DBOSS ಪಬ್ ನಲ್ಲಿ ಗಲಾಟೆ ಆದಾಗ ದರ್ಶನ್ ಏನು ಮಾಡಿದ್ರು ಗೊತ್ತಾ? ಅಸಲಿಯತ್ತನ್ನು ಬಿಚ್ಚಿಟ್ಟ ನಟಿ ರಚಿತಾರಾಮ್.

Challenging Star Darshan ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಚಾರಗಳಿಗಾಗಿ ಸುದ್ದಿಯಾಗಿದ್ದಾರೆ. ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು ಈ ಚಿತ್ರದ ಬಗ್ಗೆ ಸಾಕಷ್ಟು ಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್(YouTube) ನಲ್ಲಿ ಕಂಡು ಹಾಗೂ ಕೇಳಿ ಬರುತ್ತಿದೆ. ಇದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಕೂಡ ಕೆಲವೊಂದು ವಿಚಾರಗಳು ಕೇಳಿ ಬಂದಿದ್ದು ಅದರ ಕುರಿತಂತೆ ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ.

ನಿಮಗೆಲ್ಲ ನೆನಪಿರಬಹುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟಾಪ್ ಫ್ಲೋರ್(Top Floor) ನಲ್ಲಿ ಪಾರ್ಟಿ ಮಾಡುತ್ತಿರುವ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ಕೆಲವರಿಗೆ ಬೈದ ವಿಡಿಯೋ ವೈರಲ್(Viral) ಆಗಿತ್ತು. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಂತೆ ಹಲವಾರು ಜನರು ಟೀಕೆ ಟಿಪ್ಪಣಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದರು. ಆದರೆ ಇದರ ಕುರಿತಂತೆ ಸತ್ಯಾಂಶವನ್ನು ತಿಳಿಯಲು ಕೂಡ ಯಾರು ಹೋಗಲಿಲ್ಲ. ಕೊನೆಗೂ ಇದರ ಬಗ್ಗೆ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ರಹಸ್ಯವನ್ನು ಬಯಲು ಮಾಡಿದ್ದಾರೆ.

Rachita ram

ಹೌದು ಮಿತ್ರರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರಿದಂತೆ ನಟ ನಟಿಯರು ಮೈಸೂರಿನ ಪಬ್(Pub) ಒಂದರಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ಸಮಯದಲ್ಲಿ ಒಬ್ಬ ಹುಡುಗ ನಟಿಮಣಿಯರ ಫೋಟೋ ಹಾಗೂ ವಿಡಿಯೋಗಳನ್ನು ಅವರ ಅನುಮತಿ ಇಲ್ಲದೆ ತೆಗೆದುಕೊಳ್ಳುತ್ತಿದ್ದ. ಇದನ್ನು ನೋಡಿದಂತಹ ಡಿ ಬಾಸ್ ಅವರು ನನ್ನ ಜೊತೆ ಬಂದಿದ್ದಾರೆ ಹೀಗಾಗಿ ಅವರ ಸುರಕ್ಷತೆಯ ಜವಾಬ್ದಾರಿ ನನ್ನ ಮೇಲಿದ್ದು ನೀವು ಅಭಿಮಾನಿಗಳಾಗಿ(Fans) ಈ ರೀತಿ ಮಾಡುವುದು ಸರಿಯಲ್ಲ ಎಂಬುದಾಗಿ ನಯವಾಗಿಯೇ ಮೊದಲಿಗೆ ಹೇಳಿದ್ದಾರೆ. ಆದರೆ ಆತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ವಿನಯದ ಮಾತನ್ನು ಕೇಳದೆ ಅತಿರೇಕವಾಗಿ ಆಡಿದ್ದಾನೆ.

ಅದಕ್ಕಾಗಿಯೇ ಕೆರಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆತನಿಗೆ ಹಿಗ್ಗಾಮುಗ್ಗ ಬೈದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೈದಿರುವ ಧ್ವನಿ ಮಾತ್ರ ಕಂಡುಬಂದಿದ್ದು ಅದಕ್ಕಿಂತ ಮುಂಚೆ ಆತನಿಗೆ ಬುದ್ಧಿ ಮಾತು ಹೇಳಿರುವ ಧ್ವನಿ ಕೇಳಿ ಬಂದಿಲ್ಲ ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ(Social Media) ಆ ವಿಡಿಯೋದ ಬಗ್ಗೆ ತಪ್ಪಾಗಿ ತಿಳಿದುಕೊಂಡು ಜನರು ಪ್ರತಿಕ್ರಯಿಸುತ್ತಿದ್ದಾರೆ. ಈಗಲಾದರೂ ಈ ವಿಚಾರವನ್ನು ಅರ್ಥ ಮಾಡಿಕೊಂಡು ದರ್ಶನ ಅವರ ವ್ಯಕ್ತಿತ್ವದ ಬಗ್ಗೆ ಇರುವಂತಹ ನಿಮ್ಮ ತಪ್ಪು ಕಲ್ಪನೆಯನ್ನು ಸರಿಪಡಿಸಿಕೊಳ್ಳಿ ಎಂಬುದಾಗಿ ರಚಿತಾ ರಾಮ್ ಅವರು ಹೇಳಿದ್ದಾರೆ.

Leave a Comment

error: Content is protected !!