ಡಿ ವೋರ್ಸ್ ಕೊಡೋಕೆ ಸಿದ್ಧವಾದ್ರಾ ನಟ ತಲಪತಿ ವಿಜಯ್? ವಿಜಯ್ ದಾಂಪತ್ಯ ಹಾಳಾಗಲು ಕಾರಣವಾದ ನಟಿ ಯಾರು?

Actor Thalapathy Vijay Divorce: ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ತಲಪತಿ ವಿಜಯ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಲಿವುಡ್(Kollywood) ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲ ಪಂಕ್ತಿಯಲ್ಲಿ ಕಾಣಿಸುತ್ತಾರೆ. ಇನ್ನು ಇವರ ದಾಂಪತ್ಯ ಜೀವನದ ಸ್ಟೋರಿಯೂ ಕೂಡ ಸಾಕಷ್ಟು ವಿಶೇಷವಾಗಿದೆ. ಬನ್ನಿ ಹಾಗಿದ್ದರೆ ಮೊದಲಿಗೆ ಇವರ ದಾಂಪತ್ಯ ಜೀವನದ ಕುರಿತಂತೆ ತಿಳಿಯೋಣ.

Actor Thalapathy Vijay Divorce

(Thalapathy vijay) ತಲಪತಿ ವಿಜಯ್ ಸಿನಿಮಾ (Cinema) ಕರಿಯರ್ ನ ಆರಂಭದಲ್ಲಿ ಅವರ ಪತ್ನಿ ಆಗಿರುವ ಸಂಗೀತ ಅವರು ವಿಜಯ್ ಅವರ ದೊಡ್ಡ ಅಭಿಮಾನಿ ಆಗಿದ್ದರು. ಅವರು ಅಮೆರಿಕಾದಲ್ಲಿ ಸೆಟಲ್(Settle) ಆಗಿದ್ದರು. ಆದರೆ ಕೇವಲ ವಿಜಯ್ ಅವರನ್ನು ನೋಡುವ ಸಲುವಾಗಿಯೇ ಭಾರತದಲ್ಲಿ ಅವರ ಚಿತ್ರೀಕರಣ ನಡೆಯುತ್ತಿದ್ದ ಸೆಟ್ ಗೆ ನೋಡಲು ಬರುತ್ತಿದ್ದರು.

ಹೀಗೆ ಹಲವಾರು ಬಾರಿ ವಿಜಯ್ ಅವರನ್ನು ನೋಡಲು ಬರುತ್ತಲೇ ಇರುತ್ತಾರೆ ಆದರೆ ಅವರನ್ನು ಭೇಟಿಯಾಗುವ ಅವಕಾಶ ಸಂಗೀತ ಅವರಿಗೆ ಸಿಗುವುದಿಲ್ಲ. ನಂತರ ಒಂದು ದಿನ ವಿಜಯ್ ಸಂಗೀತ ಅವರನ್ನು ಗಮನಿಸಿ ಮಾತನಾಡಿಸಿ ಇವರಿಬ್ಬರ ನಡುವೆ ಪರಿಚಯ ಆರಂಭವಾಗುತ್ತದೆ. ವಿಜಯ್ ಅವರು ಸಂಗೀತ ಅವರನ್ನು ತಮ್ಮ ಮನೆಯವರಿಗೆ ಕೂಡ ಪರಿಚಯ ಮಾಡಿಸುತ್ತಾರೆ ಇವರಿಬ್ಬರ ನಡುವೆ ಸ್ನೇಹದಿಂದ ಪ್ರೀತಿಯು ಕೂಡಲೇ ಆರಂಭವಾಗುತ್ತದೆ.

Actor Thalapathy Vijay Divorce
Actor Thalapathy Vijay Divorce

ನಂತರ 1999ರಲ್ಲಿ ಇವರಿಬ್ಬರು ಮದುವೆ ಆಗುತ್ತಾರೆ. ಅಭಿಮಾನಿ ಒಬ್ಬರನ್ನು ವಿಜಯ್ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಈ ಮದುವೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಮಾಡುತ್ತದೆ. ಆದರೆ 2005ರ ಸಮೀಪದಲ್ಲಿ ನಟಿ ತ್ರಿಶ ಅವರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ವಿಜಯ್ ಕಾಣಿಸಿಕೊಂಡಿದ್ದರು ಎಂಬ ಕಾರಣಕ್ಕಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬುದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಆ ಸಂದರ್ಭದಲ್ಲಿ ಇವರ ಸಂಸಾರ ಕೊಂಚಮಟ್ಟಿಗೆ ಏರುಪೇರನ್ನು ಕಂಡಿತ್ತು. ನಂತರ ಇಬ್ಬರೂ ಕೂಡ ನಾವಿಬ್ಬರು ಒಳ್ಳೆಯ ಸ್ನೇಹಿತರಷ್ಟೇ(Friends) ಅದನ್ನು ಬಿಟ್ಟರೆ ನಮ್ಮ ನಡುವೆ ಏನು ಇಲ್ಲ ಎಂಬುದಾಗಿ ಈ ವಿಚಾರಕ್ಕೆ ಪರದೆಯನ್ನು ಎಳೆಯುತ್ತಾರೆ. ನಂತರ ಇವರ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿತ್ತು.

ಆದರೆ ಈಗ ಇವರಿಬ್ಬರ ನಡುವೆ ವಿವಾಹ ವಿಚ್ಛೇದನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ ಇದಕ್ಕೆ ಒಂದು ಕಾರಣವೂ ಕೂಡ ಇದೆ. ಯಾವುದೇ ಸಮಾರಂಭಕ್ಕೂ ಕೂಡ ವಿಜಯ್ ಹಾಗೂ ಸಂಗೀತ ದಂಪತಿಗಳು ಇಬ್ಬರು ಕೂಡ ಜೊತೆಯಾಗಿಯೇ ಹೋಗುತ್ತಿದ್ದರು. ಆದರೆ ಕಳೆದ ಕೆಲವು ಸಮಯಗಳಿಂದ ಕೇವಲ ವಿಜಯ್ ಅವರು ಮಾತ್ರ ಸಿನಿಮಾ ಹಾಗೂ ಖಾಸಗಿ ಸಮಾರಂಭಗಳಿಗೆ(Functions) ಹೋಗುತ್ತಿದ್ದಾರೆ ಅಲ್ಲಿ ಸಂಗೀತ ಅವರು ಕಾಣಿಸಿಕೊಳ್ಳುತ್ತಿಲ್ಲ ಎಂಬುದಾಗಿ ಸುದ್ದಿ ಕೇಳಿ ಬರುತ್ತಿದೆ.

ಇದನೊಮ್ಮೆ ಓದಿ..Bigg Boss Season9 Kannada: ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಆರ್ಯವರ್ಧನ ಗುರೂಜಿ ಅವರ ಜೀವನವೇ ಕಷ್ಟವಾಗಿದೆ ಅಂತೆ?

ಈಗಲೂ ಕೂಡ ಈ ವಿಚಾರಕ್ಕೆ ನಟಿ ತ್ರಿಶಾ ಅವರೇ ಕಾರಣ ಎಂಬುದಾಗಿ ಕೇಳಿ ಬರುತ್ತಿದೆ. ಯಾಕೆಂದರೆ ನಟಿ ತ್ರಿಶಾ ಅವರ ಜೊತೆಗೆ ಮತ್ತೆ ತಲಪತಿ ವಿಜಯ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇದಕ್ಕಾಗಿ ಸಂಗೀತ ಹಾಗೂ ವಿಜಯ್ ಅವರ ನಡುವೆ ಮತ್ತೆ ಅಸಮಾಧಾನಗಳು ಮೂಡಿಬಂದಿವೆ ಎಂಬುದಾಗಿ ಕೇಳಿ ಬರುತ್ತಿದೆ. ಈ ಎಲ್ಲಾ ಸುದ್ದಿಗಳು ಸುಳ್ಳಾಗಿ ವಿಜಯ್ ಹಾಗೂ ಸಂಗೀತ ದಂಪತಿಗಳು ಮತ್ತೆ ಮೊದಲಿನಂತಾಗಿ ಸುಖವಾಗಿ ಇರಲಿ ಎಂಬುದಾಗಿ ಅಭಿಮಾನಿಗಳು(Fans) ಆಶಿಸುತ್ತಿದ್ದಾರೆ.

Leave a Comment

error: Content is protected !!