ಡಿ ಬಾಸ್ ಗೆ ಚಪ್ಪಲಿ ಎಸೆತ. ದೊಡ್ಮನೆಯಿಂದ ಬಂತು ಮೊದಲ ಪ್ರತಿಕ್ರಿಯೆ!

ಚಿತ್ರರಂಗ ಎಂದು ಬಂದಾಗ ಕನ್ನಡ ಚಿತ್ರರಂಗದಲ್ಲಿ ಯಾವುದೇ ಜಾತಿ ಮತಗಳಿಲ್ಲ ಎಲ್ಲರೂ ಕೂಡ ಒಂದೇ ಕುಟುಂಬ ಎಂಬುದಾಗಿ ಇರುತ್ತಾರೆ. ಒಂದೇ ಕುಟುಂಬ ಎನ್ನುವ ಕನ್ನಡ ಚಿತ್ರರಂಗದಲ್ಲಿ ನಿನ್ನೆ ನಡೆದಿರುವಂತಹ ಒಂದು ಘಟನೆ ಎಲ್ಲರ ಮನಸ್ಸಿಗೆ ಬೇಸರವನ್ನು ಉಂಟು ಮಾಡಿದೆ. ಹೌದು ಗೆಳೆಯರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಿನ್ನೆ ಅಪ್ಪು ಅಭಿಮಾನಿಗಳಿಂದ ಹೊಸಪೇಟೆಯಲ್ಲಿ ಚಪ್ಪಲಿ ಎಸೆತ ಆಗಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತಹ ಘಟನೆ.

ಕನ್ನಡ ಚಿತ್ರರಂಗವನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋದಂತಹ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಒಬ್ಬರು. ಕನ್ನಡ ಚಿತ್ರರಂಗದ ಸ್ಟಾರ್ ಹಾಗೂ ದೊಡ್ಡ ನಟರ ಪೈಕಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಕಾಣಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಡಿ ಬಾಸ್ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಕಾಣಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಹಿರಿಮೆ ಗರಿಮೆಗಳನ್ನು ಹೊಂದಿರುವ ಡಿ ಬಾಸ್ ಅವರ ಮೇಲೆ ಕೆಲವು ಕಿಡಿಗೇಡಿಗಳು ಮಾಡಿರುವ ಈ ಕೃತ್ಯ ನಿಜಕ್ಕೂ ಖಂಡನೀಯ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಕುರಿತಂತೆ ಯಾವುದೇ ಪ್ರತಿಕ್ರಿಯೆಯನ್ನು ಇದುವರೆಗೂ ನೀಡಿಲ್ಲ ಎಂಬುದಾಗಿ ತಿಳಿದು ಬಂದಿದ್ದು ದೊಡ್ಮನೆಯಿಂದ ಇದರ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂಬುದಾಗಿ ಎಲ್ಲರೂ ಕೂಡ ಕಾಯುತ್ತಿದ್ದರು. ಕೊನೆಗೂ ಕೂಡ ದೊಡ್ಮನೆಯಿಂದ ಒಂದು ಪ್ರತಿಕ್ರಿಯೆ ಈಗ ಬಂದಿದ್ದು ಇದು ಬಂದಿರುವುದು ಅಣ್ಣಾವ್ರ ಮೊಮ್ಮಗ ಅಂದರೆ ಧೀರೇನ್ ರಾಮ್ ಕುಮಾರ್ ಅವರಿಂದ. ಹಾಗಿದ್ದರೆ ಅವರು ಏನೆಂದು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ಒಂದು ವಿಷಯ ತಿಳಿಯುತ್ತಿದ್ದಂತೆ ಶಿವಣ್ಣನವರು ತಮ್ಮ ಕಾರಿನಲ್ಲಿ ಕುಳಿತುಕೊಂಡು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ದರ್ಶನ್ ಹಾಗೂ ನಾವು ಒಂದು ಕುಟುಂಬ ಇದ್ದಂತೆ. ಇದು ನನ್ನ ಮನಸ್ಸಿಗೂ ಕೂಡ ಬೇಸರ ತಂದಿದೆ ಎಂಬುದಾಗಿ ಕರುನಾಡ ಚಕ್ರವರ್ತಿ ಶಿವಣ್ಣ ಹೇಳಿದ್ದಾರೆ. ದರ್ಶನ್ ಅವರಿಗೆ ಚಪ್ಪಲಿನಲ್ಲಿ ಹೊಡೆದಿದ್ದು ನನಗೆ ಹೊಡೆದಷ್ಟೇ ಅವಮಾನವಾಗಿದೆ ಎಂದು ಬೇಸರ ತೋಡಿಕೊಂಡಿದ್ದಾರೆ ಒಬ್ಬ ಕಲಾವಿದ ನಿಗೆ ಅವಮಾನವಾದರೆ ಪ್ರತಿಯೊಬ್ಬ ಕಲಾವಿದರಿಗೂ ಅವಮಾನವಂತೆ.ಕನ್ನಡ ಚಿತ್ರರಂಗದ ಕಲಾವಿದರು ಒಂದೇ ಕುಟುಂಬದಂತೆ.. ಎಂದು ಅಣ್ಣಾವ್ರು ಹೇಳಿದ್ದಾರೆ ಈ ರೀತಿಯಾಗಿ ಹೇಳಿ ಶಿವಣ್ಣ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ ಎನ್ನುವುದು ಒಂದು ಕುಟುಂಬ ಎಲ್ಲರೂ ಕಲಾವಿದರಿಗೆ ಮೊದಲು ಗೌರವ ನೀಡುವುದನ್ನು ಕಲಿತುಕೊಳ್ಳಿ ದಯವಿಟ್ಟು ಎಂಬುದಾಗಿ ರಾಮ್ ಕುಮಾರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು ಈ ಘಟನೆಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಘಟನೆ ಆಗಬಾರದಿತ್ತು ಈಗಾಗಲೇ ನಡೆದುಹೋಗಿದೆ ನಿಜಕ್ಕೂ ಕೂಡ ಇದೊಂದು ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ತರುವಂತಹ ಘಟನೆಯಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!