ವಿಡಿಯೋ ಕಾಲ್ ನಲ್ಲಿ ಫ್ರೇಂಡ್ ಜೋತೆ ಮಾತನಾಡುತ್ತಿದ್ದನ್ನ ನೋಡಿ ಮಾಜಿ ಪ್ರಿಯತಮೆ ರೂಮಿಗೆ ಎಂಟ್ರಿ ಕೊಟ್ಟ ಎಕ್ಸ್ ಲವರ್; ನಂತರ ನಡೆದಿದ್ದು ಘೋರ ದುರಂತ!

ಈ ಘಟನೆ ನಡೆದಿರುವುದು ದೇವರ ನಾಡೆಂದು ಕರೆಸಿಕೊಳ್ಳುವ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಎಂಬುದಾಗಿ ತಿಳಿದು ಬಂದಿದೆ. ವಿಷ್ಣುಪ್ರಿಯ ಎಂಬಾಕೆ ಮರಣ ಹೊಂದಿರುವ ದುರದೃಷ್ಟವಂತೆ. ಈಕೆಯನ್ನು ಮುಗಿಸಿರುವುದು ಈಕೆಯ ಮಾಜಿ ಪ್ರಿಯಕರ ಆಗಿರುವ ಶ್ರಾಮ್ ಜಿತ್ ಎನ್ನುವಾತ. ಹಾಗಿದ್ದರೆ ಈ ಘಟನೆಯ ಹಿನ್ನೆಲೆ ಹಾಗೂ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ.

ವಿಷ್ಣುಪ್ರಿಯ ಎನ್ನುವ ಹುಡುಗಿ ತನ್ನ ಫ್ರೆಂಡ್ ಜೊತೆಗೆ ಅಕ್ಟೋಬರ್ 22ರಂದು ವಿಡಿಯೋ ಕಾಲ್ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಮಾಜಿ ಪ್ರಿಯಕರ ಆಗಿರುವ ಶ್ಯಾಮಜಿತ್ ಆಕೆಯ ಮನೆಗೆ ಅತಿಕ್ರಮ ಪ್ರವೇಶವನ್ನು ಮಾಡಿದ್ದಾನೆ. ಈ ಸಂದರ್ಭದಲ್ಲಿ ಅವಳು ತನ್ನ ಸ್ನೇಹಿತೆಗೆ ವಿಡಿಯೋ ಕಾಲ್ ನಲ್ಲಿ ಆತನ ಹೆಸರನ್ನು ಕೂಡ ಹೇಳಿದ್ದಾಳೆ. ಇದಾದ ನಂತರ ವಿಡಿಯೋ ಕಾಲ್ ಸಂಪರ್ಕ ಕಡಿತಗೊಂಡಿದೆ. ನಂತರ ಆ ಪಾಪಿ ಶ್ಯಾಮಜಿತ್ ಸುತ್ತಿಗೆ ಹಾಗೂ ಇನ್ನಿತರ ಹರಿತವಾದ ವಸ್ತುವನ್ನು ಉಪಯೋಗಿಸಿಕೊಂಡು ವಿಷ್ಣುಪ್ರಿಯಳ ತಲೆ ಹಾಗೂ ಕುತ್ತಿಗೆಯ ಮೇಲೆ ಹ’ಲ್ಲೆಯನ್ನು ಮಾಡಿ ಆಕೆಯನ್ನು ಅತಿ ಮಾನುಷ ರೀತಿಯಲ್ಲಿ ಮುಗಿಸಿದ್ದಾನೆ.

ಹಲವಾರು ದಿನಗಳಿಂದ ವಿಷ್ಣುಪ್ರಿಯಳ ಚಲನವಲನಗಳ ಮೇಲೆ ಈತ ನಿಗ ವಹಿಸಿದ್ದ ಎಂಬುದಾಗಿ ಕೂಡ ತನಿಖೆಯಲ್ಲಿ ತಿಳಿದು ಬಂದಿದ್ದು ಇತ್ತೀಚಿಗಷ್ಟೇ ಅವಳ ಚಿಕ್ಕಮ್ಮ ಮರಣವನ್ನು ಹೊಂದಿದ್ದರು ಹೀಗಾಗಿ ಆಕೆ ಒಬ್ಬಳೇ ಇದ್ದ ಸಂದರ್ಭವನ್ನು ಚೆನ್ನಾಗಿ ಅರಿತುಕೊಂಡು ವಿಷ್ಣುಪ್ರಿಯಳ ಮೇಲೆ ಇವನು ಈ ರೀತಿ ಕೃತ್ಯವನ್ನು ಎಸೆಗಿದ್ದಾನೆ. ಇನ್ನೂ ಈ ಕೃತ್ಯವನ್ನು ಎಸಗಿದ ನಂತರ ತಾನೇ ಪೊಲೀಸರಿಗೆ ಶರಣಾಗಿದ್ದಾನೆ ಎಂಬುದಾಗಿ ಕೂಡ ಮೂಲಗಳಿಂದ ಸುದ್ದಿ ತಿಳಿದು ಬಂದಿದೆ.

ಇದಾದ ನಂತರವೇ ಇವರಿಬ್ಬರ ನಡುವೆ ಈ ಮೊದಲು ಪ್ರೀತಿಯಿತ್ತು ನಂತರ ಈ ಸಂಬಂಧವನ್ನು ಮುಂದುವರಿಸಲು ನನಗೆ ಇಷ್ಟವಿಲ್ಲ ಎಂಬುದಾಗಿ ಹೇಳಿ ವಿಷ್ಣುಪ್ರಿಯ ದೂರವಾಗಿದ್ದಳು ಎಂಬುದಾಗಿ ತಿಳಿದು ಬಂದಿದೆ. ಇದೇ ವಿಚಾರಕ್ಕೆ ಪ್ರತಿಕಾರ ತೀರಿಸಲು ಈತ ಹೀಗೆ ಮಾಡಿದ್ದಾನೆ ಎಂಬುದಾಗಿ ತಿಳಿದು ಬಂದಿದ್ದು ಇದು ನಿಜಕ್ಕೂ ಕೂಡ ಪ್ರತಿಯೊಬ್ಬರು ಖಂಡಿಸಬೇಕಾಗಿರುವಂತಹ ವಿಚಾರವಾಗಿದೆ ಎಂದರೆ ತಪ್ಪಾಗಲಾರದು.

Leave a Comment

error: Content is protected !!