Manju Pavagada: ಬಿಗ್ ಬಾಸ್ ಗೆದ್ದಿದ್ದ ಮಂಜು ಪಾವಗಡ ಈಗ ಜೀವನದಲ್ಲಿ ಮತ್ತೊಂದು ಹೆಜ್ಜೆ ಇಡೋಕೆ ಹೊರಟ್ರು! ಕಂಜಾಜುಲೇಷನ್ ಬ್ರದರ್ ಎಂದ ಜನತೆ.

Manju Pavagada ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ನಂತರ ಕಾಮಿಡಿ ಕಿಲಾಡಿಗಳು(Comedy Kiladigalu) ವೇದಿಕೆ ಮೇಲೆ ತನ್ನ ಹಾಸ್ಯ ಪ್ರತಿಭೆಯನ್ನು ತೋರಿಸುವ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗುತ್ತಾನೆ. ಹೌದು, ನಾವ್ ಮಾತನಾಡುತ್ತಿರುವುದು ಕಾಮಿಡಿ ಕಿಲಾಡಿ ಹಾಗೂ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡರವರ(Manju Pavagada) ಕುರಿತಂತೆ.

ಬಿಗ್ ಬಾಸ್ ಕನ್ನಡ(Biggboss Kannada) ಸೀಸನ್ ನ ಕಳೆದ ಆವೃತ್ತಿಯ ವಿನ್ನರ್ ಆಗಿ ಹೊರಹೊಮ್ಮಿದ್ದ ಮಂಜು ಪಾವಗಡ ಅವರು ಅದಾದ ನಂತರ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವಂತಹ ಅವಕಾಶವನ್ನು ಕೂಡ ಪಡೆದಿದ್ದರು. ಹಲವಾರು ಸಿನಿಮಾಗಳಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ನಟಿಸಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ದಿವ್ಯ ಸುರೇಶ್(Divya Suresh) ಅವರ ಜೊತೆಗೆ ಮದುವೆಯಾಗುವ ಕುರಿತಂತೆ ಕೂಡ ಸಾಕಷ್ಟು ಸುದ್ದಿಯಾಗಿದ್ದರು. ಅದಾದ ನಂತರ ಇಬ್ಬರೂ ಕೂಡ ಕೇವಲ ಸ್ನೇಹಿತರು ಎಂಬುದನ್ನು ಇಬ್ಬರೂ ಕೂಡ ಸ್ಪಷ್ಟೀಕರಣ ನೀಡಿದ್ದರು. ಹೀಗಿದ್ದರೂ ಕೂಡ ಮಂಜು ಪಾವಗಡ ಈಗ ಮದುವೆ ಆಗಿದ್ದಾರೆ ಅದು ಕೂಡ ಒಬ್ಬ ವಿಧವೆಯನ್ನು.

ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವಂತಹ ಹೊಸ ಧಾರವಾಹಿ ಅಂತರಪಟ ಧಾರಾವಾಹಿಯಲ್ಲಿ ಮಂಜು ಪಾವಗಡ(Manju Pavagada) ಈ ಪಾತ್ರವನ್ನು ಮಾಡುತ್ತಿದ್ದು ಅದರಲ್ಲಿ ತಂದೆ ಇಲ್ಲದ ಮಗಳನ್ನು ಅವರು ನೋಡಿಕೊಳ್ಳುವಂತಹ ಹೃದಯ ತಟ್ಟುವಂತ ಕಥೆ ಇದೆ. ಕಿರುತೆರೆಯ ಧಾರವಾಹಿ ಮೂಲಕ ಮನೋರಂಜನೆ ಕ್ಷೇತ್ರದಲ್ಲಿ ಹೊಸ ಜರ್ನಿಯನ್ನು ಪ್ರಾರಂಭಿಸುತ್ತಿರುವ ನಟ ಮಂಜು ಪಾವಗಡ ಅವರಿಗೆ ಶುಭಾಶಯಗಳು ಕೋರೋಣ.

Leave a Comment

error: Content is protected !!