ರಾಜಕಾರಣದಲ್ಲಿ ಸದ್ದು ಮಾಡುತ್ತಿರೋ ಉರಿಗೌಡ ನಂಜೇಗೌಡ ಸಿನಿಮಾ ಅತೀ ಶೀಘ್ರದಲ್ಲೇ! ನಟ ನಿರ್ದೇಶಕ ನಿರ್ಮಾಪಕ ಯಾರ್ ಗೊತ್ತಾ?

Kannada News ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಕೆಲವೊಂದು ವಾದ ವಿವಾದಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದು ಪಕ್ಷಗಳ ನಡುವೆ ಹಾಗೂ ರಾಜಕೀಯ ನಾಯಕರ ನಡುವೆ ಹೆಚ್ಚಾಗಿದೆ ಎಂದರು ಕೂಡ ತಪ್ಪಾಗಲಾರದು. ಅದರಲ್ಲೂ ಉರಿ ಗೌಡ ನಂಜೇಗೌಡ( Uri Gowda Nanje Gowda) ಎನ್ನುವ ಹೆಸರುಗಳು ಕೂಡ ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರ ನಡುವೆ ಹೆಚ್ಚಾಗಿ ಕೇಳಿಬರುತ್ತಿದೆ. ಅಷ್ಟಕ್ಕೂ ಇದು ಯಾರು ಇದರ ಹಿನ್ನೆಲೆ ಏನು ಎಂಬುದನ್ನು ತಿಳಿಯೋಣ ಬನ್ನಿ.

ಮಂಡ್ಯ ಮೈಸೂರು ವಲಯಗಳಲ್ಲಿ ಬಿಜೆಪಿ ಪಕ್ಷ ಟಿಪ್ಪುವನ್ನು(Tippu) ತಪ್ಪಿತಸ್ಥನನ್ನಾಗಿ ಮಾಡಿ ಆತನನ್ನು ಮುಗಿಸಿದ ಉರಿ ಗೌಡ ನಂಜೇಗೌಡ ಎನ್ನುವ ಪಾತ್ರಗಳನ್ನು ಈಗ ರಾಜಕೀಯ ವಲಯಕ್ಕೆ ಕರೆತಂದಿದ್ದು ಇದು ತೆನೆ ಹಾಗೂ ಕೈ ಪಾಳಯದಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿ ಮಾಡುವಂತೆ ಮಾಡಿದೆ. ಇನ್ನು ಇದರ ಲಾಭ ಎತ್ತುಕೊಂಡು ಬಿಜೆಪಿ ಪಕ್ಷದ ಮುನಿರತ್ನ(Muniratna) ರವರು ಇದನ್ನೇ ಸಿನಿಮಾ ಮಾಡಲು ಕೂಡ ಹೊರಟಿದ್ದಾರೆ.

ಉರಿ ಗೌಡ ನಂಜೇಗೌಡ ಎನ್ನುವ ಸಿನಿಮಾದ ಟೈಟಲ್ ಅನ್ನು ರಿಜಿಸ್ಟರ್ ಮಾಡಿರುವ ಮುನಿರತ್ನ(Muniratna) ಅವರು ಇದೆ ಮೇ 18ಕ್ಕೆ ಸಿನಿಮಾದ ಮುಹೂರ್ತವನ್ನು ಕೂಡ ಮಾಡಲು ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ಈ ಸಿನಿಮಾಗೆ ಕಥೆ ಹಾಗೂ ಸ್ಕ್ರೀನ್ ಪ್ಲೇ ಅನ್ನು ಕೂಡ ಬರೆಯಲಾಗಿದ್ದು ನಿರ್ದೇಶಕರನ್ನು ಕೂಡ ಫೈನಲೈಸ್ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಆರ್ ಎಸ್ ಗೌಡ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾಗೆ ಸಚಿವ ಅಶ್ವಥ್ ನಾರಾಯಣ್(Ashwath Narayan) ಹೇಳಿರುವ ಕಥೆಯನ್ನೇ ಚಿತ್ರಕಥೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಒಟ್ಟಾರೆಯಾಗಿ ಮಾಹಿತಿಗಳ ಪ್ರಕಾರ ಈ ಸಿನಿಮಾವನ್ನು ಗೌಡ ಸಮುದಾಯದ ಮತವನ್ನು ಸೆಳೆಯಲೆಂದೆ ಮಾಡುತ್ತಿದ್ದಾರೆ ಎಂಬುದಾಗಿ ಎಲ್ಲಾ ಕಡೆ ವಿರೋಧ ಪಕ್ಷಗಳು ಹರಡುತ್ತಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ.

Leave a Comment

error: Content is protected !!