ಸ್ನೇಹಿತರೆ ನಿಮಗೆ ಒಂದು ತಿಂಗಳ ಹಿಂದೆ ಹೋದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ವಿಚಾರ ಎಂದರೆ ಅದು ತಮಿಳು ಚಿತ್ರ ಹಾಗೂ ಕಿರುತೆರೆಯ ನಟಿಯಾಗಿರುವ ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿದ್ದು. ರವೀಂದ್ರನ್ ಚಂದ್ರಶೇಖರ್ ಅವರು ಧಡೂತಿ ದೇಹವನ್ನು ಹೊಂದಿದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು ಎಂಬುದು ಕೂಡ ನಿಮಗೆಲ್ಲರಿಗೂ ತಿಳಿದಿರುವ ವಿಚಾರ.
ಅದರಲ್ಲೂ ಇವರಿಬ್ಬರು ಮದುವೆ ಆದ ನಂತರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಲ್ಲರೂ ಕೂಡ ಇದು ಯಾವುದೋ ಸಿನಿಮಾ ಅಥವಾ ಧಾರವಾಹಿಯ ಚಿತ್ರಿಕರಣದ ಫೋಟೋ ಇರಬಹುದು ನಿಜವಾಗಿ ಇರಲು ಸಾಧ್ಯವೇ ಇಲ್ಲ ಎಂಬುದಾಗಿ ಹಾಸ್ಯ ಮಾಡಿದ್ದರು. ಇದಕ್ಕೆಲ್ಲ ಈ ಜೋಡಿಗಳು ಸರಿಯಾದ ಉತ್ತರವನ್ನು ಕೂಡ ವಿಡಿಯೋ ಹಾಗೂ ಸಂದರ್ಶನದ ಮುಖಾಂತರ ನೀಡಿದ್ದರು. ಕೆಲವರು ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಹಣಕ್ಕಾಗಿ ಮದುವೆಯಾಗಿದ್ದಾರೆ ಎಂಬುದಾಗಿ ಕೂಡ ಸುದ್ದಿ ಮಾಡಿದ್ರು.
ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಮಹಾಲಕ್ಷ್ಮಿ ನಾನು ಅವರನ್ನು ನಿಜವಾಗಿ ಪ್ರೀತಿಸುತ್ತೇನೆ ನಿಜವಾದ ಪ್ರೀತಿಯೆಂದರೆ ಹೀಗೆ ಇರುವುದು ಎನ್ನುವುದಾಗಿ ಕಡ್ಡಿ ಮುರಿದಂತೆ ಖಡ ಖಂಡಿತವಾಗಿ ಹೇಳಿದ್ದರು. ಮಹಾಲಕ್ಷ್ಮಿ ಅವರಿಗೆ ಹಾಗೂ ರವೀಂದ್ರನ್ ಚಂದ್ರಶೇಖರ್ ಇಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿತ್ತು. ಇನ್ನು ಮದುವೆಯಾದ ನಂತರ ಹನಿಮೂನ್ ಗೆ ವಿದೇಶಿ ಪ್ರವಾಸಿ ತಾಣಗಳಿಗೆ ಹೋಗುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಈ ದಂಪತಿಗಳು ಈಗ ಹೋಗುತ್ತಿರುವುದು ಎಲ್ಲಿಗೆ ಗೊತ್ತಾ.
ಹೌದು ಗೆಳೆಯರೇ ಮಹಾಲಕ್ಷ್ಮಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ರವೀಂದ್ರನ್ ಚಂದ್ರಶೇಖರ್ ಅವರ ಜೊತೆಗೆ ಹೋಗುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇವರಿಬ್ಬರ ಮದುವೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.