ಸನ್ಮಾನ ತಿರಸ್ಕರಿಸಿದ ಅಶ್ವಿನಿ ಪುನೀತ್ ಏನ್ ಮಾಡಿದ್ದಾರೆ ನೋಡಿ

ಅನ್ ಲಾಕ್ ರಾಘವ ಸಿನಿಮಾದ ಟೈಟಲ್ ನನ್ನು ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ, ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ,ಮ್ಯಾನ್ ಆಫ್ ದಿ ಮ್ಯಾಚ್ ನಂತಹ ಅಪರೂಪದ ಸಿನಿಮಾ ಕಥೆ ಹೇಳಿ ಸಕ್ಸಸ್ ಕಂಡಿರುವ ನಿರ್ದೇಶಕ ಸತ್ಯಪ್ರಕಾಶ್ ನಿರ್ಮಾಣದ ಹೊಸ ಸಿನಿಮಾದ ಟೈಟಲ್ ನ್ನು ರಿವೀಲ್ ಆಗಿದೆ.

ಈ ವೇಳೆಯಲ್ಲಿ ಮಾತನಾಡಿದ ನಿರ್ಮಾಪಕ ಸತ್ಯಪ್ರಕಾಶ್ ಮಾತನಾಡಿ, ಇಂಡಸ್ಟ್ರೀಗೆ ಬಂದಾಗ ದೊಡ್ಡ ಟೀಂ ಕಟ್ಟಬೇಕು ಎಂಬ ಆಸೆ ಇತ್ತು. ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡ್ತಿರುವ ಈ ಸಿನಿಮಾ ನಿಜವಾದ ಕಮರ್ಷಿಯಲ್ ಸಿನಿಮಾ. ತುಂಬಾ ಹೊಸ ಪ್ರೆಸೆಂಟೇಷನ್ ನಲ್ಲಿ ಸಿನಿಮಾ ಮಾಡಿದ್ದೇವೆ. ಇಡೀ ಸಿನಿಮಾ ರೋಮ್ಯಾಂಟಿಕ್ ಕಾಮಿಡಿ ಜರ್ನಿ ಇರುತ್ತದೆ. ಮೂರು ರೀತಿ ಕಾಮಿಡಿ ಇರುತ್ತದೆ. ಪಾತ್ರ ಏನು ಮಾತಾಡ್ತಾರೆ ಅಂತಾ ಗೊತ್ತಾಗಲ್ಲ. ಆದ್ರೆ ಪ್ರೇಕ್ಷಕ ನಗ್ತಾರೆ. ಅನೂಪ್ ಸೀಳಿನ್ ಸರ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ ಎಂದರು.

ಭಾಗ್ಯರಾಜ್ , ಕಳ್ಬೆಟ್ಟದ ದರೋಡೆಕೋರರು , ರಾಜು , ಜೇಮ್ಸ್ ಬಾಂಡ್ ಚಿತ್ರಗಳನ್ನು ನಿರ್ದೇಶಿಸಿರುವ ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಡಿ ಸತ್ಯಪ್ರಕಾಶ್ ಕತೆ-ಚಿತ್ರಕತೆ-ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ‘ವೀಕೆಂಡ್’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನವನಟ ಮಿಲಿಂದ್ ನಾಯಕನಾಗಿ ಹಾಗೂ ‘ಲವ್ ಮಾಕ್ಟೇಲ್ – 2’ ಚಿತ್ರದ ರೇಚಲ್ ಡೇವಿಡ್ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ಸುಂದರ್ ವೀಣಾ, ಧರ್ಮಣ್ಣ ಕಡೂರು, ಭೂಮಿಶೆಟ್ಟಿ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದು, ಲವಿತ್ ಛಾಯಾಗ್ರಹಣ ಹಾಗೂ ಅಜಯ್ ಕುಮಾರ್ ಸಂಕಲನವಿದೆ.

ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಎನ್ನುವುದು ಸತ್ಯ, ಕಮರ್ಷಿಯಲ್ ಚಿತ್ರ ಮಾಡೋಣ ಅಂತ ಶುರು ಮಾಡಿದೆವು . ಇದರಲ್ಲಿ ಪ್ರಯತ್ನಿಸಿರುವ ವಿಷಯಗಳು ಕಮರ್ಷಿಯಲ್ ಆದರೂ , ಹೊಸ ಪ್ರಯತ್ನ ಮಾಡಿದ್ದೇವೆ . ಇದೊಂದು ರೊಮ್ಯಾಂಟಿಕ್ ಕಾಮಿಡಿ . ಒಂದು ಪ್ರಯಾಣ ಇರುತ್ತದೆ . ಬೇರೆಬೇರೆ ತರಹದ ಟೆಕ್ನಿಕ್‌ಗಳನ್ನು ಮಾಡಿದ್ದೇವೆ ಎನ್ನುತ್ತಾರೆ ಚಿತ್ರತಂಡ .

ಇನ್ನು, ಚಿತ್ರದ ನಾಯಕ ಮಿಲಿಂದ್ ಕುರಿತು ನೋಡುವುದಾದರೆ ಮಿಲಿಂದ್‌ಗೆ ದೇವರು ಒಳ್ಳೆಯ ಹೈಟು , ಮುಖ ಕೊಟ್ಟು ಕಳಿಸಿದ್ದಾರೆ . ಮಿಲಿಂದ್ ತಮ್ಮಲ್ಲಿರುವ ಕಲೆಯನ್ನು ಆಚೆ ತೆಗೆಯಬೇಕಷ್ಟೇ ಹೊರತು , ದೇವರನ್ನು ಕೇಳುವಂತದ್ದೇನೂ ಇಲ್ಲ . ಕೇಳಿಕೊಂಡರೆ , ನಿಮ್ಮನ್ನು ನೀವೇ ಕೇಳಿಕೊಳ್ಳಬೇಕು ಎನ್ನುತ್ತಾರೆ . ಸತ್ಯ ಅವರು ತನಗೆ ಏನು ಸೂಟ್ ಆಗುತ್ತದೆ ಎಂದು ಅರಿತುಕೊಂಡು ಬರೆದಿದ್ದಾರೆ ಎನ್ನುವ ಮಿಲಿಂದ್ ನಾನು ರಾಘವ ಎನ್ನುವ ಪಾತ್ರ ಮಾಡುತ್ತಿದ್ದೇನೆ.

ನಮಗೆಲ್ಲರಿಗೂ ಒಂದಲ್ಲ ಒಂದು ವಿಶೇಷತೆ ಇದ್ದೆ ಇರುತ್ತದೆ, ಯಾವುದೇ ರೀತಿಯ ಬೀಗ ಓಪನ್ ಮಾಡುವ ಶಕ್ತಿ ನನಗೆ ಈ ಚಿತ್ರದಲ್ಲಿ ಇರುತ್ತದೆ , ಆದರೆ , ಲೈಫ್ ಎಂಬ ಲಾಕ್ ಬಂದಾಗ ಒಂದಲ್ಲ ಒಂದು ಬಾರಿ ಕಚ್ಚಿಕೊಳ್ಳುತ್ತೇವೆ . ಹಾಗೆ ಕಚ್ಚಿಕೊಂಡಾಗ ಏನೆಲ್ಲ ಆಗುತ್ತದೆ . ಎನ್ನುವುದೇ ಕಥೆ ‘ ಎನ್ನುತ್ತಾರೆ ಮಿಲಿಂದ್ . ಇನ್ನು ರಚೆಲ್ ಡೇವಿಡ್ ಈ ಚಿತ್ರದಲ್ಲಿ ಆರ್ಕಿಯಾಲಜಿಸ್ಟ್ ಪಾತ್ರ ಮಾಡುತ್ತಿದ್ದೇನೆ . 500 ವರ್ಷಗಳ ಹಿಂದಿನ ನಿಧಿ ಕುರಿತ ಕಥೆ ಇದು . ಅದನ್ನು ಹೇಗೆ ಹೊರತೆಗೆಯುತ್ತೇವೆ ಎನ್ನುವುದು ಚಿತ್ರದ ಕಥೆ ‘ ಎಂದು ಕಥೆಯ ಒಂದೆಳೆ ಸಾರವನ್ನು ಬಿಚ್ಚಿಡುತ್ತಾರೆ ರಚೆಲ್.

ಇನ್ನು ನಮಗೆಲ್ಲರಿಗೂ ತಿಳಿದಿರುವಂತೆ ಈ ಸಿನಿಮಾದ ಟೈಟಲ್ ಪೋಸ್ಟರ್ ಕಾರ್ಡನ್ನು ನಮ್ಮೆಲ್ಲರ ಪ್ರೀತಿಯ ಅಪ್ಪು ಅವರ ಮಡದಿಯಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಈ ವೇಳೆಯಲ್ಲಿ ಅವರಿಗೆ ಧನ್ಯವಾದವನ್ನು ಅರ್ಪಿಸುವ ಸಲುವಾಗಿ ಸಿನಿಮಾ ತಂಡ ಅವರಿಗೆ ಸನ್ಮಾನ ಮಾಡಲು ಹೋದಾಗ ,ಅವರನ್ನು ತಡೆದು ,ಸನ್ಮಾನವೇನು ಬೇಡವೆಂದು ಹೇಳಿ ಸಿನಿಮಾಗೆ ಆಲ್ ದ ಬೆಸ್ಟ್ ಹೇಳಿದ್ದಾರೆ.

ಸತ್ಯ & ಮಯೂರ ಪಿಕ್ಚರ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಅನ್ ಲಾಕ್ ರಾಘವ’ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

Leave a Comment

error: Content is protected !!