ಬೆಂಗಳೂರಿನಲ್ಲಿ ಇರುವಂತ ಈ ಹತ್ತು ಪ್ರಮುಖ ದೇವಾಲಯಗಳನ್ನು ಒಮ್ಮೆಯಾದರೂ ನೋಡಲೇ ಬೇಕು

ಸಿಲಿಕಾನ್ ಸಿಟಿ ಕರ್ನಾಟಕದ ರಾಜಧಾನಿ ಬೆಂಗಳೂರು ಎಂದು ಕರೆಸಿಕೊಳ್ಳುವ ಇಲ್ಲಿ ಬರಿ ವ್ಯಾವಹಾರಿಕ ಕಟ್ಟಡಗಳು ಅಷ್ಟೇ ಅಲ್ಲದೆ ಪ್ರಮುಖ ಸ್ಥಳಗಳು ಹಾಗೂ ಸುಪ್ರಸಿದ್ದ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಅಷ್ಟಕ್ಕೂ ಇಲ್ಲಿ ಇರುವಂತ ಪ್ರಮುಖ ದೇವಾಲಯಗಳು ಹಾಗೂ ಇದರ ವಿಶೇಷತೆಯನ್ನು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ ದೊಡ್ಡಗಣಪತಿ ದೇವಸ್ಥಾನ: ಕೆಂಪೇಗೌಡರ ಕಾಲದ ಏಕ ಶಿಲೆಯ 18 ಅಡಿ ಎತ್ತರ 16 ಅಡಿ ಅಗಲದ ಚತುರ್ಭುಜ ಗಣಪತಿ. ಕೇವಲ ದೇವರ ವಿಗ್ರಹವಷ್ಟೇ ಆಗಿರದೇ ಶಿಲ್ಪಕಲೆಯ ಅದ್ಭುತ ರಚನೆಯಾಗಿ ಈ ಗಣಪತಿ ವಿಗ್ರಹ ಸಾಕ್ಷಿ ಹೇಳುತ್ತದೆ. ಸ್ಥಳ: ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು.

2)ಬೃಹತ್ ನಂದಿ ದೇವಾಲಯ: ಇದು ಜಗತ್ತಿನ ಏಕೈಕ ನಂದಿ ದೇವಸ್ಥಾನ. ಈ ಸ್ಥಳಕ್ಕೆ ಬಸವನಗುಡಿ ಎಂದು ಹೆಸರು ಬರಲು ಕಾರಣವೇ ಈ ದೇವಸ್ಥಾನ. ಈ ಶಿಲಾನಂದಿ ಪ್ರತೀವರ್ಷ ಬೆಳೆಯುತ್ತಿರುವುದು ನಿಸರ್ಗದ ವಿಸ್ಮಯ. ಕಾರ್ತಿಕ ಮಾಸದ ಕೊನೆಯ ಸೋಮವಾರ ಇಲ್ಲಿ ನಡೆಯುವ ಕಡಲೆಕಾಯಿ ಮೇಳ ಇನ್ನೂ ವಿಶಿಷ್ಟ. ಈ ನಂದಿಯ ಆಶೀರ್ವಾದ ಪಡೆಯಬೇಕೆಂದರೆ ಬಸವನಗುಡಿ ನಂದಿ ದೇವಾಲಯಕ್ಕೆ ಭೇಟಿ ನೀಡಿ.

3)ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನ: ಸಂಕ್ರಾಂತಿಯಂದು ಮಾತ್ರ ನಂದಿಯ ಕೋಡುಗಳ ಮಧ್ಯೆ ಹಾದು ಶಿವಲಿಂಗಗಳ ಮೇಲೆ ಸೂರ್ಯಕಿರಣಗಳು ತಲುಪುವ ಈ ಆಶ್ಚರ್ಯಜನಕ ಗುಹಾದೇವಾಲಯವನ್ನು 7 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಗವಿಪುರಂ ನ ಕೆಂಪೇಗೌಡ ನಗರದಲ್ಲಿ ಈ ದೈವೀ ಗುಹಾ ದೇವಾಲಯಕ್ಕೆ ನೀವು ಭೇಟಿ ನೀಡಬಹುದು.

4) ರಾಗಿಗುಡ್ಡ ಆಂಜನೇಯ ದೇವಸ್ಥಾನ: ಗುಡ್ಡದ ಮೇಲಿರುವ ಈ ಆಂಜನೇಯ ದೇವಸ್ಥಾನದ ತಟದಲ್ಲಿ ರಾಜರಾಜೇಶ್ವರಿ ಹಾಗೂ ನವಗ್ರಹ ದೇವಾಲಯಗಳಿವೆ. ಸ್ಥಳ: ಜಯನಗರ 9ನೇ ಬ್ಲಾಕ್
5)ಕಾಡುಮಲ್ಲೇಶ್ವರ ದೇವಸ್ಥಾನ:ಈ ದೇವಾಲಯವನ್ನು 16 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಪಕ್ಕದಲ್ಲಿ ನಂದಿ ಬಾಯಿಯಿಂದ ನೀರು ಹರಿಯುವ ನಂದಿತೀರ್ಥವು ವಿಶೇಷವಾಗಿದೆ. ಮಲ್ಲೇಶ್ವರಂ ನ ಸಂಪಿಗೇ ರಸ್ತೆಯಲ್ಲಿರುವ ಈ ಶಿವನ ದೇವಸ್ಥಾನದಿಂದಲೇ ಈ ಸ್ಥಳಕ್ಕೆ ಮಲ್ಲೇಶ್ವರಂ ಎಂಬ ಹೆಸರು ಬಂದಿದೆ.

6) ಕೋಟೆವೆಂಕಟರಮಣ ದೇವಸ್ಥಾನ: 1689 ರಲ್ಲಿ ಚಿಕ್ಕರಾಜೇಂದ್ರ ಒಡೆಯರ್ ನಿರ್ಮಿಸಿರುವ ಈ ದೇವಸ್ಥಾನ ಟಿಪ್ಪುವಿನ ಅರಮನೆಯ ಪಕ್ಕದಲ್ಲಿದೆ. ವೈಕುಂಠ ಏಕಾದಶಿ ಅತೀ ವಿಜೃಂಭಣೆಯಿಂದ ಜರಗುವ ಈ ದೇವಸ್ಥಾನದಲ್ಲಿ ದ್ರಾವಿಡ ಹಾಗೂ ವಿಜಯನಗರ ಶೈಲಿಯ ವಾಸ್ತುಶಿಲ್ಪ ಕಂಡು ಬರುತ್ತದೆ.
ಸ್ಥಳ: ಕೆ ಆರ್ ಮಾರ್ಕೇಟ, ಬೆಂಗಳೂರು.

7) ಶ್ರೀ ಬನಶಂಕರಿ ದೇವಸ್ಥಾನ:1915 ರಲ್ಲಿ ಸೋಮಣ್ಣ ಶೆಟ್ಟಿಯವರು ನಿರ್ಮಿಸಿದ ಈ ದೇವಾಲಯ ಬದಾಮಿಯ ಬನಶಂಕರಿಯಿಂದ ದೇವಿಯ ಮೂರ್ತಿಯನ್ನು ತಂದು ಇಲ್ಲಿ ಸ್ಥಾಪಿಸಲಾಗಿತ್ತು. ವಿಶೇಷವಾಗಿ ರಾಹುಕಾಲದಲ್ಲಿ ಪೂಜೆ ನಡೆಸಲಾಗುವ ಈ ದೇವಸ್ಥಾನ ಬೆಂಗಳೂರು ದಕ್ಷಿಣದ ಕನಕಪುರದಲ್ಲಿದೆ.

7)ಶ್ರೀ ಸೋಮೇಶ್ವರ ದೇವಸ್ಥಾನ: ಈ ದೇವಸ್ಥಾನ ಚೋಳರಿಂದ ನಿರ್ಮಿಸಲ್ಪಟ್ಟಿದೆ. ಇಲ್ಲಿ ಬ್ರಹ್ಮ ಹಾಗೂ ವಿಷ್ಣುವಿನ ಪೂಜೆ ನಡೆಯುತ್ತದೆ. ಹಲಸೂರು ಕೆರೆಯ ಹತ್ತಿರ ಈ ದೇವಸ್ಥಾನವಿದೆ.
8) ಧರ್ಮರಾಯಸ್ವಾಮಿ ದೇವಸ್ಥಾನ: ಇದು ವಿಶಿಷ್ಟ ಪಾಂಡವರ ದೇವಸ್ಥಾನವಾಗಿದೆ. ಗಂಗರಿಂದ 800 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿದ್ದು ಬೆಂಗಳೂರು ಕರಗ ಇಲ್ಲಿನ ವಿಶೇಷತೆ.
ಸ್ಥಳ: ತಿಗಳರ ಪೇಟೆ

9) ಇಸ್ಕಾನ್:ಇಸ್ಕಾನ್ ಸಂಸ್ಥೆಯ ಕೃಷ್ಣನ ದೇವಸ್ಥಾನ ಹರೇ ಕೃಷ್ಣಗಿರಿಯ ಮೇಲೆ ನಾಲ್ಕು ಗೋಪುರಗಳನ್ನು ಹೊಂದಿದ್ದು ಕತ್ತಲಲ್ಲಿ ಬೆಳಕಿನಾಟ ಕಣ್ಣು ತನಿಸುತ್ತದೆ.
ಸ್ಥಳ: ರಾಜಾಜಿನಗರ

10) ಶಿವೋಹಂ ದೇವಾಲಯ:ಹಳೇ ಏರಪೋರ್ಟ ರಸ್ತೆಯ ಈ ಶಿವನ ದೇವಾಲಯ 65 ಅಡಿಯ ಶಿವನ ಮೂರ್ತಿಯನ್ನು ಹೊಂದಿದೆ. ಇಲ್ಲಿ ಗಣೇಶನ ವಿಗ್ರಹ ಪೂಜೆ ಸಹ ನೆರವೇರುತ್ತದೆ. ಕೈಲಾಸ ಪರ್ವತ ಮಾದರಿಯಲ್ಲಿ ಅಮೃತ ಶಿಲೆಯಲ್ಲಿ ಕೆತ್ತಲಾದ ಶಾಂತಶಿವನ ವಿಗ್ರಹವನ್ನು ನಿಜವಾದ ಶಿವಭಕ್ತರು ನೋಡಲೇಬೇಕು.

Leave a Comment

error: Content is protected !!