ಕೆಜಿಎಫ್ ಖ್ಯಾತಿಯ, ಪ್ರಶಾಂತ್ ನೀಲ್ ಅವರ ಜೊತೆಯಾಗಿ ಪುನೀತ್ ರುದ್ರನಾಗ್ ಅವರ ನಿರ್ದೇಶನದಲ್ಲಿ ಮೂಡಿ ಬರುವ ಯುವ ರಣಧೀರ ಕಂಠೀರವ ಚಿತ್ರದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್(yuva rajkumar) ನಟಿಸಿದ್ದಾರೆ ಎಂಬ ವಿಚಾರವು ಎಲ್ಲರಿಗೂ ತಿಳಿದಿದೆ.
ಆದರೆ ಚಿತ್ರೀಕರಣ ಎಲ್ಲಿಯವರೆಗೆ ನಡೆದಿದೆ? ಚಿತ್ರವೂ ರಿಲೀಸ್ ಆಗುವುದು ಯಾವಾಗ? ಎಂಬೆಲ್ಲಾ ಮಾಹಿತಿಗಳನ್ನು ಚಿತ್ರತಂಡವು ನೀಡಿಲ್ಲ. ಇದೇ ಕಾರಣಕ್ಕಾಗಿ ಅಣ್ಣಾವ್ರ ಮೊಮ್ಮಗನ ಚೊಚ್ಚಲ ಚಿತ್ರ ಯುವರಣಧೀರ ಕಂಠೀರವ ಸ್ಟಾಪ್ ಆಗಿದೆ ಎನ್ನಲಾಗುತ್ತಿದೆ. ಟೀಸರ್ ನ ಬಳಿಕ ಯಾವುದೇ ಅಪ್ಡೇಟ್ಸ್ ಇರದ ಕಾರಣ ಅಭಿಮಾನಿಗಳಲ್ಲಿ ಈ ಸಂದೇಹ ಮೂಡಿದೆ.
ಈ ಕುರಿತಾಗಿ ಪುನೀತ್(puneet rajkumar) ರುದ್ರನಾಗವರಲ್ಲಿ ಕೇಳಿದಾಗ ಅವರು ‘ಪ್ರಶಾಂತ್ ನೀಲ್ ಸರ್ ಹೇಳಿದ ಹಾಗೆ ಉಗ್ರಂ ಚಿತ್ರೀಕರಣದ ನಂತರ ಅವರು ಸಿನಿಮಾ ಇಂಡಸ್ಟ್ರಿಯನ್ನೇ ಬಿಟ್ಟು ಹೋಗಬೇಕು ಅನ್ನುವಷ್ಟು ಬೇಸರಗೊಂಡಿದ್ದರು. ಯಾಕೆ ಯುವ ರಣಧೀರ ಕಂಠೀರವ ನಿಂತೋಯ್ತು ಅಂತ ಹೇಳೋಕೆ ಹೊಸದೊಂದು ಸಿನಿಮಾನೇ ಮಾಡಬಹುದು ನಾನು. ಅಷ್ಟು ಹಿಂಸೆ ತಗೊಂಡಿದ್ದೇನೆ ಅದರ ಬಗ್ಗೆ’ ಎಂದರು.
ಅಷ್ಟೇ ಅಲ್ಲದೆ ಜಗ್ಗೇಶ್ ಅವರ ಒಂದು ಮಾತನ್ನು ನೆನಪಿಸಿಕೊಳ್ಳುತ್ತಾ, ‘ಜಗ್ಗೇಶ್ ಸರ್ ಹೇಳಿದ್ರು ನಿಮ್ಮಲ್ಲಿರುವ ಟ್ಯಾಲೆಂಟನ್ನು ಯಾರ ಎದುರಲ್ಲೂ ತೋರಿಸಬೇಡಿ; ಒಂದು ಕಲ್ಲು ಬೀಳುವ ಜಾಗದಲ್ಲಿ 22 ಕಲ್ಲು ಬೀಳುತ್ತದೆ ಅಂತ.. ಯುವರಣದೀರ ಕಂಠೀರವ ಸಿನಿಮಾವನ್ನು ಉಳಿಸಿಕೊಳ್ಳಲು ತುಂಬಾ ಕಷ್ಟ ಪಟ್ಟವರು ಯುವ ರಾಜಕುಮಾರ. ಟೀಸರ್ ರಿಲೀಸ್ ಆದ ದಿನದಿಂದಲೂ ಸಮಸ್ಯೆಯೇ ನಮಗೆ. ಆದರೆ ನಮ್ ಹಿಂದೆ ಬೆನ್ನೆಲುಬಾಗಿ ಬೆನ್ತಡ್ತಾ ನಿಂತಿದ್ದು ಪುನೀತ್ ರಾಜಕುಮಾರ್. ಅಂತ ದೊಡ್ಡ ಶಕ್ತಿ ನಮ್ ಹಿಂದೆ ನಿಂತಿತ್ತು. ಆದರೆ ಆ ದೇವರು ಅದನ್ನು ಕಿತ್ತುಕೊಂಡ್ಬಿಟ್ಟ. ಹೇಗ್ ಮಾಡಕಾಗತ್ತೆ ಸಿನಿಮಾ?? ಪುನೀತ್ ರಾಜಕುಮಾರ್ ಅವರ ಸಪೋರ್ಟ್ ಇಂದಾನೆ ಆಗಬೇಕಾದ ಸಿನಿಮಾ. ಅವರಿಲ್ಲದೆ ತುಂಬಾ ಕಷ್ಟವಾಯಿತು’ ಎಂದರು.
‘ಚಿತ್ರದ ಮೇಲೆ ತುಂಬಾ ಸಾಲವಿತ್ತು. ಹೈ ಬಜೆಟ್ ಸಿನಿಮಾ ಆದ್ರಿಂದ ಈಗ ನಮಗೆ ಯಾರ ಸಪೋರ್ಟ್ ಕೂಡ ಇಲ್ಲ. ಡ್ರಾಪ್ ಮಾಡಬೇಕು ಅನ್ನೋ ಮನೋಭಾವನೆಯಿಂದ ನಾವು ಚಿತ್ರವನ್ನು ನಿಲ್ಲಿಸಿದ್ದಲ್ಲ. ಯುವರಣಧೀರ ಕಂಠೀರವ ಚಿತ್ರವನ್ನು ಪಾರ್ಕ್ ಮಾಡಿದ್ದೀವಿ ಅಷ್ಟೇ. ಮುಂದೆ ನಾನೇನು ಮಾಡ್ತೀನಿ? ಆ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳುತ್ತಿನೋ ಇಲ್ಲವೋ? ಮುಂದೆ ಯಾವ ಸಿನಿಮಾ ಮಾಡ್ತೀನಿ? ಇವೆಲ್ಲ ವಿಚಾರವಾಗಿ ನಾನೇನು ಹೆಚ್ಚು ಹೇಳೋದಿಕ್ಕೆ ಹೋಗೋದಿಲ್ಲ. ಹೇಳಿ ಹೇಳಿನೇ ನಾನು ಹಾಳಾದೆ ಎನ್ನಬಹುದು’ ಎಂದು ಸಂದರ್ಶನದಲ್ಲಿ ಪುನೀತ್ ರುದ್ರನಾಗವರು ಮಾತನಾಡಿದರು..