ಮೊದಲನೇ ಮದುವೆ ಮುಚ್ಚಿಟ್ಟು ಎರಡನೇ ಮದುವೆ ಆಗಿ ಹನಿಮೂನ್ ಗೆ ಹೊರಟಿದ್ದ ಮಹಾ ಭೂಪನಿಗೆ ಮೊದಲ ಹೆಂಡತಿ ಇಂದ ಶಾಕ್ ಆಗಿದ್ದೇನು ಗೊತ್ತಾ?

ಈಗಾಗಲೇ ಮದುವೆಯಾಗಿದ್ದ ಒಬ್ಬ ವ್ಯಕ್ತಿ ಹೆಂಡತಿಯ ಜೊತೆಗೆ ಜಗಳ ಮಾಡಿಕೊಂಡಿದ್ದ ಕಾರಣದಿಂದಾಗಿ ಆಕೆಗೆ ತಿಳಿಯದಂತೆ ಎರಡನೇ ಮದುವೆಯನ್ನು ಮಾಡಿಕೊಳ್ಳಲು ಹೋಗಿದ್ದ. ಮದುವೆಯ ಮಾರನೆ ದಿನ ಫಾರಿನ್ ಟೂರ್ ಮಾಡುವುದಕ್ಕೆ ಕೂಡ ತಯಾರಿಯನ್ನು ಮಾಡಿಕೊಳ್ಳುತ್ತಿದ್ದ. ಆದರೆ ನಂತರ ನಡೆದ ಘಟನೆ ನಿಜಕ್ಕೂ ಕೂಡ ಪ್ರತಿಯೊಬ್ಬರ ಮುಖದಲ್ಲಿ ನಗುತರಿಸುವಂತೆ ಮಾಡುತ್ತದೆ.

ಹೌದು ಮಿತ್ರರೇ ಈ ಘಟನೆ ನಡೆದಿರುವುದು ಹಾಸನ ಜಿಲ್ಲೆಯಲ್ಲಿ. ಬೆಂಗಳೂರಿನ ಚಿಕ್ಕಸಂದ್ರದ ಮಧುಸೂದನ್ ಎನ್ನುವಾತ ಈ ಘಟನೆಯ ಮುಖ್ಯ ಕೇಂದ್ರ ಬಿಂದು ಆಗಿದ್ದಾನೆ. ಇನ್ನೇನು ಮದುಮಗಳಿಗೆ ತಾಳಿ ಕಟ್ಟಬೇಕು ಎನ್ನುವ ಅಷ್ಟರಲ್ಲಿ ಆತ ಹೆಣ್ಣಿನ ಕಡೆಯವರ ಕೈಗೆ ಸಿಕ್ಕಿ ಬಿದ್ದು ಧರ್ಮದೇವತೆಯನ್ನು ತಿಂದು ಈಗ ನಗೆ ಪಾಟಲಿಗೆ ಒಳಗಾಗಿದ್ದಾನೆ. ಅಷ್ಟಕ್ಕೂ ನಡೆದಿದ್ದು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಮಧುಸೂದನ್ ಈಗಾಗಲೇ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಸುದಾ ಎನ್ನುವವರನ್ನು ಮದುವೆಯಾಗಿದ್ದ. ಗಂಡ ಹೆಂಡತಿ ನಡುವೆ ಆಗಾಗ ಬೆಂಬಿಡದಂತೆ ಜಗಳಗಳು ನಡೆಯುತ್ತಲೇ ಇದ್ದವು. ಇದೇ ಕಾರಣಕ್ಕಾಗಿ ಆತ ಅವಳನ್ನು ಬಿಟ್ಟು ಹಾಸನಕ್ಕೆ ಎರಡನೇ ಮದುವೆ ಆಗುವುದಕ್ಕೆ ಬಂದಿದ್ದ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಆ ಹೆಣ್ಣು ಮಗಳ ಜೊತೆಗೆ ಮಧುಸೂದನ್ ಮದುವೆ ಆಗಬೇಕಾಗಿತ್ತು ಆದರೆ ಅದೇ ಸಂದರ್ಭದಲ್ಲಿ ಹೆಣ್ಣಿನ ಕಡೆಯವರಿಗೆ ಒಂದು ಕರೆ ಬರುತ್ತದೆ. ಆ ಫೋನ್ ಕರೆಯಲ್ಲಿ ಮಧುಸೂದನ್ ಈಗಾಗಲೇ ಮದುವೆಯಾಗಿದ್ದಾನೆ ಹಾಗೂ ಆ ಮೊದಲ ಹೆಂಡತಿ ನಾನೆ ಎಂಬುದಾಗಿ ಹೇಳುತ್ತಾಳೆ.

ಈ ವಿಚಾರ ಗೊತ್ತಾಗುತ್ತದೆ ಮಧುಸೂದನ್ ಅನ್ನು ಹೆಣ್ಣಿನ ಕಡೆಯವರು ಹಿಡಿದುಕೊಂಡಿದ್ದಾರೆ. ಒಂದು ನಾಲ್ಕು ಏಟು ನೀಡಿದ ನಂತರವೇ ಮಧುಸೂದನ್ ಇರುವ ವಿಚಾರವನ್ನು ಬಾಯಿಬಿಟ್ಟಿದ್ದಾನೆ. ಇದಕ್ಕಿಂತಲೂ ಪ್ರಮುಖವಾಗಿ ತಿಳಿದು ಬಂದಿರುವ ಇನ್ನೊಂದು ವಿಚಾರವೇನೆಂದರೆ ಎರಡನೇ ಮದುವೆ ಆಗುತ್ತಿದ್ದಂತೆ ಹೊಸ ಹೆಣ್ಣು ಮಗಳೊಂದಿಗೆ ವಿದೇಶಕ್ಕೆ ಹೋಗುವ ಪ್ಲಾನಿಂಗ್ ಅನ್ನು ಕೂಡ ಆತ ಮಾಡಿಕೊಂಡಿದ್ದ ಎಂಬುದಾಗಿ ತಿಳಿದು ಬಂದಿದೆ. ಅದಕ್ಕಾಗಿ ಟಿಕೆಟನ್ನು ಕೂಡ ಬುಕ್ ಮಾಡಿದ್ದ ಎಂಬುದು ನಂತರದ ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸುವುದನ್ನು ಮಾತ್ರ ಮರೆಯಬೇಡಿ.

Leave a Comment

error: Content is protected !!