ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ಕಾದಾಟದ ನಡುವಲ್ಲೇ ವೈರಲ್ ಆಯ್ತು ನೋಡಿ, ಡಿ ಬಾಸ್ ಅವರ ತಾಯಿಯ ಆಡಿಯೋ?

Actor Darshan Mother Meena talk About Puneeth rajkumar: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ನಡುವೆ ಈಗ ಎಲ್ಲವೂ ಕೂಡ ಸರಿಯಾಗಿದೆ ಎಂದು ನಿಚ್ಚಳವಾಗಿ ಹೇಳಬಹುದಾಗಿದೆ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಚಪ್ಪಲಿ ಎಸೆದಿದ್ದಾರೆ ಎಂಬ ಸುದ್ದಿ ಹೊರ ಬಂದ ಮೇಲೆ ರಾಜವಂಶದ ಹಾಗೂ ದರ್ಶನ್ ಅವರ ಅಭಿಮಾನಿಗಳ ನಡುವೆ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಅಸಮಾಧಾನ ಈಗ ನೇರ ನೇರವಾಗಿಯೇ ಶುರುವಾಗಿದೆ.

Actor Darshan Mother Meena talk About Puneeth

ಒಂದು ಕಡೆ ದರ್ಶನ್ ಅವರ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದಲೇ ಇವೆಲ್ಲ ಪ್ರಾರಂಭವಾಯಿತು ಎಂದು ಮಾತನಾಡಿದರೆ ಆ ಕಡೆ ರಾಜವಂಶದ ಅಭಿಮಾನಿಗಳು ಇದು ದರ್ಶನ್ ಅಭಿಮಾನಿಗಳ ಕುಮಕ್ಕು. ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಕಂಟ್ರೋಲ್ ಮಾಡುವುದನ್ನು ಕಲಿತುಕೊಳ್ಳಬೇಕು ಎಂಬುದಾಗಿ ಫಿಲಂ ಚೇಂಬರ್ ಬಳಿ ನಿಂತು ಗುಡುಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇರುವಂತಹ ಅಭಿಮಾನಿಗಳ ನಡುವಿನ ಸೋಶಿಯಲ್ ಮೀಡಿಯಾ ಅಸಮಾಧಾನ ಎನ್ನುವುದು ಈಗ ಫಿಲಂ ಚೇಂಬರ್ ಮೆಟ್ಟಿಲ ತನಕ ಬಂದು ನಿಂತಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರ ಆಡಿಯೋ ವೈರಲ್ ಆಗುತ್ತಿದ್ದು ದೊಡ್ಮನೆ ಅವರಿಗೆ ಮಾಡಿರುವ ಸಹಾಯವನ್ನು ನೆನಪಿಸಿಕೊಂಡಿರುವ ಆಡಿಯೋ Viral ಆಗುತ್ತಿದೆ. ಹೌದು ಗೆಳೆಯರೇ ಆಡಿಯೋ ವೈರಲ್ ಆಗುತ್ತಿದೆ ಎಂದ ಮಾತ್ರಕ್ಕೆ ಅದು ಇಂದು ನನ್ನ ಹೇಳಿರುವ ಮಾತಲ್ಲ ಬದಲಾಗಿ ಹಲವಾರು ವರ್ಷಗಳ ಹಿಂದೆ ದೊಡ್ಡಮನೆ ಮಾಡಿರುವ ಸಹಾಯವನ್ನು ನೆನೆಸಿಕೊಂಡು ಮೀನಾ ತೂಗುದೀಪ್ ಆಡಿರುವ ಮಾತುಗಳು.

ಮೀನಾ ತೂಗುದೀಪ್ ಅವರು ಕಷ್ಟಕಾಲದಲ್ಲಿ ದೊಡ್ಮನೆ ಅವರು ಅದರಲ್ಲಿ ವಿಶೇಷವಾಗಿ ಪಾರ್ವತಮ್ಮ ಹಾಗೂ ರಾಜಕುಮಾರ್ ಅವರು ಮಾಡಿರುವ ಸಹಾಯವನ್ನು ನೆನೆಸಿಕೊಂಡು ಕೃತಜ್ಞ ಪೂರ್ವಕವಾಗಿ ಮಾತನಾಡಿರುವ ಮಾತುಗಳು ಈಗ ವೈರಲ್ ಆಗುತ್ತಿವೆ. ಆ ಆಡಿಯೋದಲ್ಲಿ ಮೀನಾ ತೂಗುದೀಪ್ ಅವರು ಇಂದು ದರ್ಶನ್ ಇಷ್ಟೊಂದು ಹೈಟ್ ಹಾಗೂ ವೈಟ್ ಇದೆ ಅಂದ್ರೆ ಅದಕ್ಕೆ ಕಾರಣ ದೊಡ್ಮನೆ ಎಂಬುದಾಗಿ ಹೇಳುತ್ತಾರೆ.

ಚಪ್ಪಲಿ ಎಸೆದವರ ವಿರುದ್ಧ ಹುಬ್ಬಳ್ಳಿಯಲ್ಲಿ ನಿಂತು ಡಿ ಬಾಸ್ ಓಪನ್ ಚಾಲೆಂಜ್ ಹಾಕಿ ಹೇಳಿದ್ದೇನು ಗೊತ್ತಾ..

ಸುಮ್ಮಸುಮ್ಮನೆ ಅಣ್ಣಾವ್ರ ಮನೆಯನ್ನು ದೊಡ್ಮನೆ ಎಂಬುದಾಗಿ ಕನ್ನಡ ಚಿತ್ರರಂಗದಲ್ಲಿ ಕರೆಯುವುದಿಲ್ಲ ಎಂಬುದನ್ನು ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಸಾಬೀತುಪಡಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 

Leave a Comment

error: Content is protected !!