30 ವರ್ಷದ ಹಿಂದಿನ ದ್ವೇಷದ ಸುಳಿಗೆ ಸಿಲುಕಿ ವೃದ್ಧ ದಂಪತಿ ಗಳನ್ನು ಸುತ್ತಿಗೆ ಯಿಂದಲೇ ಮುಗಿಸಿದ ಮಾಜಿ ಸೈನಿಕ

ಸ್ನೇಹಿತರೇ ಕೇರಳದ ತಿರುವನಂತಪುರಂನಲ್ಲಿ ನಡೆದಿರುವ ಒಂದು ಘಟನೆ ಈಗ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ವೃದ್ಧ ದಂಪತಿಗಳಿಬ್ಬರನ್ನು ಕೂಡ ಸುತ್ತಿಗೆಯಲ್ಲಿ ಹಲ್ಲೆ ಮಾಡಿ ನಂತರ ಅವರನ್ನು ಬೆಂಕಿ ಹಾಕಿ ಮುಗಿಸಿದ್ದಾನೆ ಒಬ್ಬ ಮಾಜಿ ಸೈನಿಕ. ಇದೇ ಶನಿವಾರ ಬೆಳಗ್ಗೆ 11:30 ರಂದು ಈ ಘಟನೆ ನಡೆದಿದ್ದು ಪ್ರಭಾಕರ್ ಕುರುಪ್ ಹಾಗೂ ವಿಮಲಾ ಕುಮಾರಿ ದಂಪತಿಗಳನ್ನು ಮುಗಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದರ ಪ್ರಮುಖ ಆರೋಪಿಯಾಗಿ ಶಶಿಧರ ನಾಯರ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

30 ವರ್ಷಗಳ ಹಿಂದೆ ಶಶಿಧರ್ ನಾಯರ್ ಅವರ ಮಗನಿಗೆ ಬಹ್ರೈನ್ ಗೆ ಹೋಗಲು ಪ್ರಭಾಕರ್ ಕುರುಪ್ ಸಹಾಯ ಮಾಡಿದ್ದರು. ಆದರೆ ಅಲ್ಲಿಗೆ ಹೋದ ನಂತರ ಶಶಿಧರ್ ನಾಯರ್ ಅವರ ಮಗನಿಗೆ ಬಯಸಿದ ಕೆಲಸ ಸಿಗದೇ ಇರುವ ಕಾರಣದಿಂದಾಗಿ ಆತ ತನ್ನ ಜೀವನವನ್ನು ತಾನೇ ಅಲ್ಲೇ ಮುಗಿಸಿಕೊಂಡಿದ್ದ. ಹೀಗಾಗಿ ಇದರಿಂದ ಮನನೊಂದ ಶಶಿಧರ್ ನಾಯರ್ ತನ್ನ ಮಗ ಮರಣ ಹೊಂದುವುದಕ್ಕೆ ಪ್ರಭಾಕರ್ ಕುರುಪ್ ಕೂಡ ಕಾರಣ ಎಂಬುದಾಗಿ ಪೊಲೀಸ್ ದೂರನ್ನು ಕೂಡ ದಾಖಲಿಸಿದ್ದ.

ಹಲವಾರು ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಾ ಬಂದಿದೆ. ಇದರ ಫಲಿತಾಂಶ ಇದೇ ಶುಕ್ರವಾರದಂದು ನ್ಯಾಯಾಲಯದಲ್ಲಿ ಘೋಷಣೆಯಾಗಿ ಪ್ರಭಾಕರ್ ಕುರುಬ್ ಅವರಿಂದ ಯಾವುದೇ ತಪ್ಪು ನಡೆದಿಲ್ಲ ಅವರು ನಿರಪರಾಧಿ ಎಂಬುದಾಗಿ ಸಾಬೀತಾಗಿತ್ತು. ಇದರಿಂದ ಕುಪಿತನಾದ ಶಶಿಧರ್ ನಾಯರ್ ಶನಿವಾರದಂದು ಪ್ರಭಾಕರ್ ಕುರುಪ್ ಮನೆಗೆ ಹೋಗಿ ಜಗಳಕ್ಕೆ ನಿಂತಿದ್ದ. ಜಗಳದ ಉದ್ರೇಕದಲ್ಲಿ ಗಂಡ ಹೆಂಡತಿ ಇಬ್ಬರನ್ನು ಕೂಡ ಸುತ್ತಿಗೆಯಲ್ಲಿ ಹಲ್ಲೆ ಮಾಡಿ ಮುಗಿಸಿ ಬೆಂಕಿ ಹಚ್ಚಿದ.

ಬೆಂಕಿ ಹೊತ್ತಿ ಉರಿಯುತ್ತಿರುವುದು ಗಮನಿಸಿದ ನೆರೆಹೊರೆಯವರು ಕೂಡಲೇ ಇಬ್ಬರೂ ವೃದ್ಧ ದಂಪತಿಗಳನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟರು ಕೂಡ ಮಾರ್ಗ ಮಧ್ಯದಲ್ಲಿ ಇಬ್ಬರೂ ಕೂಡ ತಮ್ಮ ಜೀವವನ್ನು ಕೈ ಚೆಲ್ಲಿದರು. ಈ ಸಂದರ್ಭದಲ್ಲಿ ಶಶಿಧರ್ ಗೆ ಕೂಡ ಕೊಂಚಮಟ್ಟಿಗೆ ಗಾ’ಯವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿದ್ದಾರೆ.

Leave a Comment

error: Content is protected !!