ವಿದ್ಯಾಭರಣ ಜೋತೆ ಎಂಗೇಜ್ಮೆಂಟ್ ಮುರಿದುಕೊಂಡ ಬೆನ್ನಲ್ಲೇ ಗಗನ್ ಜೋತೆ ಸಿಹಿ ಸುದ್ದಿ ಹಂಚಿಕೊಂಡ ವೈಷ್ಣವಿ ಗೌಡ

ಇತ್ತೀಚಿಗಷ್ಟೇ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ ಅವರು ಮದುವೆಯ ಸಿದ್ಧತೆಗಾಗಿ, ಬೊಟ್ಟಿಡುವ ಶಾಸ್ತ್ರವು ವೈಷ್ಣವಿ ಗೌಡ ಅವರ ಮನೆಯಲ್ಲಿ ನೆರವೇರಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 75ರಿಂದ 80 ಜನ ಸೇರಿದ್ದರು. ಕಾರ್ಯಕ್ರಮದ ಫೋಟೋ ವೈರಲ್ ಆಗ್ತಿದ್ದ ಹಾಗೆ ಅನಾಮಧೇಯ ಹುಡುಗಿಯರ ಆಡಿಯೋ ರಿಲೀಸ್ ಆಗಿ, ದೊಡ್ಡ ರಾದ್ಧಾಂತವಾಯಿತು.

ಮದುವೆಯ ಮೊದಲ ಹೆಜ್ಜೆಯಲ್ಲಿಯೇ ಈ ರೀತಿ ವಿಘ್ನ ಎದುರಾದ ಕಾರಣ ವೈಷ್ಣವಿ ಗೌಡ ಅವರು ಬೇಸರಗೊಂಡಿದ್ದರು. ವೈಷ್ಣವಿ ಗೌಡ ಅವರ ತಂದೆ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು, ವೈಷ್ಣವಿಯವರು ಚೇತರಿಸಿಕೊಳ್ಳಲು ಎರಡು ದಿನಗಳ ಕಾಲ ತೆಗೆದುಕೊಳ್ಳಬಹುದು ಎಂದಿದ್ದರು. ಇದರ ಬೆನ್ನಲ್ಲೇ ಹೊಸದೊಂದು ಸುದ್ದಿ ಹರಿದಾಡುತ್ತಿದೆ.

ಜೀ ಕನ್ನಡ ವಾಹಿನಿಯವರು ವಿಭಿನ್ನ ಕಥೆಗಳನ್ನು ಹೊಂದಿದ ಹೊಚ್ಚ ಹೊಸ ಧಾರವಾಹಿಗಳನ್ನು ವೀಕ್ಷಕರಿಗಾಗಿ ಹೊತ್ತು ತರುತ್ತಾರೆ. ಕಾಮಿಡಿ ಕಿಲಾಡಿಗಳು, ಸರಿಗಮಪ ಸೇರಿದಂತೆ ಹಲವಾರು ಶೋಗಳ ಮೂಲಕ ಮನೆ ಮಂದಿಗಳು ಜೀ ಕನ್ನಡ ವಾಹಿನಿಯನ್ನು ನಿರಂತರವಾಗಿ ನೋಡಲು ಪ್ರೇರೇಪಿಸುತ್ತಾರೆ. ಮುಂಬರುವ ದಿನಗಳಲ್ಲಿ ‘ಸೀತಾರಾಮ’ ಎಂಬ ಧಾರವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಸ್ವಪ್ನ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಸೀತಾರಾಮ ಧಾರವಾಹಿಯಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸಲು ಕನ್ನಡ ಕಿರುತೆರೆಯ ಖ್ಯಾತ ಕಲಾವಿದರನ್ನು ಆಯ್ದುಕೊಳ್ಳಲಾಗಿದೆಯಂತೆ. ಈಗಾಗಲೇ ಅವರು ಕಿರುತೆರೆಯ ಧಾರವಾಹಿಗಳಿಗೆ ಬಣ್ಣ ಹಚ್ಚಿದ್ದು, ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುತ್ತಾರೆ. ಅವರಾರೆಂದು ಯೋಚಿಸುತ್ತಿದ್ದೀರಾ?? ಇಲ್ಲಿದೆ ಉತ್ತರ.

‘ಸೀತಾರಾಮ’ ಧಾರವಾಹಿಯ ನಾಯಕಿಯಾಗಿ ಅಗ್ನಿಸಾಕ್ಷಿ ಖ್ಯಾತಿಯ ನಟಿ, ವೈಷ್ಣವಿ ಗೌಡ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಅಗ್ನಿಸಾಕ್ಷಿಯಲ್ಲಿ ವೈಷ್ಣವಿಯರು ಸನ್ನಿಧಿಯಾಗಿ ಕಾಣಿಸಿಕೊಂಡಿದ್ದು, ವಿವಾಹದ ನಂತರ ಗಂಡನ ಮನೆಯ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ನಿಂತು ಪರಿಹಾರ ಹುಡುಕುವ ಮುಗ್ಧ ಹೆಣ್ಣು ಮಗಳಾಗಿ ಅಭಿನಯಿಸಿದ್ದರು. ‘ಸೀತಾರಾಮ’ ಧಾರವಾಹಿಯ ನಾಯಕನಾಗಿ ಮಂಗಳ ಗೌರಿ ಖ್ಯಾತಿಯ ಗಗನ್ ಚಿನ್ನಪ್ಪ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಮಂಗಳ ಗೌರಿ ದಾರವಾಹಿಯಲ್ಲಿ ಗಗನ್ ಅವರು ರಾಜೀವ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು.

ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಮುರಿದು ಬಿದ್ದ ಕಾರಣವಾಗಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಜೀ ಕನ್ನಡ ವಾಹಿನಿಯ ಹೊಚ್ಚ ಹೊಸ ಧಾರವಾಹಿಯಲ್ಲಿ ಗಗನ್ ಹಾಗೂ ವೈಷ್ಣವಿ ಗೌಡ ಅವರು ಜೋಡಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಯನ್ನು ತಿಳಿದ ಬಳಿಕ ಅಭಿಮಾನಿಗಳು ಸಿಹಿ ಸುದ್ದಿಯನ್ನು ನೀಡಿದ ವೈಷ್ಣವಿ ಗೌಡ ಅವರ ವಿಚಾರವಾಗಿ ಹರ್ಷಗೊಂಡಿದ್ದಾರಂತೆ.

Leave a Comment

error: Content is protected !!