Challenging Star Darshan ದರ್ಶನ್ ಗೆ ನೇರವಾಗಿ ಟೀಕೆ ಮಾಡಿದ ಖಾಸಗಿ ಸುದ್ದಿ ವಾಹಿನಿ: ನಂತರ ಆಗಿದ್ದೇನು?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಟನೆಯ ಕ್ರಾಂತಿ(Kranti) ಸಿನಿಮಾಗೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವುದೇ ಮಾಧ್ಯಮಗಳು ಕೂಡ ಪ್ರಚಾರವನ್ನು ನೀಡಿರಲಿಲ್ಲ. ಹೇಗಿದ್ದರೂ ಕೂಡ ದರ್ಶನ್ ಅವರ ಅಭಿಮಾನಿಗಳೇ ಸಿನಿಮಾ ಪ್ರಚಾರವನ್ನು ತಾವೇ ಖುದ್ದಾಗಿ ಎಲ್ಲರೂ ಮೆಚ್ಚುವ ಹಾಗೆ ಹಾಗೂ ಎಲ್ಲಾ ಕಡೆ ಹರಡುವಂತೆ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮದವರಿಗೆ ಬೈದಿದ್ದಾರೆ ಎನ್ನುವ ಆಡಿಯೋ ಲೀಕ್ ಆದ ನಂತರ ದರ್ಶನ್ ಹಾಗೂ ಅವರ ಸಿನಿಮಾಗಳಿಗೆ ಯಾವುದೇ ಪ್ರಚಾರ ನೀಡಬಾರದು ಎನ್ನುವುದಾಗಿ ಎಲ್ಲಾ ಮಾಧ್ಯಮಗಳು ನಿರ್ಧಾರವನ್ನು ಮಾಡಿದ್ದರು.

ಹೀಗಿದ್ದರೂ ಕೂಡ ಕ್ರಾಂತಿ ಸಿನಿಮಾದ ಯಾವುದೇ ಪ್ರಚಾರಗಳು ಕಡಿಮೆ ಆಗಿರಲಿಲ್ಲ. ಇದೇ ಜನವರಿ 26ರಂದು ಬಿಡುಗಡೆ ಆಗಿರುವ ಕ್ರಾಂತಿ(Kranti) ಸಿನಿಮಾ ಈಗಾಗಲೇ ನಿಮಗೆ ಗೊತ್ತಿರಬಹುದು ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಅಧಿಕ ಕಲೆಕ್ಷನ್ ಮಾಡಿ ಮಿಂಚುತ್ತಿದೆ. ಸಿನಿಮಾದ ಬಗ್ಗೆ ಆಗದವರು ಎಷ್ಟೇ ಪ್ರಚಾರ ಮಾಡಿದರು ಕೂಡ ಸಿನಿಮಾವನ್ನು ನೋಡುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇದರ ನಡುವಲ್ಲಿಯೇ ದರ್ಶನ್ ಅವರ ಅಭಿಮಾನಿಗಳ ಮನಸ್ಸಿಗೆ ಬೇಸರ ಉಂಟಾಗುವಂತಹ ಒಂದು ವಿಚಾರವನ್ನು ಖಾಸಗಿ ವಾಹಿನಿಯ ಸಿಬ್ಬಂದಿಗಳು ಮಾಡಿದ್ದಾರೆ.

Dboss Darshan

ಹೌದು ಮಿತ್ರರೇ ಸುವರ್ಣ ವಾಹಿನಿಯ(Suvarna News) ಕುರಿತಂತೆ ನಾವು ಮಾತನಾಡಲು ಹೊರಟಿರುವುದು. ಸುವರ್ಣ ನ್ಯೂಸ್ ಸಿಬ್ಬಂದಿಗಳ ಸೀಕ್ರೆಟ್ ಗಿಫ್ಟ್ ಓಪನ್ ಮಾಡುವ ವಿಡಿಯೋದಲ್ಲಿ ಬಾಕ್ಸ್ ನಲ್ಲಿ ಏನಿದೆ ಎಂದು ಕೇಳಿದಾಗ ಕೆಲವರು ಕ್ರಾಂತಿ(Kranti) ಸಿನಿಮಾದ ಟಿಕೆಟ್ ಇರಬಹುದು ಎಂದರೆ ಇನ್ನೂ ಕೆಲವರು ದರ್ಶನ್(Darshan) ಅವರ ತಲೆ ಇರಬಹುದು ಎಂಬುದಾಗಿ ಹೀನಾಯವಾಗಿ ಹೇಳುತ್ತಾರೆ.

ಈ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಸುವರ್ಣ ವಾಹಿನಿಯ ಎದುರುಗಡೆ ಬಂದು ದರ್ಶನ್ ಅಭಿಮಾನಿಗಳು(Darshan Fans) ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ಮಾಡಿದ್ದರು. ಇದರ ಬಿಸಿ ತಾಗುತ್ತಿದ್ದ ಹಾಗೆ ಸುವರ್ಣ ನ್ಯೂಸ್ ನ ಹಿರಿಯ ಸಂಪಾದಕರು ಈ ವಿಡಿಯೋ ಕುರಿತಂತೆ ದರ್ಶನ್ ಹಾಗೂ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಹೀಗಿದ್ದರೂ ಕೂಡ ಈ ವಿಚಾರ ಅಷ್ಟೊಂದು ಸುಲಭವಾಗಿ ಕ್ಷಮಿಸಿ ಬಿಡುವಂಥದ್ದಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಯಾವ ರೀತಿಯ ಘಟನೆಗಳು ನಡೆಯಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!