ಸೌಂದರ್ಯ ಜಗದೀಶ್ ಪುತ್ರ ತುಂಬಾ ಒಳ್ಳೆಯ ಹುಡುಗ ಮತ್ತು ಎಂದು ಹೇಳಿದ ಉಪೇಂದ್ರ ವಿರುದ್ಧ ಕಿಡಿಕಾರಿದ ನೆಟ್ಟಿಗರು

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜಾ ಸಿನಿಮಾದ ಟೀಸರ್ ಇತ್ತೀಚಿಗಷ್ಟೇ ಬಿಡುಗಡೆಯಾಗಿ ವ್ಯಾಪಕವಾಗಿ ಜನಮನ್ನಣೆಯನ್ನು ಪಡೆದುಕೊಂಡಿತ್ತು. ಆದರೆ ಉಪೇಂದ್ರ ಅವರನ್ನು ಹೊಗಳಿದ್ದ ಅದೇ ಜನರಿಂದ ಈಗ ರಿಯಲ್ ಸ್ಟಾರ್ ಉಪೇಂದ್ರ ಅವರು ತೆಗಳಿಕೆಗೆ ಕೂಡ ಪಾತ್ರರಾಗುತ್ತಿದ್ದಾರೆ. ಅಷ್ಟಕ್ಕೂ ಉಪೇಂದ್ರ ಅವರು ಜನರಿಂದ ಅಸಮಾಧಾನಕ್ಕೆ ಒಳಗಾಗಿರುವುದು ಆವರ ಕಾರಣಕ್ಕಾಗಿ ಅಲ್ಲ ಬದಲಾಗಿ ಅವರು ಪರವಹಿಸಿರುವವರ ಕಾರಣಕ್ಕಾಗಿ.

ನಿಮಗೆಲ್ಲರಿಗೂ ಗೊತ್ತಿರಬಹುದು ಇತ್ತೀಚಿನ ದಿನಗಳಲ್ಲಿ ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತ್ ಅವರ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಸೌಂದರ್ಯ ಜಗದೀಶ್ ಹಾಗೂ ರೇಖಾ ಅವರ ಸುಪುತ್ರ ಆಗಿರುವ ಸ್ನೇಹಿತ್ ಪಕ್ಕದ ಮನೆಯವರ ಬಗ್ಗೆ ಕೆಟ್ಟದಾಗಿ ಅವಾಚ ಶಬ್ದಗಳಿಂದ ಮಾತನಾಡಿರುವುದಕ್ಕೆ ಆತನ ವಿರುದ್ಧ ದೂರು ದಾಖಲಾಗಿದೆ.

ಇದರ ಬಗ್ಗೆ ಆತನ ಪೋಷಕರು ಮಾತ್ರ ನಮ್ಮ ಮಗ ಚಿನ್ನದಂತಹ ಹುಡುಗ ಆತನನ್ನು ಪಡೆಯುವುದಕ್ಕೆ ನಾವು ನಿಜಕ್ಕೂ ಕೂಡ ಅದೃಷ್ಟ ಮಾಡಿರಬೇಕು ಆದರೆ ಯಾಕೆ ಆತನ ಬಗ್ಗೆ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದಾಗಿ ನಮಗೆ ತಿಳಿಯುತ್ತಿಲ್ಲ ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇದು ಕೇವಲ ಇದೇ ಮೊದಲಲ್ಲ ಈ ಹಿಂದೆಯೂ ಕೂಡ ಸ್ನೇಹಿತ್ ಬಗ್ಗೆ ಸಾಕಷ್ಟು ಆರೋಪಗಳು ಹಾಗೂ ದೂರು ಹಾಗೂ ಪ್ರಕರಣಗಳು ದಾಖಲಾಗುವ ವಿಚಾರಗಳು ಪದೇಪದೇ ನಡೆದಿದ್ದವು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

ಇನ್ನೂ ಈ ಹುಡುಗನ ಪರವಾಗಿ ಬ್ಯಾಟ್ ಬೀಸುತ್ತಾ ರಿಯಲ್ ಸ್ಟಾರ್ ಉಪೇಂದ್ರ ಅವರು ಈ ಹುಡುಗನನ್ನು ನಾನು ಹಲವಾರು ವರ್ಷಗಳಿಂದ ಬಲ್ಲೆ. ಈತನ ಪೋಷಕರು ನನ್ನ ಸ್ನೇಹಿತರು ಈ ಹುಡುಗ ತುಂಬಾ ಒಳ್ಳೆಯವನು ಇವನ ಬಗ್ಗೆ ನನಗೆ ಚಿಕ್ಕವಯಸ್ಸಿನಿಂದಲೂ ಕೂಡ ತಿಳಿದಿದೆ ಎಂಬುದಾಗಿ ಹೇಳಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಶ್ರೀಮಂತರ ಮಕ್ಕಳ ಪರವಾಗಿ ವಾದ ಮಾಡುತ್ತಿದ್ದೀರಾ ಎಂಬುದಾಗಿ ಉಪೇಂದ್ರರವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಅಸಮಾಧಾನದಿಂದಲೇ ಉಪೇಂದ್ರ ಅವರು ನನ್ನ ಮಾತನ್ನು ತಿರುಚಿ ಅರ್ಥ ಮಾಡಿಕೊಳ್ಳಲಾಗುತ್ತಿದೆ ಎಂಬ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಹಂತಕ್ಕೆ ತಿರುಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!