Lakshman ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ನಟ ಲಕ್ಷ್ಮಣ್ ಅವರ ಅಂತಿಮ ದರ್ಶನಕ್ಕೆ ಯಾಕೆ ನಟರು ಬರ್ಲಿಲ್ಲ?

Lakshman ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಪೋಷಕ ಹಾಗೂ ಖಳ ನಟ ಆಗಿರುವ ಲಕ್ಷ್ಮಣ್ ಅವರು ಇತ್ತೀಚಿಗಷ್ಟೇ ವಿಧಿವಶರಾಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ನಟ ಲಕ್ಷ್ಮಣ್ ಅವರು ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ಕಾಣಿಸಿಕೊಂಡವರು. ಎಲ್ಲದಕ್ಕಿಂತ ಪ್ರಮುಖವಾಗಿ ಅವರ ಮರಣದ ಕೊನೆಯ ಕ್ಷಣಗಳನ್ನು ಗಮನಿಸುವುದಾದರೆ ಮೊದಲಿಗೆ ಹೃದಯದ ಸಮಸ್ಯೆ ಕಂಡು ಬಂದ ತಕ್ಷಣವೇ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈಸಿಜಿ(ECG) ಮಾಡಿಸಿ ಮನೆಗೆ ಕರೆ ತರುತ್ತಿದ್ದ ಕೂಡಲೇ ಮತ್ತೆ ಅವರಿಗೆ ಹೃದಯದಲ್ಲಿ ಸಮಸ್ಯೆ ಕಂಡು ಬರುತ್ತದೆ.

ಆದರೆ ಆಸ್ಪತ್ರೆಗೆ(Hospital) ಕರೆದುಕೊಂಡು ಹೋಗುತ್ತಿದ್ದ ಮಾರ್ಗ ಮಧ್ಯದಲ್ಲಿಯೇ ಲಕ್ಷ್ಮಣ್ ಅವರು ಕೊನೆ ಉಸಿರನ್ನು ಎಳೆಯುತ್ತಾರೆ. ಇನ್ನು ಲಕ್ಷ್ಮಣ್ ಅವರ ಶರೀರವನ್ನು ಅಂತಿಮ ದರ್ಶನಕ್ಕಾಗಿ ಕೂಡ ಇಡಲಾಗಿತ್ತು. ಕನ್ನಡ ಚಿತ್ರರಂಗದ ಹಲವಾರು ಹಿರಿಯ ನಟರು ಅವರ ಕೊನೆಯ ದರ್ಶನವನ್ನು ಪಡೆದುಕೊಳ್ಳುತ್ತಾರೆ ಆದರೆ ಕನ್ನಡ ಚಿತ್ರರಂಗದ ಯಾವೊಬ್ಬ ಸ್ಟಾರ್ ನಟರು ಕೂಡ ಲಕ್ಷ್ಮಣ್ ಅವರ ಕೊನೆಯ ದರ್ಶನವನ್ನು ಪಡೆಯಲು ಬರುವುದಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ ಆಗಿದೆ ಎಂದರೆ ತಪ್ಪಾಗಲಾರದು.

Lakshman kannada actor

ನಮ್ಮ ಕನ್ನಡ ಚಿತ್ರರಂಗದ ಸ್ಟಾರ್ ನಟರು ಬೇರೆ ಯಾರೇ ಪ್ರಖ್ಯಾತ ಕಲಾವಿದರು ಹಾಗೂ ಸೆಲೆಬ್ರಿಟಿಗಳು(Celebrities) ಮರಣ ಹೊಂದಿದಾಗ ಕೂಡಲೇ ಧಾವಿಸುತ್ತಾರೆ ಆದರೆ ಇಂತಹ ಹಿರಿಯ ನಟರ ಮರಣದ ಸಂದರ್ಭದಲ್ಲಿ ಮಾತ್ರ ಯಾಕೆ ಬರುವುದಿಲ್ಲ ಎನ್ನುವುದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ. ಇದು ಈಗ ನಟ ಲಕ್ಷ್ಮಣ್ ಅವರ ಮರಣದ ವಿಚಾರದಲ್ಲಿ ಮತ್ತೊಮ್ಮೆ ಸಾಬೀತಾಗಿರುವುದು ವಿಪರ್ಯಾಸವೇ ಸರಿ ಎಂದು ಹೇಳಬಹುದಾಗಿದೆ. ಇಂತಹ ಸಂಸ್ಕೃತಿ ಕನ್ನಡ ಚಿತ್ರರಂಗದಲ್ಲಿ ನಿಲ್ಲಬೇಕು ಎನ್ನುವುದೇ ಎಲ್ಲರ ಒತ್ತಾಯವಾಗಿದೆ.

ಇನ್ನು ನಟ ಲಕ್ಷ್ಮಣ್ ಅವರು ಕೂಡ ಸಾಮಾನ್ಯದವರೇನಲ್ಲ. ಇನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಕನ್ನಡ ಚಿತ್ರರಂಗದ ಘಟಾನುಘಟಿ ಸ್ಟಾರ್ ನಟರ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಕಲಾವಿದ. ಹೇಗಿದ್ದರೂ ಕೂಡ ಅವರ ಕೊನೆಯ ಕ್ಷಣಗಳಲ್ಲಿ ಕನ್ನಡ ಚಿತ್ರರಂಗ ಅವರಿಗೆ ಕೊನೆಯ ಗೌರವವನ್ನು ಸಲ್ಲಿಸಲು ಮಾತ್ರ ಬರಲಿಲ್ಲ ಎಂಬುದು ನಿಜಕ್ಕೂ ಬೇಸರದ ವಿಚಾರವಾಗಿದೆ. ಖಂಡಿತವಾಗಿ ಸ್ಟಾರ್ ನಟರು ಕೂಡ ತಮ್ಮ ಸಿನಿಮಾದ ಕಾರ್ಯಗಳಲ್ಲಿ ಸಕ್ರಿಯರಾಗಿರುತ್ತಾರೆ ಅಲ್ಲಿಂದ ಬರಲು ಸಾಧ್ಯವಾಗುವುದಿಲ್ಲ ಹೇಗಿದ್ದರೂ ಒಮ್ಮೆಯಾದರೂ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಭೇಟಿ ಮಾಡುವಂತ ಕೆಲಸವನ್ನಾದರೂ ಮಾಡಬೇಕು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!