Biggboss: ಬಿಗ್ ಬಾಸ್ ನಿಂದ ನನಗೆ ಜೀವನದಲ್ಲಿ ಅನ್ಯಾಯ ಆಯ್ತು ಎಂದು ಅಳ್ತಿದ್ದಾರೆ ಸಂಖ್ಯಾಶಾಸ್ತ್ರ ಆರ್ಯವರ್ಧನ ಗುರೂಜಿ! ಅಂಥದ್ದೇನಾಯ್ತು?

Aryavardhan Guruji ಈ ಬಾರಿಯ ಬಿಗ್ ಬಾಸ್(Biggboss) ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಓ ಟಿಟಿ ಮತ್ತು ಮುಖ್ಯ ಬಿಗ್ ಬಾಸ್ ನಲ್ಲಿ ಸಂಖ್ಯಾಶಾಸ್ತ್ರದ ಗುರೂಜಿ ಆಗಿರುವ ಆರ್ಯವರ್ಧನ್ ಗುರೂಜಿಯವರು(Aryavardhan Guruji) ಭಾಗವಹಿಸಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಅವರು ಆಡುತ್ತಿರುವ ಮಾತು ನಿಜಕ್ಕೂ ಕೂಡ ಪ್ರತಿಯೊಬ್ಬರಲ್ಲಿ ಕೂಡ ಆಶ್ಚರ್ಯ ಮೂಡಿಸಿದೆ‌‌. ಅಷ್ಟಕ್ಕೂ ಅವರು ಹೇಳಿರುವುದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಸ್ನೇಹಿತರೆ, ಬಿಗ್ ಬಾಸ್(BbK) ಮನೆಯಿಂದ ಹೊರ ಬಂದ ನಂತರ ನನ್ನ ಜೀವನವೇ ದುಸ್ತರವಾಗಿದೆ ಎಂಬುದಾಗಿ ಹೇಳುತ್ತಿದ್ದಾರೆ. ಬಿಗ್ ಬಾಸ್ ಗೆ ಹೋಗುವ ಮುಂಚೆ ನನ್ನ ಜೀವನ ಚೆನ್ನಾಗಿತ್ತು ಹಾಗೂ ಒಳ್ಳೆಯ ಗಳಿಕೆ ಕೂಡ ಬರುತ್ತಿದೆ ಆದರೆ ಬಿಗ್ ಬಾಸ್ ಮನೆಯಲ್ಲಿ ಆಳಿನ ಹಾಗೆ ಕೆಲಸ ಮಾಡಿದ ನಂತರ ಹೊರಬಂದ ಮೇಲೆ ನನ್ನ ಜೀವನ ಕಷ್ಟಕರವಾಗಿದೆ ಎಂಬುದಾಗಿ ಹೇಳಿದ್ದಾರೆ. ಎಲ್ಲರೂ ಕೂಡ ನಾನೇ ಗೆಲ್ಲುತ್ತೇನೆ ಎಂಬುದಾಗಿ ಭಾವಿಸಿದ್ದರು ಎಂಬುದಾಗಿ ಕೂಡ ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.

ನಾನು ಬಿಗ್ ಬಾಸ್ ಗೆ ಹೋಗಿದ್ದು ಕೇವಲ ಪರಮೇಶ್ವರ್ ಗುಂಡ್ಕಲ್(Parameshwara Gundkal) ಅವರಿಗಾಗಿ ಮಾತ್ರ ಎಂಬುದಾಗಿ ಕೂಡ ಹೇಳುವ ಮೂಲಕ ಮತ್ತೊಂದು ಸುದ್ದಿಯನ್ನು ಹೊರ ಹಾಕಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ನಾನು ಏನಾಗಬೇಕು ಎನ್ನುವ ಆಸೆಯನ್ನು ಕೂಡ ಹೊರಹಾಕಿದ್ದಾರೆ.

ಹೌದು ಗೆಳೆಯರೆ ಆರ್ಯ ವರ್ಧನ್ ಗುರೂಜಿಯವರ(Aryavardhan Guruji) ಪ್ರಕಾರ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಒಳ್ಳೆಯ ಪಾತ್ರಗಳು ಹುಡುಕಿಕೊಂಡು ಬಂದರೆ ಸಿನಿಮಾದಲ್ಲಿ ನಟಿಸುವ ಆಸೆಯನ್ನು ಕೂಡ ವ್ಯಕ್ತಪಡಿಸಿರುವ ಅವರು ರಾಜಕೀಯ ಕ್ಷೇತ್ರದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವಂತಹ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ. ಆರ್ಯ ವರ್ಧನ್ ಗುರೂಜಿ ಅವರ ಬಗ್ಗೆ ನಿಮಗಿರುವಂತಹ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!