Chanakya Neethi: ಜೀವನದಲ್ಲಿ ಉದ್ದಾರ ಆಗಲು ಈ ಮೂರು ಕೆಲಸಗಳನ್ನು ಬೆಳಗ್ಗೆ ಎದ್ದ ತಕ್ಷಣವೇ ಮಾಡುವುದು ಒಳ್ಳೆಯದು ಇಲ್ಲವಾದಲ್ಲಿ ದರಿದ್ರ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

Chanakya Neethi ಪ್ರತಿಯೊಬ್ಬರೂ ಕೂಡ ನಮಗೆ ಈ ದಿನ ಒಳ್ಳೇದಾಗಿರಲಿ ಎಂಬುದಾಗಿ ಭಾವಿಸುತ್ತಾರೆ ಆದರೆ ಅದಕ್ಕೆ ಅವರು ಕೆಲವೊಂದು ಪ್ರಯತ್ನ ಪಟ್ಟರೆ ಮಾತ್ರ ಅದು ನಿಜವಾಗಲೂ ಸಾಧ್ಯ. ಹಾಗಿದ್ದರೆ ಬನ್ನಿ, ದರಿದ್ರ ನಿಮ್ಮಿಂದ ದೂರ ಹೋಗಲು ಬೆಳಗ್ಗೆ ಎದ್ದು ತಕ್ಷಣ ನೀವು ಏನು ಮಾಡಬೇಕು ಎಂಬುದನ್ನು ತಿಳಿಯೋಣ.

ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ಆದಷ್ಟು ಬೇಗ ಶುಚಿಯಾಗಿ ಸಿದ್ಧವಾಗುವುದನ್ನು ನೋಡಿಕೊಳ್ಳಿ ಯಾಕೆಂದರೆ ಸ್ನಾನ ಮಾಡಿ ಹಲ್ಲುಜ್ಜಿ ರೆಡಿಯಾಗುವುದು ಕೇವಲ ನಿಮಗೆ ಒಂದು ಕ್ರಿಯೆ ಆಗಿರಬಹುದು ಆದರೆ ನಿಮ್ಮ ಮನಸ್ಸಿಗೆ ಹಾಗೂ ದೇಹಕ್ಕೆ ಅದೊಂದು ನಿಜವಾದ ದಿನ ಪ್ರಾರಂಭವಾದಂತಹ ಅನುಭವವನ್ನು ನೀಡುತ್ತದೆ.

ಆದಷ್ಟು ಬೆಳಗ್ಗೆ ಎದ್ದ ತಕ್ಷಣ ದೇಹಕ್ಕೆ ವ್ಯಾಯಾಮದಂತಹ ಚಟುವಟಿಕೆಗಳನ್ನು ನೀಡಿದರೆ ಜಡಗುಂಡಿರುವ ದೇಹ ಮತ್ತೆ ಲವಲವಿಕೆಯಿಂದ ಆಕ್ಟಿವ್ ಆಗುತ್ತದೆ. ಹೀಗಾಗಿ ಇದನ್ನು ಪ್ರತಿಯೊಬ್ಬರೂ ಕೂಡ ಅನುಸರಿಸುವುದು ದೈಹಿಕ ಆರೋಗ್ಯಕ್ಕೆ ಅತ್ಯಂತ ಅವಶ್ಯಕ ಎಂದು ಹೇಳಬಹುದಾಗಿದೆ.

ಎಲ್ಲದಕ್ಕಿಂತ ಪ್ರಮುಖವಾಗಿ ನೀವು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುವ ಮುನ್ನ ಆ ಕೆಲಸವನ್ನು ನೀವು ಹೇಗೆ ಮಾಡಬಲ್ಲಿರಿ ಎನ್ನುವಂತಹ ಮಾನಸಿಕ ಸ್ಥಿತಿ ಅನ್ನು ಮೊದಲ ನಿರ್ಧರಿಸಿಕೊಂಡು ಕೆಲಸಕ್ಕೆ ಹೋದರೆ ಖಂಡಿತವಾಗಿ ನೀವು ಆ ಕೆಲಸದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗುತ್ತೀರಿ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಈ ಮೂರು ವಿಚಾರಗಳನ್ನು ಬೆಳಗ್ಗೆ ಎದ್ದ ತಕ್ಷಣ ನೀವು ಮಾಡಬೇಕು ಹಾಗೂ ಇದರಿಂದಲೇ ನಿಮ್ಮ ದಿನ ನಿರ್ಧಾರವಾಗುತ್ತದೆ.

Leave a Comment

error: Content is protected !!