Cricket: ಕೆಟ್ಟ ಸುದ್ದಿಗಳನ್ನೇ ನೀಡುತ್ತಿದ್ದ ಜಸ್ಪ್ರೀತ್ ಬೂಮ್ರಾ ಕೊನೆಗೂ ನೀಡಿದ್ರು ಗುಡ್ ನ್ಯೂಸ್! ಏನದು ಗೊತ್ತಾ?

Jasprit Bumrah ಕಳೆದ ಟಿ20 ವಿಶ್ವಕಪ್ ಗೂ ಮುನ್ನ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೂಮ್ರ ತಂಡದಿಂದ ಇಂಜುರಿಯ ಕಾರಣದಿಂದಾಗಿ ಹೊರ ಹೋಗಿದ್ದರು. ಇದುವರೆಗೂ ಕೂಡ ಅವರು ತಂಡಕ್ಕೆ ವಾಪಸ್ ಆಗಿಲ್ಲ. ತಂಡದ ಅತ್ಯಂತ ಭರವಸೆಯ ಬೌಲರ್ಗಳಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುವ ಜಸ್ಪ್ರೀತ್ ಬೂಮ್ರಾ(Jasprit Bumrah) ರಾಷ್ಟ್ರೀಯ ತಂಡದಲ್ಲಿ ಆಡದೇ ಇರುವುದು ಹಲವಾರು ಟೀಕೆಗಳಿಗೆ ಕೂಡ ಕಾರಣವಾಗಿತ್ತು.

ಇದರ ಮಧ್ಯದಲ್ಲಿಯೇ ಇನ್ನೇನು ಕೆಲವೇ ವಾರಗಳಲ್ಲಿ ಪ್ರಾರಂಭ ಆಗಲಿರುವ ಈ ಬಾರಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ಪರವಾಗಿ ಬೂಮ್ರ ನೇರವಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವುದಾಗಿ ಸುದ್ದಿಯಾಗಿತ್ತು ಆದರೆ ಇಂ’ ಜುರಿಯ ತೀವ್ರತೆ ಇನ್ನಷ್ಟು ಗಂಭೀರವಾಗಿರುವ ಕಾರಣದಿಂದಾಗಿ ಐಪಿಎಲ್ ಅನ್ನು ಕೂಡ ಈ ಬಾರಿ ಮಿಸ್ ಮಾಡಿಕೊಳ್ಳಲಿದ್ದಾರೆ ಅನ್ನುವ ಸುದ್ದಿಗಳು ಕೂಡ ಕೇಳಿ ಬಂದಿತ್ತು.

ಸದಾಕಾಲ ಕೆಟ್ಟ ಸುದ್ದಿಗಳಿಂದಲೇ ಸುದ್ದಿ ಮಾಡುತ್ತಿದ್ದ ಕ್ರಿಕೆಟಿಗ ಜಸ್ಪ್ರೀತ್ ಬೂಮ್ರ(Bumrah) ಈಗ ಒಂದು ಗುಡ್ ನ್ಯೂಸ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ. ಹೌದು ಗೆಳೆಯರೆ ಅದೇನೆಂದರೆ ಸದ್ಯಕ್ಕೆ ನ್ಯೂಜಿಲ್ಯಾಂಡ್ ನಲ್ಲಿ ಸರ್ಜರಿಯನ್ನು ಯಶಸ್ವಿಯಾಗಿ ಪೂರೈಸಿರುವ ಬೂಮ್ರ ನೇರವಾಗಿ ಆಗಸ್ಟ್ ತಿಂಗಳಿನಲ್ಲಿ ಸರ್ವಸನ್ನದವಾಗಿ ಭಾರತದಲ್ಲಿ ನಡೆಯಲಿರುವ ಏಕದಿನ ವರ್ಲ್ಡ್ ಕಪ್(ODI World Cup) ತಂಡಕ್ಕೆ ನೇರವಾಗಿ ಕಾಲಿಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಕಳೆದ ಎರಡು ವರ್ಷಗಳಿಂದ ಜಸ್ಪ್ರೀತ್ ಬೂಮ್ರ(Jasprit Bumrah) ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಸಾಕಷ್ಟು ಪ್ರಮುಖ ಟೂರ್ನಮೆಂಟ್ ಗಳನ್ನು ಹಾಗೂ ಸೀರೀಸ್ ಗಳನ್ನು ಮಿಸ್ ಮಾಡಿಕೊಂಡಿದ್ದು ಇಂ’ ಜುರಿಯಿಂದ ಬಳಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೂಮ್ರಾ ಫಿಟ್ ಆಗಿ ಭಾರತೀಯ ಕ್ರಿಕೆಟ್ ತಂಡದ ಯಾರ್ಕರ್ ಕಿಂಗ್ ಆಗಿ ಮತ್ತೆ ಕಣಕ್ಕಿಳಿಯುವ ಭರವಸೆಯಲ್ಲಿ ಅವರ ಅಭಿಮಾನಿಗಳು ಕಾತರರಾಗಿದ್ದಾರೆ.

Leave a Comment

error: Content is protected !!