ವಿದೇಶಿಗರಿಗೆ ಸೆಡ್ಡು ಹೊಡೆದು ಲಕ್ಷಗಟ್ಟಲೆ ಸಂಪಾದಿಸುತ್ತಿರುವ ರೈತ

ಮನುಷ್ಯಇಷ್ಟು ಅಭಿವೃದ್ಧಿ ಹೊಂದಿ ಈ ಹಂತಕ್ಕೆ ಬಂದಿದ್ದಾನೆ ಅಂದ್ರೆ ಅದಕ್ಕೆ ಕಾರಣ ಆತನ ಸೂಕ್ಷ್ಮ ಬುದ್ಧಿ ಮತ್ತು ಸೂಕ್ಷ್ಮ ಅವಲೋಕನೆ. ಅದೇ ಸೂಕ್ಷ್ಮ ಬುದ್ಧಿ ಯನ್ನು ಬಳಸಿಕೊಂಡ ಇವರು ನಾಲ್ಕು ಲಕ್ಷದ ಉದ್ಯೋಗ ಬಿಟ್ಟು ಬಂದು ವ್ಯವಸಾಯ ಮಾಡಿ ವಿದೇಶಿಗರಿಗೆ ಸೆಡ್ಡು ಹೊಡೆದು ದುಡಿಯುತ್ತಿದ್ದಾರೆ. ಕನ್ನಡದ ಮಣ್ಣಿನಲ್ಲಿ ಚಿನ್ನ ಬೆಳೆಯಲು ಹೊರಟಿದ್ದಾರೆ. ಅಷ್ಟಕ್ಕೂ ಅವರು ಬಳಸಿದ ಐಡಿಯಾ ಯಾವುದು ಅಂತಾ ತಿಳಿಯೋಣ. ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿ ಹಳ್ಳಿಯ 36 ವರ್ಷದ ಗಿರೀಶ್ ಅವರು ಬಿ. ಇ ಮಾಡಿ ತಿಂಗಳಿಗೆ ನಾಲ್ಕು ಲಕ್ಷ ಸಂಬಳ ಪಡೆಯುತ್ತಾ ಜರ್ಮನಿಯಲ್ಲಿ ಒಳ್ಳೆಯ ಉದ್ಯೋಗ ದಲ್ಲಿದ್ದರು.

ಆದರೆ ಗಿರೀಶ್ ಅವರ ಮನಸ್ಸು ಮಾತ್ರ ಯಾವಾಗಲೂ ಊರಿನ ಕಡೆ ಹಾಗೂ ತಂದೆ, ತಾಯಿಯ ಕಡೆ ಸೆಳೆಯುತ್ತಿತ್ತು.ಕೊನೆಗೆ ದೊಡ್ಡ ನಿರ್ಧಾರ ಮಾಡಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಲ್ಲಿ ತನಗಿರುವ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದರು ಗಿರೀಶ್ ಅವರು. ನೀರಿಗಾಗಿ ತನ್ನ ಜಮೀನಿನಲ್ಲಿ ಸುಮಾರು 40 ಬೋರ್ ವೆಲ್ ಹಾಕಿಸಿದರು ಆದರೆ ನೀರು ಮಾತ್ರ ಸಿಗಲಿಲ್ಲ ಆಗ ಗಿರೀಶ್ ಗೆ ಹೋಳೆಯಿತು ಅದ್ಭುತ ಆಲೋಚನೆ. ಅ ಐಡಿಯಾ ತುಂಬಾ ಸಿಂಪಲ್ ಅದನ್ನು ಕಾರ್ಯ ರೂಪಕ್ಕೆ ತರುವುದೇ ದೊಡ್ಡ ಸವಾಲು.

ಆ ಐಡಿಯಾ ಏನಪ್ಪಾ ಅಂದ್ರೆ ಮಳೆ ನೀರನ್ನು ಶೇಖರಣೆ ಮಾಡಿ ಅದರಿಂದ ವ್ಯವಸಾಯ ಮಾಡುವುದು. ಅದು ಹೇಗೆ ಅನ್ನೋದು ಗಿರೀಶ್ ಮುಂದಿದ್ದ ದೊಡ್ಡ ಸವಾಲು. ತನಗಿದ್ದ ಹತ್ತು ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆಯಲು ಪ್ಲ್ಯಾನ್ ಮಾಡಿದ ಗಿರೀಶ್ ಅವರು ಒಂದು ಎಕರೆ ವಿಸ್ತಾರ ವಾದ ಪಾಲಿ ಹೌಸ್ ಗಳನ್ನು ನಿರ್ಮಿಸಿದ್ದಾರೆ. ಅದರ ಒಳಗೆ ಗುಲಾಬಿ ಬೆಳೆಯಲು ಮುಂದಾದರು ಹಾಗೇ ನೀರಿಗಾಗಿ ಒಂದು ಸ್ಕೆಚ್ ಹಾಕಿದರು.ಅದರ ಪ್ರಕಾರ ಮಳೆಗಾಲದಲ್ಲಿ ಪಾಲಿ ಹೌಸ್ ಮೇಲೆ ಬೀಳುವ ಮಳೆಯ ನೀರನ್ನು ಪೈಪ್ ಗಳ ಮೂಲಕ ಹರಿಸಿ ವ್ಯವಸ್ಥಿತವಾದ ಒಂದು ಕೆರೆಯಲ್ಲಿ ಶೇಖರಣೆ ಮಾಡುವುದು. ಆ ಶೇಖರಣೆಯಾದ ಮಳೆಯ ನೀರನ್ನು ವರ್ಷ ಪೂರ್ತಿ ಬಳಸಿ ಕೊಳ್ಳುವುದು.

ಹೀಗೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿದ ಗಿರೀಶ್ ಅವರು ಕೇವಲ ಏಳು ಪಾಲಿ ಹೌಸ್ ಮೇಲೆ ಬೀಳುವ ಮಳೆಯ ನೀರನ್ನು ಬಳಸಿಕೊಂಡು ಗುಲಾಬಿ ಬೆಳೆಯುತ್ತಿದ್ದಾರೆ. ಮಳೆಗಾಲದಲ್ಲಿ ಒಂದು ಕೋಟಿ ಮೂವತ್ತು ಲಕ್ಷ ಲೀಟರ್ ನೀರನ್ನು ಶೇಖರಣೆ ಮಾಡುತ್ತಿರುವ ಗಿರೀಶ್ .ಆ ನೀರನ್ನು ಬಳಸಿಕೊಂಡು ಸುಂದರವಾದ ಹೂಗಳನ್ನು ಬೆಳೆಯುತ್ತಿದ್ದಾರೆ. ತಿಂಗಳಿಗೆ 15 ಸಾವಿರ ಗುಲಾಬಿಗಳನ್ನು ಬೆಳೆಯುತ್ತಿರುವ ಗಿರೀಶ್ ಅವರು ಭಾರತ ವಿದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.ಎಂ.ಟೆಕ್ ಓದಿದ ಗಿರೀಶ್ ಅವರ ಪತ್ನಿ ಕೂಡ ಗಂಡನ ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಈ ಕೃಷಿ ಪದ್ಧತಿಯಿಂದ ಇತರೆ ರೈತರಿಗೆ ಸ್ಫೂರ್ತಿ ಯಾಗಿದ್ದಾರೆ ಗಿರೀಶ್

Leave a Comment

error: Content is protected !!