ಮಿಶ್ರ ಕೃಷಿಯಲ್ಲಿ ತಿಂಗಳಿಗೆ ಎರಡೂವರೆ ಲಕ್ಷ ದುಡಿದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಪದವೀಧರ.
ಕೆಲವೊಮ್ಮೆ ಅಕ್ಕ ಪಕ್ಕದವರನ್ನು ನೋಡಿಯೊ ಅಥವಾ ಬೇರೆಯವರ ಒತ್ತಾಯಕ್ಕೆ ಮಣಿದೊ ಇಷ್ಟವಿಲ್ಲದ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ. ನಂತರ ಅದನ್ನು ಅರ್ಧಕ್ಕೆ ಕೈ ಬಿಟ್ಟು ಹೊಸ ಕೆಲಸ ಹಿಡಿದು, ಜೀವನಕ್ಕೊಂದು ಬೇರೆ ದಾರಿ ಕಂಡುಕೊಳ್ಳುತ್ತೇವೆ. ಸ್ನಾತಕೋತ್ತರ ಪದವಿ ಪಡೆದು ಒಳ್ಳೆಯ ಕೆಲಸ ಗಿಟ್ಟಿಸಿಕೊಂಡ ನಂತರ ಅದನ್ನು ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳುವವರು ಬೆರಳೆಣಿಕೆಯಲ್ಲಿ ಸಿಗುತ್ತಾರೆಯಷ್ಟೇ. ಇವರಲ್ಲಿ ತಿಳುವಳ್ಳಿ ಸಮೀಪದ ಹುಲಗಡ್ಡಿ ಗ್ರಾಮದ, ಚಂದ್ರಪ್ಪ ಪಂಚಪ್ಪ ತಲ್ಲೂರ್ ಅವರು ಒಬ್ಬರಾಗಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿದ್ದ ಚಂದ್ರಪ್ಪ ತಲ್ಲೂರ್ ಅವರು ಅತಿಥಿ ಉಪನ್ಯಾಸಕರಾಗಿ … Read more