ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ ನಂತರ ಬೇರೆ ಯಾವುದೇ ಧಾರವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ನಂತರ ಕನ್ನಡ ಕಿರುತರೆ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಬಿಗ್ ಬಾಸ್ ಮೂಲಕ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ವೈಷ್ಣವಿ ಗೌಡ ಅವರು ಯಾವಾಗ ಮದುವೆ ಆಗುತ್ತೀರಿ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದಕ್ಕೆ ಕೊನೆಗೂ ಕೂಡ ಉತ್ತರ ಸಿಗುವ ಕಾಲ ಬಂದೇ ಬಂದಿತ್ತು ಎಂಬುದಾಗಿ ಅಭಿಮಾನಿಗಳು ಭಾವಿಸಿದ್ದರು ಯಾಕೆಂದರೆ ಇತ್ತೀಚಿಗಷ್ಟೇ ವೈಷ್ಣವಿ ಗೌಡ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬುದಾಗಿ ಹೇಳುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದವು.
ಹೌದು ಮಿತ್ರರೇ ಇದರ ಕುರಿತಂತೆ ಸ್ಪಷ್ಟೀಕರಣ ನೀಡುತ್ತಾ ವೈಷ್ಣವಿ ಗೌಡ ಅವರು ಇದು ಯಾವುದೇ ಎಂಗೇಜ್ಮೆಂಟ್ ಅಲ್ಲ ನಾನಿನ್ನು ಒಪ್ಪಿಗೆಯನ್ನು ನೀಡಿಲ್ಲ ಎಂಬುದಾಗಿ ಉಲ್ಟಾ ಹೇಳಿಕೆಯನ್ನು ನೀಡುವ ಮೂಲಕ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದಾರೆ. ಅಷ್ಟಕ್ಕೂ ಈ ವೈರಲ್ ಆಗಿರುವ ಫೋಟೋ ಹಿನ್ನೆಲೆಯ ನಿಜವಾದ ವಿಚಾರ ಏನು ಎಂಬುದನ್ನು ವೈಷ್ಣವಿ ಗೌಡ ಅವರ ಹೇಳಿಕೆಯಲ್ಲೇ ಕೇಳೋಣ ಬನ್ನಿ.
ಅವರ ಹೆಸರು ವಿದ್ಯಾಭರಣ ಎನ್ನುವುದಾಗಿ. ಅವರು ಒಬ್ಬ ಉದ್ಯಮಿ. ಕೇವಲ ಮಾತುಕತೆಗಾಗಿ ಮನೆಗೆ ಬಂದಿದ್ದಾರಷ್ಟ ಯಾವುದೇ ಎಂಗೇಜ್ಮೆಂಟ್ ನಡೆದಿಲ್ಲ ನಾನಿನ್ನು ಒಪ್ಪಿಗೆ ಕೂಡ ನೀಡಿಲ್ಲ ಎಂಬುದಾಗಿ ನಟಿ ವೈಷ್ಣವಿ ಗೌಡ ಹೇಳಿಕೊಂಡಿದ್ದಾರಂತೆ. ಆದರೆ ಮದುವೆ ಫೋಟೋಗಳನ್ನು ನೋಡಿದರೆ ಹಾಗೂ ಹಾರವನ್ನು ಬದಲಾಯಿಸಿಕೊಂಡಿರುವ ರೀತಿ ನೋಡಿದರೆ ಕೂಡ ಇದು ಖಂಡಿತವಾಗಿ ಎಂಗೇಜ್ಮೆಂಟ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ವೈಷ್ಣವಿ ಗೌಡ ಅವರು ಇದನ್ನು ಮುಚ್ಚಿಟ್ಟುಕೊಳ್ಳುತ್ತಿರುವುದು ಏಕೆ ಎಂಬುದಾಗಿ ತಿಳಿದು ಬರುತ್ತಿಲ್ಲ.