ಧರ್ಮಸ್ಥಳಕ್ಕೆ ಹೋಗುವವರು ತಪ್ಪದೇ ಈ ದೇಗುಲಕ್ಕೆ ಭೇಟಿ ನೀಡಿ

ಇಲ್ಲಿರುವಂತಹ ಶಕ್ತಿಶಾಲಿ ಗಣೇಶ ದೇವಾಲಯಕ್ಕೆ ಬಂದು ಗಂಟೆಯನ್ನ ಅರ್ಪಿಸಿದರೆ ಸಾಕು. ಮಹಾ ಗಣೇಶನ ಕೃಪೆಯಿಂದ ನಿಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ನೆರವೇರುತ್ತದೆ. ಯಾರಿಗೆ ಕಂಕಣ ಭಾಗ್ಯ, ಮಕ್ಕಳಿಲ್ಲ ಅವರು ಇಲ್ಲಿಗೆ ಬಂದು ಹರಕೆ ಕಟ್ಟಿಕೊಂಡು ತೀರಿಸಿದರೆ ಸಾಕು. ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಈ ದೇವಸ್ಥಾನ ಇರೋದಾದ್ರೋ ಎಲ್ಲಿ. ಇಲ್ಲಿರುವ ಗಣೇಶನಿಗಿರುವ ಶಕ್ತಿಯಂಥದ್ದು ಅನ್ನೋದನ್ನ ತಿಳಿಯ

ನಮ್ಮ ದೇಶದಲ್ಲಿ ಸಾಕಷ್ಟು ಗಣೇಶನ ದೇವಸ್ಥಾನಗಳಿರುತ್ತದೆ. ಆದರೆ ಈ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪೊಕ್ಕಡದಲ್ಲಿರುವ ಗಣೇಶನ ದೇವಾಲಯಯೂ ಕೂಡ ಒಂದು. ಬಹಳ ಪ್ರಭಾವಶಾಲಿ ಮಹಿಮಾನ್ವಿತ ದೇವಾಲಯವಾಗಿರುತ್ತೆ ಅದುವೇ ಸೌತಡ್ಕ ಮಹಾಗಣಪತಿ ದೇವಾಲಯ. ಇದು ಪವಿತ್ರ ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿ ತಾಣವಾಗಿದೆ. ಈ ದೇವಸ್ಥಾನದ ಇತಿಹಾಸವನ್ನ ನೋಡುವುದಾದರೆ.

ಗೋಪಾಲಕರಿಗೆ ಕಾಡಿನಲ್ಲಿ ಕಲ್ಲಿನ ಗಣಪತಿ ಸಿಗುತ್ತದೆ ಆ ಗಣಪತಿಯನ್ನ ಗೋಪಾಲಕರು ಒಂದು ಕಟ್ಟೆಯ ಮೇಲೆ ಪ್ರತಿಷ್ಟಾಪನೆ ಮಾಡ್ತಾರೇ.ಆ ಸ್ಥಳವೇ ಇಂದು ಸೌಕಡ್ಕ ಸ್ಥಳವೆಂದೆನಿಸಿದೆ. ಗೋಪಾಲಕರು ಸೌತೆಕಾಯಿಯನ್ನ ಸಮರ್ಮಿಸಿದರಿಂದ ಸೌತಡ್ಕ ಎನ್ನುವ ಹೆಸರು ಈ ದೇವಸ್ಥಾನಕ್ಕೆ ಬಂದಿದೆ. ಇಂದಿಗೂ ಈ ದೇವಾಲಯದ ಗಣೇಶನಿಗೆ ಸೌತೆಕಾಯಿ ಸಮರ್ಪಿಸುವ ಆಚರಣೆ ಮುಂದುವರೆದಿದೆ.

ಈ ದೇವಸ್ಥಾನದ ವಿಶೇಷತೆ ಎಂದರೆ ಈ ದೇವಸ್ಥಾನಕ್ಕೆ ಯಾವುದೇ ರೀತಿಯಾದ ಕಟ್ಟಡಗಳಿಲ್ಲ, ಗೋಪುರ, ಗರ್ಭಗುಡಿ ಅನ್ನೋದು ಇಲ್ಲ.ಬದಲಾಗಿ ಇದೊಂದು ಬಯಲು ಗಣಪತಿ.ತೆರೆದ ಸ್ಥಳದಲ್ಲಿ ಗಣೇಶ ನೆಲೆಸಿದ್ದಾನೆ. ಹರಕೆ ಹೊತ್ತು ಈ ದೇವಸ್ಥಾನಕ್ಕೆ ಬೇಡಿಕೊಂಡರೆ 9 ತಿಂಗಳೊಳಗಾಗಿ ಅವರ ಬೇಡಿಕೆ ಇಡೇರುತ್ತಂತೆ. ಅದರಂತೆ ಮರುದಿನವೇ ಬಂದು ಗಂಟೆಯನ್ನ ಕಟ್ಟುತ್ತಾರೆ ಇಲ್ಲಿನ ಭಕ್ತರು. ಹಾಗಾಗಿ ಈ ದೇವಾಲಯದಲ್ಲಿ ಸಾವಿರಾರು ಗಂಟೆಗಳನ್ನ ಕಾಣಬಹುದಾಗಿದೆ.

ಈ ದೇವಸ್ಥಾನದಲ್ಲಿ ವಿಶೇಷವಾಗಿ ಅಪ್ಪ ಕಜ್ಜಾಯ, ಪಂಚ ಕಜ್ಜಾಯ, ರಂಗಪೂಜೆ,ಮೂಡಪ್ಪ ಸೇವೆ ಈ ಕ್ಷೇತ್ರದಲ್ಲಿ ನಡೆಯುವ ಸೇವೆಗಳಾಗಿರುತ್ತವೆ. ಇಲ್ಲಿ ಗೋಶಾಲೆಗಳು ಕೂಡ ಇರುತ್ತದೆ. 150 ರಿಂದ 200 ಗೋವುಗಳನ್ನ ಇಲ್ಲಿ ಕಾಣಬಹುದಾಗಿದೆ. ದಿನದ 24 ಗಂಟೆಯೂ ಈ ದೇವಸ್ಥಾನ ತೆರದಿರುತ್ತದೆ.

ಈ ದೇವಸ್ಥಾನಕ್ಕೆ ನೀವು ಬರುವುದಾದರೂ ಹೇಗೆ ಅನ್ನೋದಾದ್ರೆ ಧರ್ಮಸ್ಥಳದಿಂದ 16 ಕಿ.ಮೀ.ದೂರದಲ್ಲಿದೆ ಇ ದೇವಸ್ಥಾನ. ಅದುವೇ ಸೌತಡ್ಕ. ನೀವೂ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಪ್ರವಾಸಕ್ಕೆ ಬಂದರೆ ಈ ದೇವಸ್ಥಾನಕ್ಕೂ ಬಂದು ಗಣೇಶನ ದರ್ಶನ ಪಡೆದು ಹರಕೆ ಕಟ್ಟಿಕೊಂಡು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

Leave a Comment

error: Content is protected !!