ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿ ಆಗಿರುವ ಅದಿತಿ ಪ್ರಭುದೇವ (aditi prabhudeva) ಖ್ಯಾತ ಉದ್ಯಮಿ ಹಾಗೂ ಕಾಫಿ ಎಸ್ಟೇಟ್ ಮಾಲಿಕ ಆಗಿರುವ ಯಶಸ್ ಅವರನ್ನು ಪ್ರೀತಿಸಿ ಕುಟುಂಬಸ್ಥರು ಗುರು ಹಿರಿಯರು ಹಾಗೂ ಸ್ನೇಹಿತರು ಮತ್ತು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಕೆಲವು ಸಮಯಗಳ ಹಿಂದಷ್ಟೇ ಎಂಗೇಜ್ಮೆಂಟ್ ಆಗುವ ಮೂಲಕ ತಮ್ಮ ಮದುವೆಯ ಸುಳಿವನ್ನು ಮೊದಲೇ ಅದಿತಿ ಪ್ರಭುದೇವ ಬಿಟ್ಟುಕೊಟ್ಟಿದ್ದರು.
ಇನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿರುವಂತಹ ಈ ಅದ್ದೂರಿ ಮದುವೆಯಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್ ಅವರ ಮನೆಯವರು ಸ್ನೇಹಿತರು ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಗಣ್ಯಾತಿ ಗಣ್ಯರು ಕೂಡ ಆಗಮಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು ರಂಜಿನಿ ರಾಘವನ್ ಶ್ರೀನಗರ ಕಿಟ್ಟಿ ಸೇರಿದಂತೆ ಹಲವಾರು ಕನ್ನಡದ ತಾರೆಯರು ಕೂಡ ಈ ಮದುವೆಗೆ ಆಗಮಿಸಿದ್ದರು.
ಶಾಸ್ತ್ರವಾಗಿ ಹಾಗೂ ಸಂಪ್ರದಾಯ ಬದ್ಧವಾಗಿ ನಡೆದಿರುವ ಈ ಮದುವೆಯಲ್ಲಿ ಅದಿತಿ ಪ್ರಭುದೇವ (aditi orabhudeva) ಹಾಗೂ ಯಶಸ್ (yashas) ಇಬ್ಬರೂ ಕೂಡ ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇನ್ನೂ ಮದುವೆಯಾಗಿ ಎರಡು ದಿನ ಕೂಡ ಕಳೆದಿಲ್ಲ ಅದಾಗಲೇ ಯಶಸ್ ಅವರ ಕಡೆಯಿಂದ ಆಶ್ಚರ್ಯಕರ ಹೇಳಿಕೆ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಗಳಿಂದ ಹೊರ ಬಂದಿದೆ. ಅಷ್ಟಕ್ಕೂ ನಡೆದಿರುವುದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಮಿತ್ರರೇ ಮದುವೆ ಆಗಿರುವ ಕೆಲವೇ ದಿನಗಳಲ್ಲಿ ಅದಿತಿ ಪ್ರಭುದೇವ ಅವರ ಪತಿ ಆಗಿರುವ ಯಶಸ್ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದನ್ನೇ ತಮ್ಮ instagram ಖಾತೆಯಲ್ಲಿ ಯಶಸ್ ಅವರು ನನ್ನ ಸೋಶಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗಿದ್ದು ಯಾವುದೇ ರೀತಿಯ ಮೆಸೇಜ್ ಗಳಿಗೂ ಕೂಡ ರಿಪ್ಲೈ ಮಾಡಬೇಡಿ ಕಾನೂನಾತ್ಮಕ ಕ್ರಮಗಳನ್ನು ಅತಿ ಶೀಘ್ರದಲ್ಲಿ ಕೈಗೊಳ್ಳಲಾಗುವುದು ದೂರನ್ನು ದಾಖಲಿಸಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.