Srirasthu Shubhamasthu: ಧಾರವಾಹಿಗಾಗಿ ಶ್ರೀರಸ್ತು ಶುಭಮಸ್ತು ಖ್ಯಾತಿಯ ಲಾವಣ್ಯ ಮಾಡಿದ ತ್ಯಾಗವೇನು ಗೊತ್ತಾ?

Lavanya Actress ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಗಿಂತಲೂ ಹೆಚ್ಚಾಗಿ ಧಾರವಾಹಿಯ ನಟಿಯರು ಹೆಚ್ಚಿನ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೊಂದಿದ್ದಾರೆ. ಈ ಹಿಂದೆ ರಾಜ ರಾಣಿ ಧಾರವಾಹಿಯಲ್ಲಿ ನಟಿಸುತ್ತಿದ್ದ ಲಾವಣ್ಯ ಈಗ ಶ್ರೀರಸ್ತು ಶುಭಮಸ್ತು(Srirasthu Shubhamasthu) ಧಾರವಾಹಿಯಲ್ಲಿ ಪೂರ್ವಿ ಪಾತ್ರದಲ್ಲಿ ನಟಿಸುತ್ತಿರುವುದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ನಟನೆಯ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವಂತಹ ನಟಿ ಈಕೆ.

ದಾಸ ಪುರಂದರ(Dasa Purandhara Serial) ಧಾರವಾಹಿಯಲ್ಲಿ ಕೂಡ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇವರು ಎರಡು ಪಾತ್ರಗಳನ್ನು ಒಟ್ಟಿಗೆ ನಿಭಾಯಿಸುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಪ್ರಶಂಸೆ ಸೂಚಿಸ ಬೇಕಾಗಿರುವಂತಹ ವಿಚಾರವಾಗಿದೆ. ನಟಿ ಲಾವಣ್ಯ(Actress Lavanya) ಅವರ ತೆರೆಯ ಮೇಲಿನ ಜೀವನ ಪ್ರತಿಯೊಬ್ಬರಿಗೂ ತಿಳಿದಿದೆ ಆದರೆ ತೆರೆಯ ಹಿಂದಿನ ಜೀವನದ ಬಗ್ಗೆ ನಾವಿಂದು ಹೇಳಲು ಹೊರಟಿದ್ದೇವೆ.

ಚಿಕ್ಕವಯಸ್ಸಿನಿಂದಲೂ ನಟಿಯಾಗಬೇಕು ಎನ್ನುವ ಆಸೆಯನ್ನು ಹೊಂದಿದ್ದ ಲಾವಣ್ಯ ರಾಜಾರಾಣಿ ರಾಧಾ ರಮಣ(Radha Ramana Serial) ಸಂಘರ್ಷ ಹಾಗೂ ಪುರಂದರದಾಸ ಧಾರವಾಹಿಗಳಲ್ಲಿ ಕೂಡ ಭರವಸೆಯನ್ನು ಮೂಡಿಸುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಎಲ್ಲರೂ ಮೆಚ್ಚಿರುವ ಪೂರ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಲಾವಣ್ಯ. ಧಾರವಾಹಿಗಾಗಿ ಇವರು ಮಾಡಿರುವಂತಹ ತ್ಯಾಗದ ಕಥೆಯನ್ನು ಹೇಳುತ್ತೇವೆ ಬನ್ನಿ.

ಧಾರವಾಹಿಯಲ್ಲಿ ನಟಿಸುತ್ತಿದ್ದ ಸಂದರ್ಭದಲ್ಲಿಯೇ ಮಧ್ಯೆ ವಿರಾಮ ತೆಗೆದು ಕೊಂಡು ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಾರೆ. ಇದರ ಮಧ್ಯದಲ್ಲೇ ರಾಜ ರಾಣಿ ಧಾರವಾಹಿಗೆ ಅವಕಾಶ ಹುಡುಕಿಕೊಂಡು ಬಂದಾಗ ತನ್ನ ಮನಸ್ಸಿನ ಇಚ್ಛೆಯನ್ನು ಅನುಸರಿಸಿ ಒಳ್ಳೆಯ ಸಂಬಳ ಸಿಗುತ್ತಿದ್ದ ಕಾರ್ಪೊರೇಟ್ ಕೆಲಸವನ್ನು ತ್ಯಜಿಸಿ ಲಾವಣ್ಯ(Lavanya Serial Actress) ಅವರು ಮತ್ತೆ ಧಾರವಾಹಿ ಕ್ಷೇತ್ರಕ್ಕೆ ಹಿಂದಿರುಗುತ್ತಾರೆ. ಅಂದು ಲಾವಣ್ಯ ಅವರ ಆ ನಿರ್ಧಾರ ಇಂದು ಕಿರುತರೆ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಅವರನ್ನು ಕರೆತಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!