ಕನ್ನಡಿಗನ ಆಯುರ್ವೇದ ಕೈ ಚಳಕದಿಂದ ಕೊರೋನಾದಿಂದ ಪಾರಾದ ಬ್ರಿಟನ್ ರಾಜಕುಮಾರ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದಕ್ಕೆ ತನ್ನದೆಯಾದ ವಿಶೇಷ ಸ್ಥಾನಮಾನವಿದೆ, ಅಷ್ಟೇ ಅಲ್ಲದೆ ಹತ್ತಾರು ವೈಯಾರಸ್ ಗಳನ್ನೂ ನಿವಾರಿಸುವ ಗುಣಗಳನ್ನು ನಮ್ಮ ಆಯುರ್ವೇದ ಪರಂಪರೆಯಲ್ಲಿ ಕಾಣಬಹುದಾಗಿದೆ. ಹಿಂದಿನ ಕಾಲದಲ್ಲಿ ನೂರಾರು ರೋಗಗಳನ್ನು ಆಯುರ್ವೇದ ನಿವಾರಣೆ ಮಾಡುತ್ತಿತ್ತು ಆದ್ರೆ ಇದೀಗ ಇಂಗ್ಲಿಷ್ ಮೆಡಿಶನ್ ಪ್ರಭಾವದಿಂದ ಆಯುರ್ವೇದ ಎಲ್ಲೋ ಒಂದು ಕಡೆ ಮರೆಯಾಗಿದೆ ಅನ್ನಬಹುದು

ವಿಷ್ಯಕ್ಕೆ ಬರೋಣ ದೇಶದಲ್ಲಿ ಕೊರೋನಾ ಪ್ರಭಾವಕ್ಕೆ ಸಾಕಷ್ಟು ಜನ ಭಯಭೀತರಾಗಿದ್ದಾರೆ ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆ, ಹೀಗಿರುವಾಗ ಬೆಂಗಳೂರಿನ ಆಯುರ್ವೇದ ವೈದ್ಯ ಬ್ರಿಟನ್ ರಾಜ್ಕುಮಾರನಿಗೆ ಆಯುರ್ವೇದ ಚಿಕಿತ್ಸೆ ನೀಡಿ ಗುಣಮುಖ ಮಾಡಿದ್ದಾರೆ.

ಹೌದು ಬ್ರಿಟನ್‍ ಪ್ರಿನ್ಸ್ ಚಾರ್ಲ್ಸ್‌ಗೆ ಕೊರೊನಾ ವೈರಸ್ ಬಂದಿದ್ದು, ಸೋಂಕು ಗುಣಮುಖವಾಗುವುದಕ್ಕೆ ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿ ಕೊರೊನಾ ಗೆದ್ದು ಬಂದಿದ್ದಾರೆ. ಅನ್ನೋದನ್ನ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಅವರು ಬಹಿರಂಗ ಪಡಿಸಿದ್ದಾರೆ.

ಇನ್ನು ಇದರ ಬಗ್ಗೆ ಮಾತನಾಡಿರುವ ಶ್ರೀ ಪಾದ್ ನಾಯ್ಕ್ ಕೊರೋನಾ ವೈರಸ್ ನಿವಾರಣೆಗೆ ಉತ್ತಮ ಚಿಕಿತ್ಸೆ ಇದೆ ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಅನ್ನೋದನ್ನ ಹೇಳಿದ್ದಾರೆ. ಇನ್ನು ಬ್ರಿಟನ್ ರಾಜ್ಕುಮಾರಗೆ ಚಿಕಿತ್ಸೆ ನೀಡಿದ ಐಸಾಕ್ ಮಥಾಯ್ ಅವರು ‘ಸೌಖ್ಯ’ ಎಂಬ ಆಯುರ್ವೇದ ರೆಸಾರ್ಟ್ ನಡೆಸುತ್ತಿದ್ದಾರೆ ಅನ್ನೋದನ್ನ ತಿಳಿಯಲಾಗಿದೆ.

Leave a Comment

error: Content is protected !!