ಜಗತ್ತಿನ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಬಂಪರ್ ಆಫರ್ ನೀಡಿದ ನಿತ್ಯಾನಂದನ

ಬಿಡದಿ ಸಮೀಪದ ಆಶ್ರಮದಲ್ಲಿ ನಿತ್ಯಾನಂದ ಹಲವಾರು ವರ್ಷಗಳಿಂದ ಇರುವುದು ನಿಮಗೆಲ್ಲರಿಗೂ ತಿಳಿದಿದೆ ಹಾಗೂ ಈ ವ್ಯಕ್ತಿ ಈಗ ಕೆಲವೊಂದು ವಿವಾದಾತ್ಮಕ ವಿಚಾರಗಳಿಂದಾಗಿ ಭಾರತ ದೇಶವನ್ನು ಬಿಟ್ಟು ಈಕ್ವೆಡರ್ ದೀಪದ ಬಳಿ ಇರುವ ಕೈಲಾಸ ಎಂಬ ದೇಶವನ್ನು ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದಾನೆ. ನಿತ್ಯಾನಂದ ಸ್ವಾಮಿಯ ಹಿನ್ನೆಲೆ ನಿಮಗೆಲ್ಲರಿಗೂ ತಿಳಿದಿದೆ ಎಂಬುದಾಗಿ ಭಾವಿಸುತ್ತೇವೆ. ಕೈಲಾಸ ಎಂಬ ಪ್ರತ್ಯೇಕ ರಾಷ್ಟ್ರವನ್ನು ಕಟ್ಟಿಕೊಂಡಿರುವ ನಿತ್ಯಾನಂದ ಈಗ ವಿಶ್ವದ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯರಿಗೆ ಆಫರ್ ಒಂದನ್ನು ನೀಡಿದ್ದಾನೆ.

ಕೈಲಾಸ ದೇಶದಲ್ಲಿ ರಾಜನಂತೆ ಮರೆಯುತ್ತಿರುವ ನಿತ್ಯಾನಂದ ಸ್ವಾಮಿ ಈಗ ಹೆರಿಗೆಗಾಗಿ ಗರ್ಭಿಣಿ ಮಹಿಳೆಯರಿಗೆ ತನ್ನ ದೇಶವಾಗಿರುವ ಕೈಲಾಸಕ್ಕೆ ಬನ್ನಿ ಎನ್ನುವುದಾಗಿ ಆಹ್ವಾನ ನೀಡಿದ್ದಾನೆ. ಹೆರಿಗೆಗಾಗಿ ಮಹಿಳೆಯರು ಕೈಲಾಸ ದೇಶಕ್ಕೆ ಬಂದರೆ ಒಳ್ಳೆಯ ಆಫರ್ ಸಿಗುತ್ತದೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾನೆ.

ಆತನೇ ತಿಳಿಸಿರುವಂತೆ ಕೈಲಾಸ ದೇಶದಲ್ಲಿ ಬಂದು ಹೆರಿಗೆ ಮಾಡಿಸಿಕೊಳ್ಳುವ ಮಹಿಳೆಯರ ಮಕ್ಕಳಿಗೆ ವಿಶೇಷ ಅಲೌಕಿಕವಾದ ಶಕ್ತಿಯುಳ್ಳ ಡಿಎನ್ಎ ಅನ್ನು ಕರುಣಿಸುತ್ತೇನೆ ಎಂಬುದಾಗಿ ಸ್ವಾಮಿ ನಿತ್ಯಾನಂದ ಹೇಳಿದ್ದಾನೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ನ್ಯೂಸ್ ಆಗಿ ಕಾಣಿಸಿಕೊಳ್ಳುತ್ತಿದೆ.

ಕೇವಲ ಇಷ್ಟು ಮಾತ್ರವಲ್ಲದೆ ಕೈಲಾಸದಲ್ಲಿ ಬಂದು ಗರ್ಭಿಣಿಯರು ಹೆರಿಗೆ ಮಾಡಿಕೊಂಡರೆ ಏನೆಲ್ಲ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಒಂದು ವಿಡಿಯೋ ಮುಖಾಂತರ ಈಗಾಗಲೇ ಪೋಸ್ಟ್ ಮಾಡಿ ನಿತ್ಯಾನಂದ ಎಲ್ಲರಿಗೂ ತಿಳಿಸಿದ್ದಾನೆ. ಆತನನ್ನು ಹಿಂಬಾಲಿಸುವವರು ಇದನ್ನು ಗಂಭೀರವಾಗಿ ಪರಿಗಣಿಸಿದರೆ ಉಳಿದವರೆಲ್ಲರೂ ಕೂಡ ಇದನ್ನು ನೋಡಿ ಮತ್ತಷ್ಟು ನಿತ್ಯಾನಂದನನ್ನು ಅಪಹಾಸ್ಯ ಮಾಡುತ್ತಿದ್ದಾರೆ. ನಿತ್ಯಾನಂದನ ಈ ವೀಡಿಯೊ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!