ಕೋಟಿ ಕೋಟಿ ಕೊಟ್ರು ಬಿಗ್ ಬಾಸ್ ಮನೆಗೆ ಕಾಲಿಡುವುದಿಲ್ಲ ಎಂದ ಟೆನಿಸ್ ಕೃಷ್ಣ ! ಹೀಗೆ ಹೇಳುತ್ತಿರೋದು ಯಾಕೆ

ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಿಗೆ ಅವರದೇ ಆದ ಪ್ರಾಮುಖ್ಯತೆ ಇದೆ. ಅಂತೆಯೇ ಅಭಿಮಾನಿ ಬಳಗವು ಇದೆ. ಇವರ ಹಾಸ್ಯ ಚಟಾಕಿ ಮತ್ತು ನಟನೆಯನ್ನು ನೋಡಲೆಂದೇ ಚಿತ್ರಮಂದಿರಕ್ಕೆ ಹೋಗುವವರು ಬಹಳಷ್ಟು ಮಂದಿ ಇದ್ದಾರೆ. ಇವರ ಡೈಲಾಗ್ಗಳಂತೂ ಫೇಮಸ್ ಆಗಿ, ಅವರಿವರ ಬಾಯಿಯಿಂದ ಆಗಾಗ ಕೇಳುತ್ತಲೇ ಇರುತ್ತವೆ.

‘ಗಡಿಬಿಡಿ ಅಳಿಯ’ ಚಿತ್ರದಲ್ಲಿ ಜೈಲಿನಿಂದ ಬಂದ ಮಗನಿಗೆ ತಂದೆ ಊಟಕ್ಕೆ ಕರೆದಾಗ ‘ಇನ್ನೂ ಬೆಲ್ ಹೊಡಿಲಿಲ್ವೆ!?’ಎಂದು ಹೇಳಿ ಫೇಮಸ್ ಆದವರು ಇವರು. ಹೆಚ್ಚು ಪ್ರಚಲಿತವಾದ ಡೈಲಾಗ್ ಎಂದರೆ ‘ಮಾರಮ್ಮನ್ ಡಿಸ್ಕೋ’. ಕನ್ನಡದ ರಾಪ್ ಸಿಂಗರ್ ‘ಮಾರಮ್ಮನ್ ಡಿಸ್ಕೊ’ ಡೈಲಾಗ್ ಇಟ್ಟುಕೊಂಡು ರಾಪ್ ಸಾಂಗ್ ಮಾಡಿದ್ದು, ಅದರಲ್ಲಿ ಟೆನ್ನಿಸ್ ಕೃಷ್ಣ ಕಾಣಿಸಿಕೊಂಡಿದ್ದು,ಎಲ್ಲರಿಗೂ ಮೆಚ್ಚುಗೆಯಾಗಿದೆ. ತಮ್ಮ ಹಾಸ್ಯದಿಂದಲೇ ಜನಮನ ಗೆದ್ದ ಟೆನ್ನಿಸ್ ಕೃಷ್ಣ ಅವರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ರೆಕಾರ್ಡ್ ಮಾಡಿದ್ದಾರೆ. ಹಿರಿಯ ನಟ ದೊಡ್ಡಣ್ಣ ಹಾಗೂ ಟೆನ್ನಿಸ್ ಕೃಷ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಹಾಸ್ಯಗಳು ಜನರನ್ನು ಇಂದಿಗೂ ನಗಿಸುತ್ತಲೇ ಇವೆ.

ಟೆನ್ನಿಸ್ ಕೃಷ್ಣ ಅವರು ಬೆಂಗಳೂರಿನವರು.ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ ಮುಗಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಕೃಷ್ಣ ಹೆಸರಿನ ಕಲಾವಿದರು ಅದಾಗಲೇ ಇದ್ದು, ಇವರು ಸಿನಿ ರಂಗಕ್ಕೆ ಬರುವ ಮೊದಲು ಟೆನ್ನಿಸ್ ಕೋಚಿಂಗ್ ಕೂಡ ಕೊಟ್ಟಿದ್ದು, ನಂತರ ಟೆನ್ನಿಸ್ ಕೃಷ್ಣ ಎಂದೆ ಜನಪ್ರಿಯರಾಗಿದ್ದಾರೆ. 1990ರಲ್ಲಿ ಸಿನಿ ರಂಗಕ್ಕೆ ಪ್ರವೇಶ ಮಾಡಿದ್ದು.,’ರಾಜ ಕೆಂಪು ರೋಜಾ’ ಎಂಬ ಚಿತ್ರದ ಮೂಲಕ ಪರಿಚಯವಾಗಿ, ಒಂದರ ಹಿಂದೊಂದು ಅವಕಾಶ ದೊರೆತು, ಡಾ. ರಾಜಕುಮಾರ್, ಡಾಕ್ಟರ್ ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ರಂತ ಸ್ಟಾರ್ ನಟರ ಚಿತ್ರಗಳಲ್ಲಿ ಹಾಸ್ಯ ನಟರಾಗಿ ಕಂಡಿದ್ದಾರೆ.

ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಅವರು ಮಾತನಾಡಿದ್ದು, ‘ಬಿಗ್ ಬಾಸ್ ಸೀಸನ್ 2 ಇಂದ ನನ್ನ ಹೆಸರು ಸ್ಪರ್ಧಿಯಾಗಿ ಓಡಾಡುತ್ತಿದೆ. ಪ್ರತಿ ಸೀಸನ್ ಬರುವಾಗಲೂ ನನ್ನ ಹೆಸರು ಪ್ರಚಾರವಾಗುತ್ತಿದೆ. ನಾನು ಕೋಟಿ ಕೋಟಿ ಹಣ ಕೊಟ್ರು ಬಿಗ್ ಬಾಸ್ ಮನೆಗೆ ಕಾಲಿಡಲ್ಲ ಅಂತ ಹೇಳಿಬಿಟ್ಟಿದ್ದೇನೆ.ಹೇಳಿದಂತೆಯೇ ನಡೆಯುತ್ತೇನೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಲವರು ‘ಬಿಗ್ ಬಾಸ್ ಮನೆಗೆ ಕರೀಲಿ ಅಂತಾನೆ ಅವರು ಹೀಗೆ ಹೇಳುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರಂತೆ.

Leave a Comment

error: Content is protected !!