Bigg Boss Season9 Kannada: ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಆರ್ಯವರ್ಧನ ಗುರೂಜಿ ಅವರ ಜೀವನವೇ ಕಷ್ಟವಾಗಿದೆ ಅಂತೆ?

Aryavardhan Guruji’s life has become difficult after coming out of the Bigg Boss house ಕನ್ನಡ ಕಿರುತೆರೆ ಕಾರ್ಯಕ್ರಮದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ( Reality Show ) ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ( BiggBoss ) ನ 9ನೇ ಅವತರಿಣಿಕೆ ಈಗಾಗಲೇ ಯಶಸ್ವಿಯಾಗಿ ಮುಗಿದಿರುವುದು ನಿಮಗೆಲ್ಲರಿಗೂ ತಿಳಿದಿದೆ. ಈ ಬಾರಿಯ ಬಿಗ್ ಬಾಸ್ ಅನ್ನು ರೂಪೇಶ್ ಶೆಟ್ಟಿ ಅವರು ಗೆದ್ದಿದ್ದು ಎರಡನೇ ಸ್ಥಾನದಲ್ಲಿ ರಾಕೇಶ್ ಅಡಿಗ ಅವರು ಕಾಣಿಸಿಕೊಂಡಿದ್ದಾರೆ.

ಇನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧಿಗಳು ಗೆಲ್ಲುವ ಭರವಸೆಯನ್ನು ಮೂಡಿಸಿದ್ದರು. ಅವರಲ್ಲಿ ಸಂಖ್ಯಾಶಾಸ್ತ್ರದ ಗುರೂಜಿ ಆಗಿರುವ ಆರ್ಯವರ್ಧನ್ ಅವರು ಕೂಡ ಒಬ್ಬರಾಗಿದ್ದರು. ಯಾಕೆಂದರೆ ಓ ಟಿ ಟಿ ಬಿಗ್ ಬಾಸ್ ನಲ್ಲಿಯೂ ಕೂಡ ಆರ್ಯವರ್ಧನ್ ಗುರೂಜಿ ಅವರು ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ( Performance ) ಮಾಡಿ ಮುಖ್ಯ ಬಿಗ್ ಬಾಸ್ ಗೆ ತೆರ್ಗಡೆಯಾಗಿದ್ದರು. ಈ ಬಾರಿಯೂ ಕೂಡ ಅವರೇ ಗೆಲ್ಲಬಹುದು ಇಲ್ಲವೇ ಫೈನಲಿಸ್ಟ್ ಆಗಬಹುದು ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು.

ಆದರೆ ಆರ್ಯವರ್ಧನ್ ಗುರೂಜಿ ಮಧ್ಯರಾತ್ರಿಯೇ ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕಾಗಿ ಬಂದಿತು. ಇನ್ನು ಇತ್ತೀಚಿಗಷ್ಟೇ youtube ಚಾನೆಲ್ ಒಂದಕ್ಕೆ ನೀಡಿರುವಂತಹ ಇಂಟರ್ವ್ಯೂ ನಲ್ಲಿ ಅವರು ನೀಡಿರುವ ಹೇಳಿಕೆ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಜೀವನ ಹೇಗೆ ನಡೆಸುವುದು ಎಂಬುದಾಗಿ ಆರ್ಯವರ್ಧನ್ ಅವರು ತಬ್ಬಿಬ್ಬಾಗಿದ್ದಾರೆ ಎಂಬುದಾಗಿ ಸ್ವತಃ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನೊಮ್ಮೆ ಓದಿ..ಖ್ಯಾತ ನಟಿ ಭಾವನ ಅವರು ಇನ್ನು ಮದುವೆಯಾಗದೆ ಇರಲು ಕಾರಣ ಕೊನೆಗೂ ಸಿಕ್ತು ನೋಡಿ..

ಬಿಗ್ ಬಾಸ್ ಮನೆಯಲ್ಲಿ ಇರಬೇಕಾದರೆ ಎಲ್ಲದಕ್ಕೂ ಅಡ್ಜಸ್ಟ್ ಆಗಿದ್ದೆ. ಆದರೆ ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ನನ್ನ ಬಳಿ ಯಾವುದೇ ಹಣವಿಲ್ಲ ನನ್ನ ಖಾತೆಯಲ್ಲಿ ಇರುವುದು ಕೂಡ ಕೇವಲ ಹತ್ತು ಸಾವಿರ ರೂಪಾಯಿ ಅದು ಕೂಡ ನಾನು ಬೇರೆಯವರಿಂದ ಪಡೆದುಕೊಂಡಿದ್ದು ಎಂಬುದಾಗಿ ಹೇಳಿಕೊಂಡಿದ್ದಾರೆ. ನನ್ನ ಆಫೀಸ್ ( Office ) ಅನ್ನು ಕೂಡ ಮತ್ತೊಮ್ಮೆ ತೆರೆಯಲು ನನಗೆ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ ಹೆಂಡತಿಗೆ ಆಟೋ ಕಾಸಿಗೂ ಕೂಡ ನೀಡುವುದಕ್ಕೆ ನಾನು ಹಿಂದೆ ಮುಂದೆ ನೋಡಬೇಕು ಎಂಬುದಾಗಿ ತಮ್ಮ ಕಷ್ಟವನ್ನು ಸಂದರ್ಶನದಲ್ಲಿ ಆರ್ಯವರ್ಧನ್ ಗುರೂಜಿ ಅವರು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!