ಮೂರು ದಿನಗಳಿಂದ ಕಾಣೆ ಆಗಿದ್ದ ರೇಣುಕಾಚಾರ್ಯ ಸಹೋದರನ ಪುತ್ರನ ಧಾರುಣ ಅಂತ್ಯ! ಅಣ್ಣನ ಮಗ ಸಾ ವಿನ ರಹಸ್ಯ ಬಯಲು

ಖ್ಯಾತ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ರೇಣುಕಾಚಾರ್ಯ ಅವರ ಸಹೋದರ ಆಗಿರುವ ಹಿರಿಯ ಪುತ್ರ ಚಂದ್ರಶೇಖರ್ ಅವರು ಕಾಣೆಯಾಗಿದ್ರು. ಆದರೆ ಈಗ ಅಚಾನಕ್ಕಾಗಿ ಅವರ ಕಾರು ಎನ್ನುವುದು ಹೊನ್ನಾಳಿಯ ಕಾಲುವೆ ಬಳಿ ಪತ್ತೆ ಆಗಿದ್ದು ಅದರಲ್ಲಿ ಅವರು ಕೂಡ ನಿರ್ಜೀವವಾಗಿ ಇದ್ದರು ಎಂಬುದಾಗಿ ತಿಳಿದು ಬಂದಿದ್ದು ಸ್ಥಳಕ್ಕೆ ರೇಣುಕಾಚಾರ್ಯ ಅವರು ಅಳುತ್ತಲೇ ಓಡಿ ಬಂದಿದ್ದಾರೆ.

ಚಂದ್ರಶೇಖರ್ ಅವರು ಕಳೆದ ಭಾನುವಾರದ ದಿನದಂದು ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಅವರ ಆಶೀರ್ವಾದವನ್ನು ಪಡೆದುಕೊಂಡು ವಾಪಸು ಬರುವಾಗ ಶಿವಮೊಗ್ಗದಲ್ಲಿದ್ದ ಸ್ನೇಹಿತರನ್ನು ಮಾತನಾಡಿಸಿಕೊಂಡು ಹೊನ್ನಾಳಿಗೆ ವಾಪಸ್ ಆಗಿದ್ದರು ಎಂಬುದಾಗಿ ತಿಳಿದು ಬಂದಿದೆ. ಆದರೆ ಅದಾದ ನಂತರವೇ ವಿಚಿತ್ರ ಎನಿಸುವಂತಹ ಘಟನೆಗಳ ಸರಣಿ ನಡೆಯಲು ಆರಂಭಿಸಿತು ಎಂಬುದಾಗಿ ತಿಳಿದು ಬಂದಿದೆ.

ಕಿರಣ್ ಎನ್ನುವ ಆಪ್ತ ಸ್ನೇಹಿತನ ಜೊತೆಗೆ ಚಂದ್ರಶೇಖರ್ ಅವರು ಶಿವಮೊಗ್ಗದಿಂದ ನ್ಯಾಮತಿವರೆಗೂ ಕೂಡ ಬಂದಿದ್ದಾರೆ ಎಂಬುದಾಗಿ ಸಿಸಿಟಿವಿ ಫೂಟೇಜುಗಳಲ್ಲಿ ಸಿಕ್ಕಿರುವಂತಹ ದೃಶ್ಯಗಳ ಮೂಲಕ ತಿಳಿದು ಬಂದಿದೆ. ಶಿವಮೊಗ್ಗದ ಮೂಲಕ ಚಂದ್ರಶೇಖರ್ ಅವರ ಕಾರು ಹಾದು ಹೋಗುತ್ತಿರುವ ದೃಶ್ಯಗಳು ಕೂಡ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದವು. ಆದರೆ ಭಾನುವಾರ ರಾತ್ರಿ 12ರ ಆಸುಪಾಸಿನಲ್ಲಿ ಅವರ ಮೊಬೈಲ್ ಎನ್ನುವುದು ಸ್ವಿಚ್ ಆನ್ ಆಗಿತ್ತು. ಆದರೆ ಬೆಳಗ್ಗೆ ಏಳರ ಸುಮಾರಿಗೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಎಲ್ಲರೂ ಕೂಡ ಚಂದ್ರಶೇಖರ್ ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂಬುದಾಗಿಯೇ ಭಾವಿಸಿ ಚಿಂತಾ ಕ್ರಾಂತ ರಾಗಿದ್ದರು.

ಆದರೆ ಈಗ ಚಂದ್ರಶೇಖರ್ ಅವರು ಕಾಲುವೆ ಬಳಿ ಕಾರಿನಲ್ಲಿ ನಿರ್ಜೀವವಾಗಿ ಸಿಕ್ಕಿರುವುದು ನಿಜಕ್ಕೂ ಕೂಡ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ಈಗಾಗಲೇ ಪೊಲೀಸರು ಈ ಕುರಿತಂತೆ ತನಿಖೆಯನ್ನು ಆರಂಭಿಸಿದ್ದು ಕಾಲುವಿಗೆ ಕಾರು ಹೇಗೆ ಬಿದ್ದಿದೆ ಎಂಬುದಾಗಿ ಈಗಾಗಲೇ ಗೊಂದಲ ಪ್ರಾರಂಭವಾಗಿದ್ದು ಮುಂದಿನ ದಿನದಗಳಲ್ಲಿ ನಡೆಯುವಂತಹ ತನಿಖೆ ಮೂಲಕ ನಿಜವಾಗಿ ಏನು ನಡೆದಿದೆ ಎಂಬುದು ತಿಳಿದು ಬರಬೇಕಾಗಿದೆ ಅಷ್ಟೇ.

Leave a Comment

error: Content is protected !!