ಇವುಗಳಲ್ಲಿ ನಿಮ್ಮ ಒಂದು ನಂಬರ್ ಆಯ್ಕೆ ಮಾಡಿ ನೀವು ಹೇಗೆ ಅನ್ನೋದನ್ನ ತಿಳಿಸುತ್ತೇವೆ

ಈ ಜೀವ ಜಗತ್ತು ಸೃಷ್ಟಿ ಆಗಿರುವುದೆ ದೇವರಿಂದ ಎನ್ನುತ್ತೇವೆ. ಅದರಲ್ಲೂ ಪ್ರಕೃತಿಯ ಮೂಲ ದೈವವೆಂದು ಮನುಷ್ಯನನ್ನು ಕರೆಯಲಾಗುತ್ತದೆ. ಪಂಚಭೂತಗಳಾದ ನೀರು, ಗಾಳಿ, ಭೂಮಿ, ಬೆಂಕಿ, ಆಕಾಶ ಇವುಗಳನ್ನು ಪಂಚ ತತ್ವಗಳೆಂದೂ ಹಾಗೂ ಸಕಲ ಪ್ರಾಣಿಗಳು ಕೂಡಾ ದೈವದ ಸ್ವರೂಪವೇ ಎನ್ನಲಾಗಿದೆ. ಕೆಲವು ಪ್ರಾಣಿ ಹಾಗೂ ಪಕ್ಷಿಗಳು ಮಾನವನ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಹೇಳುತ್ತವೆ. ಅದರಂತೆ ಹಸ್ತ ಸಾಮುದ್ರಿಕ, ಜಾತಕ, ಸಂಖ್ಯಾ ಶಾಸ್ತ್ರದಂತಹ ಮತ್ತಷ್ಟು ವಿಧದಲ್ಲಿ ಜ್ಯೋತಿಷ್ಯ ಹೇಳುತ್ತಾರೆ. ಹಾಗೆಯೆ ಕೆಲವರೂ ಅಕ್ಷರ ಹಾಗೂ ಸಂಖ್ಯೆಗಳನ್ನು ಇಟ್ಟುಕೊಂಡು ಸಹ ಭವಿಷ್ಯ ಹೇಳುತ್ತಾರೆ. ಅಂದರೆ ನಾವು ಹೇಳಿದ ಸಂಖ್ಯೆ ಅಥವಾ ಅಕ್ಷರದಿಂದ ಭವಿಷ್ಯ ಹೇಳುತ್ತಾರೆ. ಅದು ಹೇಗೆ ಎನ್ನುವುದನ್ನು ನಾವು ಈ ಲೇಖನದಲ್ಲಿ ನೋಡೋಣ. ಹೇಗೆಂದರೆ ಒಂದರಿಂದ ಆರರ ವರೆಗಿನ ಸಂಖ್ಯೆಯಲ್ಲಿ ಯಾವುದಾರೂ ಒಂದನ್ನು ಆಯ್ದುಕೊಳ್ಳಬೇಕು.

ಇದರಲ್ಲಿ ಆಯ್ಕೆ ಒಂದು ಎನ್ನುವ ಸಂಖ್ಯೆ ಆಗಿದ್ದಲ್ಲಿ. ಒಂದು ಸಮೃದ್ದಿ, ಹೊಸ ಸಂಪತ್ತು ಹಾಗೂ ಪ್ರೀತಿ, ಸುರಕ್ಷತೆ ದೊರೆಯುತ್ತದೆ. ಪರಿಶ್ರಮಕ್ಕೆ ತಕ್ಕನಾದ ಫಲ ದೊರೆಯುತ್ತದೆ. ಆಧ್ಯಾತ್ಮಿಕ ಚಿಂತನೆ ಮಾಡುವರು ಅದಕ್ಕೆ ಮಹತ್ವ ನೀಡುವರು ಎನ್ನುತ್ತದೆ ಶಾಸ್ತ್ರ. ತುಂಬಾ ಮಹತ್ವದ ವಿಚಾರಗಳನ್ನು ಆದಷ್ಟು ಬೇಗ ತಿಳಿದುಕೊಳ್ಳುವರು. ಸಂಖ್ಯೆ ಎರಡು ನಿಮ್ಮ ಆಯ್ಕೆ ಆಗಿದ್ದರೆ ಜೀವನದಲ್ಲಿ ಸ್ವಾತಂತ್ರ್ಯ ಹಾಗೂ ಬದಲಾವಣೆಗಳನ್ನು ಕಾಣಬಹುದು. ನಡೆಯುವ ಮಾರ್ಗದಲ್ಲಿ ಹೊಸತನವಿರುತ್ತದೆ. ಹೊಸ ಸ್ಥಳ, ಹೊಸ ಮಾರ್ಗ, ಹೊಸ ಅನುಭವವನ್ನೂ ಕಾಣುತ್ತಾರೆ. ಆಯ್ಕೆ ಮೂರು ಆಗಿದ್ದಲ್ಲಿ. ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಪ್ರಗತಿ ನಿಮ್ಮದಾಗಿರುತ್ತದೆ. ಹಿಂದಿನ ಹಳೆಯ ಕನಸುಗಳು ನನಸಾಗುವ ಸಂಭವವಿದೆ. ದೀರ್ಘಾಯುಷ್ಯ ಹೊಂದಿರುತ್ತಾರೆ. ಯಶಸ್ಸು, ಆರೋಗ್ಯ, ಶಕ್ತಿ ಇವರದ್ದಾಗಿರುತ್ತದೆ.

ಆಯ್ಕೆ ನಾಲ್ಕು ಆಗಿದ್ದರೆ ಕೆಲವು ತೊಂದರೆಗಳಿಗೆ ತಿಳಿದೊ, ತಿಳಿಯದೆಯೊ, ಸಿಲುಕುತ್ತಾರೆ. ಉನ್ನತ ಸ್ಥಾನವನ್ನು ಅಲಂಕರಿಸುವುದರಿಂದ ಈ ಸಮಸ್ಯೆಗಳಿಂದ ಪಾರಾಗಿ ಬರುತ್ತಾರೆ. ಇನ್ನು ಸಂಖ್ಯೆ ಐದನ್ನು ಆಯ್ಕೆ ಮಾಡಿದ್ದರೆ ಇವರು ದಾನ ಮಾಡಲು ತಯಾರಾಗಿರುತ್ತಾರೆ ಹಾಗೆಯೆ ದಾನ ಸ್ವೀಕರುಸುತ್ತಾರೆ. ಇದರಿಂದ ಇತರರಿಗೆ ಹತ್ತಿರವಾಗಿರುವ ವ್ಯಕ್ತಿಯಾಗಿರುತ್ತಾರೆ. ಜ್ಞಾನ ಹರಡುವುದರ ಜೊತೆಗೆ ಇತರರ ಬಗ್ಗೆ ಕಾಳಜಿ ಮಾಡುವವರು ಇವರಾಗಿರುತ್ತಾರೆ. ಇನ್ನು ಆಯ್ಕೆ ಆರು ಆಗಿದ್ದಲ್ಲಿ ಕೆಲವು ವಿಚಾರಗಳಲ್ಲಿ ಮಾತ್ರ ಆಸಕ್ತಿ ತೋರುವ ಇವರು ಆಧ್ಯಾತ್ಮ ಹಾಗೂ ಭಾವನಾತ್ಮಕವಾಗಿ ಪ್ರಯಾಣ ಬೆಳೆಸುತ್ತಾರೆ. ಹೊಸ ಆರಂಭ ಮುಂದಿರುತ್ತದೆ. ಅತ್ಯುತ್ತಮ ಜೀವನ ನಡೆಸುವ ಇವರಿಗೆ ದೀರ್ಘ ಕಾಲ ದುಃಖ ಹಾಗೂ ಅದರ ಆಕಸ್ಮಿಕ ಪರಿಣಾಮವನ್ನೂ ಎದುರಿಸುವ ಸಂದರ್ಭ ಬರುವುದು. ಇವೆಲ್ಲವೂ ಸಂಖಾಶಾಸ್ತ್ರಕ್ಕೆ ಒಂದು ಸಣ್ಣ ಉದಾಹರಣೆಯಾಗಿದೆ ಅಷ್ಟೇ.

Leave a Comment

error: Content is protected !!