ಕಾಂತಾರ ಸಿನಿಮಾವನ್ನು ಮಾಡೋಕೆ ಒಪ್ಪಿದ್ದ ಅಪ್ಪು ಕೊನೆಗೆ ಕೈಬಿಟ್ಟಿದ್ದೇಕೆ

ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಈಗಾಗಲೇ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕಂಟೆಂಟ್ ಪ್ರತಿಯೊಂದು ವರ್ಗದ ಸಿನಿಮಾ ಅಭಿಮಾನಿಗಳಿಗೆ ಮನಸ್ಸಿಗೆ ಅಚ್ಚೊತ್ತಿದೆ ಎಂದರೆ ತಪ್ಪಾಗಲಾರದು.

ಇನ್ನು ಬಿಡುಗಡೆಯ ಸಂದರ್ಭದಲ್ಲಿ ಕಾಂತಾರ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮಾಡಬೇಕಾಗಿತ್ತು ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡಿದ್ದವು. ಪ್ರತಿಯೊಬ್ಬರೂ ಕೂಡ ಇದು ಸಿನಿಮಾ ಪ್ರಮೋಷನ್ ಗಾಗಿ ಗಿಮಿಕ್ ಮಾಡುತ್ತಿರುವುದು ಎನ್ನುವುದಾಗಿ ಮಾತನಾಡಿಕೊಂಡಿದ್ದರು ಆದರೆ ಅದರ ನಿಜವಾದ ಹಿಂದಿನ ರಹಸ್ಯ ಸ್ವತಹ ನಾಯಕ ನಟ ಹಾಗೂ ನಿರ್ದೇಶಕ ಆಗಿರುವ ರಿಷಬ್ ಶೆಟ್ಟಿ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಮೊದಲ ಬಾರಿಗೆ ಈ ಕಥೆಯನ್ನು ವಿಜಯ್ ಕಿರಗಂದೂರು ಅವರಿಗೆ ಹೇಳಿದಾಗ ಈ ಸಿನಿಮಾದಲ್ಲಿ ಅಪ್ಪು ಸರ್ ನಟಿಸಿದರೆ ಚೆನ್ನಾಗಿರುತ್ತಿತ್ತು ಎಂಬುದಾಗಿ ರಿಷಬ್ ಶೆಟ್ಟಿ ಹೇಳುತ್ತಾರೆ. ಕಥೆಯನ್ನು ಕೇಳಿದ ಅಪ್ಪು ಕೂಡ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಾರೆ ಇಂತಹ ಪಾತ್ರಗಳನ್ನು ಮಾಡಬೇಕು ಎನ್ನುವ ಆಸೆ ಕೂಡ ನನಗಿತ್ತು ಎಂಬುದಾಗಿ ಉತ್ಸಾಹದಲ್ಲಿಯೇ ಹೇಳುತ್ತಾರೆ.

ಆದರೆ ರಿಷಬ್ ಶೆಟ್ಟಿ ಅವರಿಗೆ ಈ ಸಿನಿಮಾವನ್ನು ಚಿತ್ರೀಕರಿಸಲು ಮಳೆಗಾಲ ಬೇಸಿಗೆಗಾಲ ಹಾಗೂ ಚಳಿಗಾಲ ಮೂರು ಸಮಯವೂ ಕೂಡ ಬೇಕಾಗಿತ್ತು. ಅಂದರೆ ಆ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ನಟ ಒಂದು ವರ್ಷದ ಕಾಲ್ ಶೀಟ್ ಅನ್ನು ನೀಡಲೇ ಬೇಕಾಗಿತ್ತು. ಆದರೆ ಅಪ್ಪು ಅವರು ಆ ಸಂದರ್ಭದಲ್ಲಿ ದ್ವಿತ್ವ ಹಾಗೂ ಸಂತೋಷ್ ಆನಂದ್ ರಾಮ್ ಅವರ ಸಿನಿಮಾದ ಮಾತುಕತೆಯಲ್ಲಿದ್ದರು ಮತ್ತು ಜೇಮ್ಸ್ ಸಿನಿಮಾದ ಚಿತ್ರೀಕರಣ ಕೂಡ ನಡೆಯುತ್ತಿತ್ತು. ಹೀಗಾಗಿ ಅಪ್ಪು ಅವರೇ ರಿಷಬ್ ಶೆಟ್ಟಿ ಅವರಿಗೆ ನೀನೆ ಈ ಸಿನಿಮಾವನ್ನು ಮಾಡು ಎಂಬುದಾಗಿ ಹೇಳಿದ ಕಾರಣದಿಂದಲೇ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ.

Leave a Comment

error: Content is protected !!