ಕೂಡ ಉಪಸ್ಥಿತರಿದ್ದರು.

Kannada serial actress Vaishnavi gowda engagement photos

ಆ ಫೋಟೋದಲ್ಲಿ ಕಾಣುವಂತೆ ಎದುರಿರುವ ಟೇಬಲ್ ಒಂದರ ಮೇಲೆ ಹಣ್ಣು, ಕಾಯಿ, ಹೊಸ ಬಟ್ಟೆ, ಅರಿಶಿಣ, ಕುಂಕುಮಗಳು ರಾರಾಜಿಸುತ್ತಿದ್ದವು.ಈ ಸುದ್ದಿಯ ಕುರಿತಾಗಿ ಮಾತನಾಡಿದ ವೈಷ್ಣವಿ ಗೌಡ ಅವರು ‘ಇನ್ನು ಎಂಗೇಜ್ಮೆಂಟ್ ಆಗಿಲ್ಲ; ಆದರೆ ಹೆಣ್ಣು ನೋಡಿಕೊಂಡು ಹೋಗುವ ಶಾಸ್ತ್ರ ಮುಗಿದಿದೆಯಷ್ಟೇ’ ಎಂದಿದ್ದರು.ಹಾಗಾದರೆ ನಂತರದ ಕಥೆ ಏನೆಂದು ಕೇಳುತ್ತಿದ್ದೀರಾ? ಪೂರ್ತಿಯಾಗಿ ಓದಿ..

ವೈಷ್ಣವಿ ಗೌಡ ಅವರು ವಿದ್ಯಾಭರಣ ಎಂಬುವವರ ಜೊತೆ ಮುಂದಿನ ದಿನಗಳಲ್ಲಿ ವಿವಾಹವಾಗಲಿದ್ದಾರೆಯೇ? ಎಂಬ ಸುದ್ದಿಯು ಹರಡುತ್ತಿದ್ದಂತೆಯೇ ಇಬ್ಬರು ಅನಾಮಧೇಯ ಹುಡುಗಿಯರು ‘ನಾವು ವೈಷ್ಣವಿ ಅವರ ಜೀವನವು ಹಾಳಾಗಲು ಬಿಡುವುದಿಲ್ಲ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಕಂಡ ಸನ್ನಿಧಿ ಪಾತ್ರದಂತೆಯೇ ವೈಷ್ಣವಿ ಗೌಡ ಅವರದು ಮುಗ್ಧ ಮನಸ್ಸು. ಅವರು ತುಂಬಾ ಒಳ್ಳೆಯವರು. ಇವರ ವೈವಾಹಿಕ ಜೀವನವನ್ನು ಹಾಳಾಗಲು ನಾವು ಬಿಡುವುದಿಲ್ಲ’ ಎಂದಿದ್ದಾರೆ.

ಈ ರೀತಿಯಾಗಿ ಆಡಿಯೋವನ್ನು ರಿಲೀಸ್ ಮಾಡಿದ ಹುಡುಗಿಯರಿಬ್ಬರು ಯಾರೆಂಬುದು ತಿಳಿದಿಲ್ಲ; ಅಷ್ಟೇ ಅಲ್ಲದೆ ಇವರಿಗೂ ವಿದ್ಯಾಭರಣವರಿಗೂ ಇರುವ ಸಂಬಂಧವೇನು ಎಂಬುದರ ಬಗ್ಗೆಯೂ ಸ್ಪಷ್ಟನೆ ಸಿಗಬೇಕಿದೆ. ರಿಲೀಸ್ ಆದ ಆಡಿಯೋದಲ್ಲಿ ‘ವಿದ್ಯಾಭರಣ ಅವರಿಗೆ ವೈಷ್ಣವಿ ಗೌಡ ಅವರ ಪರಿಚಯವಾಗುವುದಕ್ಕಿಂತ ಮುಂಚೆ ಕೆಲವು ಹುಡುಗಿಯರೊಂದಿಗೆ ಸಂಬಂಧವಿತ್ತು; ಒಂದಿಷ್ಟು ಹುಡುಗಿಯರನ್ನು ಮನೆಗೆ ಸಹ ಕರೆದುಕೊಂಡು ಹೋಗಿ ಬರುತ್ತಿದ್ದರು. ಇದಕ್ಕೆ ಅವರ ಕುಟುಂಬಸ್ಥರ ಸಪೋರ್ಟ್ ಕೂಡ ಇದೆ. ಇವರನ್ನು ವೈಷ್ಣವಿ ಗೌಡ ಅವರು ವಿವಾಹವಾದರೆ ಡಿವೋರ್ಸ್ ಆಗುವುದು ಖಂಡಿತ.

Kannada serial actress Vaishnavi gowda engagement photos

ವೈಷ್ಣವಿ ಅವರು ವಿದ್ಯಾಭರಣ ಅವರನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಕ್ಕಿಂತ ಮೊದಲೇ ತಿಳಿಸುತ್ತೇವೆ; ವೈಷ್ಣವಿ ಅವರಿಗೆ ಅವನ ಅಸಲಿ ಕಥೆ ಗೊತ್ತಾದರೆ ಮುಖಕ್ಕೆ ಉಗಿದು ಉಪ್ಪಿನಕಾಯಿ ಹಾಕುತ್ತಾರೆ. ಇಷ್ಟು ಹೇಳಿದ ಮೇಲೂ, ಅವನ ಕಡೆಗೆ ಒಲವು ತೋರಿದರೆ ನಾವೇನು ಮಾಡದೆ ಸುಮ್ಮನಿರಬೇಕಾಗುತ್ತದೆ’ ಎಂದು ಆ ಇಬ್ಬರು ಹೆಣ್ಣು ಮಕ್ಕಳು ಹೇಳಿದ್ದಾರೆ. ಮದುವೆಗೂ ಮುನ್ನವೇ ವೈಷ್ಣವಿ ಗೌಡ ಅವರಿಗೆ ಮೋಸವಾಯ್ತಾ? ಎಂಬ ಪ್ರಶ್ನೆಯು ಅಭಿಮಾನಿಗಳನ್ನು ಕಾಡುತ್ತಿದೆಯಂತೆ.

Leave a Comment

error: Content is protected !!