Ruturaj Gaikwad: ಫೈನಲ್ ಗೂ ಮುನ್ನವೇ ಗುಡ್ ನ್ಯೂಸ್ ಕೊಟ್ಟ ಚೆನ್ನೈ ಬ್ಯಾಟ್ಸ್ಮನ್ ರುತುರಾಜ್.

Ruturaj Gaikwad ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಈ ಬಾರಿಯ ಫೈನಲ್ ಗೆ ಲಗ್ಗೆ ಇಟ್ಟಿದೆ. ಚೆನ್ನೈ ತಂಡದ ಸಂಘಟಿತ ಪ್ರದರ್ಶನವೇ ಇದಕ್ಕೆ ಕಾರಣ ಎನ್ನಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ಚೆನ್ನೈ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳು ತಂಡಕ್ಕೆ ಉತ್ತಮ ಆರಂಭವನ್ನು ನೀಡುವಲ್ಲಿ ಪ್ರತಿ ಬಾರಿ ಯಶಸ್ವಿಯಾಗುತ್ತಿದ್ದಾರೆ. ಅದರಲ್ಲೂ ಋತುರಾಜ್ ಗಾಯಕ್ವಾಡ್(Ruturaj Gaikwad) ಅವರ ಬ್ಯಾಟಿಂಗ್ ಬಗ್ಗೆ ಮಾತನಾಡಲೇಬೇಕು.

ಆಡಿರುವಂತಹ 15 ಪಂದ್ಯಗಳಲ್ಲಿ ಭರ್ಜರಿ 564 ರನ್ನುಗಳನ್ನು ಬಾರಿಸುವ ಋತುರಾಜ್ ಚೆನ್ನೈ ತಂಡದ ಫ್ಯೂಚರ್ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ. ಫೈನಲ್ ಪಂದ್ಯ ನಡೆಯುವುದಕ್ಕೂ ಮುನ್ನವೇ ಅವರಿಂದ ಒಂದು ಗುಡ್ ನ್ಯೂಸ್ ಹೊರಬಂದಿದೆ. ಹೌದು ಮಿತ್ರರೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಮೀಸಲು ಆಟಗಾರನಾಗಿ ಋತುರಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಆದರೆ ಈಗ ಅವರು ಅದರಿಂದ ಹಿಂದಕ್ಕೆ ಸರದಿದ್ದು ಅದಕ್ಕೆ ಕಾರಣ ಜೂನ್ ನಲ್ಲಿ ಋತುರಾಜ್ ಗಾಯಕ್ವಾಡ್(Ruturaj Gaikwad) ಮದುವೆ ಆಗುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರು ಅಂತಹ ಪ್ರಮುಖ ಘಟ್ಟವನ್ನು ಕೂಡ ಮಿಸ್ ಮಾಡಿಕೊಳ್ಳುತ್ತಿದ್ದು ಅವರ ಬದಲಿಗೆ ಯಶಸ್ವಿ ಜೈಸ್ವಾಲ್(Yashaswi Jaiswal) ಆಡುತ್ತಿದ್ದಾರೆ.

Leave a Comment

error: Content is protected !!