Yuvarajkumar about darshan : ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧವಾಗಿ ನಡೆದಿರುವಂತಹ ಕೃತ್ಯ ಕನ್ನಡ ಚಿತ್ರರಂಗದ ಎಲ್ಲರ ಮನಸ್ಸಿನಲ್ಲಿ ಕೂಡ ಬೇಸರವನ್ನು ತರಿಸಿದೆ ಆದರೆ ಈ ಪ್ರಕರಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಶಾಮೀಲಾಗಿದ್ದಾರೆ ಎಂಬುದಾಗಿ ಯಾವುದೇ ಸರಿಯಾದ ಸಾಕ್ಷಾಧಾರಗಳು ಇಲ್ಲದೆ ಆರೋಪ ಮಾಡುತ್ತಿರುವುದು ಎಲ್ಲರ ಬೇಸರಕ್ಕೂ ಕೂಡ ಕಾರಣವಾಗಿದೆ. ಅದರಲ್ಲೂ ಇದರ ಬಗ್ಗೆ ರಾಘವೇಂದ್ರ ರಾಜಕುಮಾರ್ ಅವರ ಮಗನಾಗಿರುವ ಯುವರಾಜ್ ಕುಮಾರ್ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಹೊಸಪೇಟೆಯಲ್ಲಿ ನಡೆದಿರುವ ಘಟನೆಯ ಕುರಿತಂತೆ ಅವರಿಗೂ ಕೂಡ ಬೇಸರವಿದೆ ಆದರೆ ಈ ಪ್ರಕರಣದಲ್ಲಿ ಸುಖ ಸುಮ್ಮನೆ ರಾಜವಂಶದ ಅಂದರೆ ನಮ್ಮ ಚಿಕ್ಕಪ್ಪನ ಅಭಿಮಾನಿಗಳನ್ನು ಮಧ್ಯಕ್ಕೆ ತರುತ್ತಿರುವುದು ನಿಜಕ್ಕೂ ಬೇಸರದ ವಿಚಾರ ಎಂಬುದಾಗಿ ಯುವರಾಜ್ ಕುಮಾರ್ ಹೇಳಿದ್ದಾರೆ. ಈ ಕುರಿತಂತೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಯುವರಾಜ್ ಕುಮಾರ್ ಸುಧೀರ್ಘ ಪತ್ರವೊಂದನು ಬರೆದಿದ್ದಾರೆ.
ಗೌರವ ಎನ್ನುವುದು ಪರಸ್ಪರವಾಗಿರಬೇಕು. ನಮ್ಮ ಚಿಕ್ಕಪ್ಪ ಅಪ್ಪು ಅವರು ಮೊದಲಿನಿಂದಲೂ ಕೂಡ ಗೌರವ ಪ್ರೀತಿ ಹಾಗೂ ಮಹಿಳೆಯರಿಗೆ ಗೌರವ ನೀಡುವುದರ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ಜೀವನವನ್ನು ನಡೆಸಿದವರು. ಎಲ್ಲಕ್ಕಿಂತ ಪ್ರಮುಖವಾಗಿ ಮೊದಲಿನಿಂದಲೂ ನಮ್ಮ ಅಭಿಮಾನಿಗಳು ಬೇರೆ ಕಲಾವಿದರಿಗೆ ಪ್ರೀತಿ ಹಾಗೂ ಗೌರವಗಳನ್ನು ನೀಡುತ್ತಾ ಬಂದವರು. ಒಂದು ವೇಳೆ ನಮ್ಮ ಅಭಿಮಾನಿಗಳನ್ನು ಕೆಣಕಿದರೆ ಅದಕ್ಕೆ ಪ್ರತಿಯಾದ ಪ್ರತಿಕ್ರಿಯೆ ಬರುತ್ತದೆ ಆದರೆ ನಡೆಯುವ ಎಲ್ಲಾ ಘಟನೆಗಳಿಗೂ ಅವರೇ ಕಾರ್ಣಿಕರ್ತರಾಗಿದ್ದಾರೆ ಅಥವಾ ಅವರೇ ಮಾಡಿದ್ದಾರೆ ಎಂದು ಹೇಳುವುದು ತಪ್ಪು.
ಈ ಕೃತ್ಯವನ್ನು ನಾನು ಕೂಡ ಖಂಡಿಸುತ್ತೇನೆ ಆದರೆ ಯಾರೋ ಮಾಡಿರುವ ತಪ್ಪನ್ನು ಯಾರದೋ ಮೇಲೆ ಹೊರಿಸುವುದು ತಪ್ಪು. ಈ ಕುರಿತಂತೆ ತನಿಖೆಯಾಗಿ ತಪ್ಪಿತಸ್ಥ ಯಾರೆಂಬುದು ಎಲ್ಲರ ಕಣ್ಣ ಮುಂದೆ ಬರಲಿ. ಕಾಣದ ಕೈಗಳು ದಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡಿದರು ಕೂಡ ಕಾಣುವ ಬುದ್ಧಿ ನಮ್ಮದಾಗಿರಲಿ ಎಂಬುದಾಗಿ ಯುವರಾಜ್ ಕುಮಾರ್ ಅವರು ಪರೋಕ್ಷವಾಗಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ದೊಡ್ಡ ಮನೆಯ ಕಡೆಯಿಂದ ಖಾರವಾಗಿಯೇ ಕುಟುಕುತ್ತಿದ್ದಾರೆ ಎಂದು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.