ಕಾಂತಾರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡ್ರಾ ಯಶ್! ಚಿತ್ರದ ಬಗ್ಗೆ ಯಶ್ ಇನ್ನೂ ಯಾಕೆ ಮಾತಾಡಿಲ್ಲ ಗೊತ್ತಾ

ಸ್ನೇಹಿತರೆ ರಿಷಬ್ ಶೆಟ್ಟಿ ನಾಯಕನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಈಗಾಗಲೇ ಕನ್ನಡದಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಒಟ್ಟಾರೆ ಜಾಗತಿಕ ಚಿತ್ರ ಜಗತ್ತಿನಲ್ಲಿ 200 ಕೋಟಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದ ಎಂಬುದಾಗಿ ಈಗಾಗಲೇ ಸಿನಿಮಾ ಮೂಲಗಳಿಂದ ತಿಳಿದುಬಂದಿದೆ. ಕನ್ನಡಕ್ಕಿಂತ ಹೆಚ್ಚಾಗಿ ಪಾರಭಾಷೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದಂತೆ ಅಪಾರವಾಗಿ ಜನಮನ್ನಣೆಯನ್ನು ಕಾಂತಾರ ಸಿನಿಮಾ ಗಳಿಸಿಕೊಳ್ಳುತ್ತಿದೆ. ಇದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ನೆಕ್ಸ್ಟ್ ಲೆವೆಲ್ ನಲ್ಲಿ ಬೆಳವಣಿಗೆ ಹೊಂದುತ್ತಿದೆ ಎನ್ನುವುದರ ಮುನ್ಸೂಚನೆಯಾಗಿದೆ ಎಂದರೆ ತಪ್ಪಾಗಲಾರದು.

ಕೆಜಿಎಫ್ ಒಂದು ಕಮರ್ಷಿಯಲ್ ಮಾಸ್ ಸಿನಿಮಾ ಆಗಿತ್ತು. ಹೀಗಾಗಿ ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರಲ್ಲಿ ಯಾವುದೇ ಆಶ್ಚರ್ಯ ಇರಲಿಲ್ಲ. ಆದರೆ ಕಾಂತಾರ ಸಿನಿಮಾ ಒಂದು ಸಮುದಾಯದ ಅಥವಾ ಒಂದು ಪ್ರಾಂತ್ಯದ ಆಚರಣೆ ಹಾಗೂ ನಂಬಿಕೆಗಳ ಹೂರಣವಾಗಿದ್ದು ಅದನ್ನು ಎಲ್ಲಾ ವರ್ಗದ ಹಾಗೂ ಎಲ್ಲಾ ಪ್ರದೇಶದ ಪ್ರೇಕ್ಷಕರು ಒಪ್ಪಿಕೊಂಡಿರುವುದು ನಿಜಕ್ಕೂ ಕೂಡ ಸಿನಿಮಾದ ನಿಜವಾದ ಶಕ್ತಿ ಎಂಬುದಾಗಿ ಹೇಳಿದರೆ ತಪ್ಪಾಗಲಾರದು. ಇನ್ನು ಕಾಂತಾರ ಸಿನಿಮಾದ ಬಗ್ಗೆ ಯಶ್ ರವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದಾಗಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಯಶಸ್ಸನ್ನು ನೋಡಿ ಯಶ್ ಅವರು ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದಾರೆ ಎಂಬುದಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಅದರಲ್ಲೂ ವಿಶೇಷವಾಗಿ ಕೆಜಿಎಫ್ ಸರಣಿ ಚಿತ್ರಗಳ ಮೂಲಕ ದೇಶ ವಿದೇಶದಲ್ಲಿ ತನ್ನ ಸ್ವಂತ ಗುರುತನ್ನು ಹೊಂದಿರುವ ಕನ್ನಡ ಚಿತ್ರರಂಗದ ನಂಬರ್ ಒನ್ ನಾಯಕ ನಟ ಎಂದರೆ ತಪ್ಪಾಗಲಾರದು. ಬಹಿರಂಗವಾಗಿ ಕಾಂತಾರದ ಬಗ್ಗೆ ಮಾತನಾಡದೆ ಇರಬಹುದು ಆದರೆ ರಿಷಬ್ ಶೆಟ್ಟಿ ಅವರು ಹೇಳಿರುವಂತೆ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಮೊದಲು ಕರೆ ಮಾಡಿದ್ದು ಯಶ್ ಅವರೇ ಎಂಬುದಾಗಿ ಹೇಳುತ್ತಾರೆ.

ಹಲವಾರು ಕಮರ್ಷಿಯಲ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ರಿಷಬ್ ಶೆಟ್ಟಿ ಅವರು ಈ ರೀತಿಯ ವಿಭಿನ್ನ ಕಥಾಂದರವನ್ನು ಪ್ರೇಕ್ಷಕರ ಮುಂದೆ ತಂದು ಗೆದ್ದಿರುವುದು ನಿಜಕ್ಕೂ ಕೂಡ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂಬುದಾಗಿ ಯಶ್ ಅವರು ರಿಷಬ್ ಶೆಟ್ಟಿ ಅವರನ್ನು ಕಂಠಪೂರ್ತಿ ಹೊಗಳಿದ್ದಾರೆ. ಸಿನಿಮಾ ನೋಡುವಾಗ ನಾನು ಪೂರ್ತಿ ಚಪ್ಪಾಳೆ ಹಾಗೂ ಶಿಳ್ಳೆಗಳನ್ನು ಹೊಡೆದುಕೊಂಡು ಸಂಪೂರ್ಣವಾಗಿ ಎಂಜಾಯ್ ಮಾಡಿದ್ದೇನೆ ಎಂಬುದಾಗಿ ಕೂಡ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!