ನಟ ವಿನೋದ್ ರಾಜ್ ಮನೆಯಲ್ಲಿ ಮದುವೆಯ ಸಂಭ್ರಮ

ಕನ್ನಡದ ಮೈಕಲ್ ಜಾಕ್ಸನ್ ಎಂದೆ ಖ್ಯಾತರಾಗಿದ್ದ ವಿನೋದ್ ರಾಜಕುಮಾರ್ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿ ಸಾಕಷ್ಟು ವರ್ಷಗಳೇ ಆಗಿ ಹೋಗಿವೆ. ಇದೀಗ ತಾಯಿ ಜೊತೆ ತಮ್ಮ ತೋಟದ ಮನೆಯಲ್ಲಿ ಕೃಷಿ ಕೆಲಸದಲ್ಲಿಯೇ ನಿರತರಾಗಿದ್ದಾರೆ ವಿನೋದ್ ರಾಜ್. ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮ ಇವರಿಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಅದೆಷ್ಟು ಜನರಿಗೆ ಸಹಾಯ ಹಸ್ತ ನೀಡಿದ್ದಾರೆ. ನಿಜಕ್ಕೂ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಹಲವರಿಗೆ ಮಾದರಿ ಅಂದರೆ ಅತಿಶಯೋಕ್ತಿಯಲ್ಲ.

ಇತ್ತೀಚಿಗೆ ವಿನೋದ್ ರಾಜ್ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಇಬ್ಬರು ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದರು ಇದೀಗ ಸಾಮಾಜಿಕ ಕಾರ್ಯಗಳನ್ನು ಮಾಡುವಂತಹ ಗಮನಹರಿಸಿದ್ದಾರೆ. ನಟ ವಿನೋದ್ ರಾಜ್ ಇತ್ತೀಚಿಗೆ ತಾಯಿ ಲೀಲಾವತಿ ಅಮ್ಮನ ಆಸೆಯಂತೆ ಸುತ್ತಲಿನ ಜನರಿಗಾಗಿ ಆಸ್ಪತ್ರೆಯನ್ನು ಕೂಡ ಕಟ್ಟಿಸಿಕೊಟ್ಟಿದ್ದಾರೆ.

ನಟ ವಿನೋದ್ ರಾಜಕುಮಾರ್ ಹಾಗೂ ಲೀಲಾವತಿ ಅವರು ಚೆನ್ನೈನಲ್ಲಿ ಇದ್ದ ತಮ್ಮ ಆಸ್ತಿಯನ್ನು ಮಾರಿ ಜನರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ವಿನೋದ್ ರಾಜ್ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ಕೂಡ ಅಷ್ಟೇ ಮಹತ್ವ ನೀಡುತ್ತಾರೆ ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಾರೆ. ಇದೀಗ ವಿನೋದ ರಾಜ್ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಕಳೆ ಕಟ್ಟಿದೆ.

ಹೌದು, ತಮ್ಮ ತೋಟದಲ್ಲಿ ಸಾಕಷ್ಟು ವರ್ಷ ಕೆಲಸ ಮಾಡುತ್ತಿದ್ದ ಅನ್ನಪೂರ್ಣ ಎನ್ನುವ ಯುವತಿಗೆ ವಿನೋದ್ ರಾಜ್ ಅವರು ಮದುವೆ ಮಾಡಿಸಿದ್ದಾರೆ ಪೊಲೀಸ್ ಇಲಾಖೆಯಲ್ಲಿ ಏಳು ವರ್ಷಗಳಿಂದ ಹೋಮ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಎನ್ನುವ ಯುವಕನ ಜೊತೆ ಅನ್ನಪೂರ್ಣ ಅವರ ವಿವಾಹವನ್ನು ಮಾಡಿಸಿಕೊಟ್ಟಿದ್ದಾರೆ. ಅನ್ನಪೂರ್ಣ ನಾಲ್ಕೈದು ವರ್ಷಗಳಿಂದ ವಿನೋದ್ ರಾಜ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದಳು.

Vinod raj marraige news
Vinod raj servant marraige

ಅನ್ನಪೂರ್ಣ ಹಾಗೂ ಪ್ರಕಾಶ್ ಅವರ ವಿವಾಹವನ್ನು ನೆಲಮಂಗಲದ ಪುರಾತನ ಗೂಬೆ ಕಲ್ಲಮ್ಮ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿಸಲಾಗಿದೆ. ವಧು ವರರ ಸಂಬಂಧಿಕರು ಸ್ನೇಹಿತರು ಸೇರಿದಂತೆ ನೂರಾರು ಜನ ಈ ಸರಳ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ವಿನೋದ್ ರಾಜ್ ಈ ಮದುವೆ ಮಾಡಿಸುವ ಮೂಲಕ ಮತ್ತೊಂದು ಉತ್ತಮ ಕಾರ್ಯ ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.

ದರ್ಶನ್ ಅವರನ್ನು ಅಪ್ಪು ಎಂದು ಕರೆಯುತ್ತಿದ್ದದ್ದು ಯಾರು? ಯಾಕೆ?

ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಇಬ್ಬರಿಗೂ ಅನಾರೋಗ್ಯ ಭಾದಿಸುತ್ತಿದೆ ಅದರಲ್ಲೂ ಲೀಲಾವತಿ ಅಮ್ಮ ಹೆಚ್ಚು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ ಇವರನ್ನ ನೋಡಿಕೊಳ್ಳುವುದಕ್ಕಾಗಿ ವಿನೋದ್ ರಾಜ್ ತಮ್ಮ ತೋಟದ ಮನೆಯಲ್ಲಿಯೇ ಇದ್ದಾರೆ. ಕನ್ನಡಿಗರ ಪ್ರೀತಿ ಅಭಿಮಾನ ನಮ್ಮನ್ನು ಈವರೆಗೆ ತಂದು ನಿಲ್ಲಿಸಿದೆ ಎಂದು ವಿನೋದ್ ರಾಜ್ ಸದಾ ಹೇಳಿಕೊಳ್ಳುತ್ತಾರೆ. ಪರೋಪಕಾರಕ್ಕಾಗಿ ತಮ್ಮ ಸ್ವಂತ ಆಸ್ತಿಯನ್ನು ಮಾರುವಂತ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಅವರ ಒಳ್ಳೆಯತನಕ್ಕೆ ತಲೆಬಾಗಲೇಬೇಕು.

Leave a Comment

error: Content is protected !!